Home / ಕವನ / ಕವಿತೆ / ಮಂಗಳ

ಮಂಗಳ

ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು
ತಿಳಿಯದಿದ್ದುದು ಹೇಗೆ ಮಾರಾಯ?
ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ
ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ!

ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು
ಮುರಿದುಬಿದ್ದಿತು ಈಗ ಲೊಡ್ಡು ಹಲಗೆ,
ಚಂದ್ರಮಾಯೆಯು ಕವಿದ ಸ್ವಪ್ನನಗರಿಯಲಿ
ಕರ್ಪೂರ ಭವನಕ್ಕಿದ್ದ ಪರವಾನಿಗೆ!

ಅಲ್ಲಿ ಬಂದಿದ್ದಾಗ ಏನೆಲ್ಲ ತೋರಿಸಿದೆ
ಮಂಜುಮಂಜಾಗಿದ್ದ ಮಂತ್ರಲೋಕ!
ಕನಸಿನಲ್ಲಷ್ಟೆ ಬಿಗಿದಪ್ಪಿ ಮುದ್ದಿಟ್ಟರೂ
ವಂಶ ಬೆಳೆಸುವ ಹೆಣ್ಣ ಘನ ಕಾಯಕ!

ಮುಟ್ಟಿದರೆ ಸಾಕು ಥಟ್ಟನೆ ತೆರೆದು ಬಾಗಿಲು
ರಂಭೆ ಊರ್ವಶಿ ಮೇನಕೆಯರ ಸಾಲು;
ಬೀದಿ ಹೆಣ್ಣೂ ಸಿಗದೆ ಉರಿ ಕೆರಳುತಿದ್ದಂಥ
ತಿರುಕ ಬದುಕಿಗೆ ಗಾಳಿ, ಜೇನು ಹಾಲು!

ಬೆಳುದಿಂಗಳಲಿ ಬರೆದ ಗಾಳಿಮೈ ಬಾಲೆಯರ
ಬಾಳೆತೋಟಕ್ಕೆ ನಾ ಲಗ್ಗೆ ಹೊಡೆದೆ;
ತೊಣಚಿ ಹೊಕ್ಕಿದ ಗೂಳಿ ಸೊಕ್ಕಿ ಸೊಟ್ಟಗೆ ಓಡಿ
ಬಟ್ಟೆ ತುಂಬಾ ಕೆಟ ಚಿತ್ರ ಬರೆದೆ.

ಮದುವೆಯಾಗಲು ಬಯಸಿ ಸಿಗದ ಚೆಲುವೆಯರನ್ನ
ತಂಗಿ ಎಂದಾದರೂ ಕರೆವ ಕಲೆಯ,
ಕಲಿಸಿದೆಯೊ ಕೀಟಲೆಗೆ ಮೈಮುಟ್ಚಿ ಕಣ್ಮುಚ್ಚಿ
ಜೂಟಾಟಕೆಳೆವ ಆದರ್ಶರತಿಯ!

ಎಲ್ಲಿ ದೊರೆತಾರು ಬಿಡು ನಿನ್ನಂಥ ಕಲೆಗಾರ
ಗೀರ್ವಾಣರಾಗದಲ್ಲೆ ಎಲ್ಲ ವ್ಯವಹಾರ;
ಗುಗ್ಗು ಭೋಳೇರಾಮರನ್ನು ಹಳ್ಳಕ್ಕೆ ತಳ್ಳಿ
ಆಯ್ತು ನಿನ್ನಂಗಡಿಗೆ ಪೂರ್ತಿವ್ಯಾಪಾರ!

ಸಂಕ ಮುರಿದಿದೆ, ನಡುವೆ ಗಡಿ ಎದ್ದಿದೆ,
ನಮ್ಮ ವ್ಯವಹಾರಕ್ಕೆ ಕೊನೆ ಬಿದ್ದಿದೆ;
ದಾಕ್ಷಿಣ್ಯ ದಡ್ಡತನ ಹೆಣೆದ ಸಂಬಂಧಕ್ಕೆ
ಹಳೆರಾಗದಲ್ಲಿ ಮಂಗಳ ಹಾಡುವೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...