Home / ಕವನ / ಅನುವಾದ / ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ
ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು
ನಮ್ಮ ಮಕ್ಕಳೊಂದಿಗೆ
ಕಾಡಿಗೆ ಹೋಗಿ ಆಯ್ದಿದ್ದೇವೆ.
ವ್ಯರ್ಥ ಸುರಿದ ರಕ್ತದ ವಾಸನೆಯಂಥ
ವಾಸನೆ ಇದ್ದ ಕಾಡುಹೂಗಳ ಹೆಸರು ಕಲಿತಿದ್ದೇವೆ.
ಪುಟ್ಟಮೈಗಳ ಮೇಲೆ ದೊಡ್ಡಪ್ರ್‍ಈತಿ ಹೊರಿಸಿದ್ದೇವೆ.
ದುರ್ಬೀನು ಹಿಡಿದ ದಿವ್ಯ ಹುಚ್ಚನ ಕಣ್ಣಿಗೆ
ಹಿಗ್ಗಿಮತ್ತೆ ಕುಗ್ಗಿಕಂಡಿದ್ದೇವೆ.
ಬೆಳಕಿನ ಮಕ್ಕಳೊಡನೆ ಕತ್ತಲ ಮಕ್ಕಳು ಯುದ್ಧಮಾಡಿದಾಗ
ನೆಮ್ಮದಿಯ ಲೇಪಿಸುವ ಒಳ್ಳೆಯ ಕತ್ತಲನ್ನು ಪ್ರೀತಿಸಿ
ನೋವು ತರುವ ಬೆಳಕನ್ನು ದ್ವೇಷಿಸಿದ್ದೇವೆ.
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಮಕ್ಕಳನ್ನು ನಮ್ಮ ದೇಶಕ್ಕಿಂತ ಹೆಚ್ಚು
ಪ್ರೀತಿಸಿದ್ದೇವೆ. ನೆಲದಲ್ಲಿ ಬಾವಿ ತೋಡಿದ್ದೇವೆ.
ಈಗ ಆಕಾಶದಲ್ಲಿ
ಕೊನೆ ಇಲ್ಲದ ಮೊದಲಿಲ್ಲದ
ಬಾವಿಗಳೆಷ್ಟೊಂದನ್ನೂ ತೋಡುತಿದ್ದೇವೆ.
ನಮ್ಮ ಕರ್‍ತವ್ಯ ನಾವು ಮಾಡಿದ್ದೇವೆ.

‘ನೀವು ನೆನಪಿಟ್ಟುಕೊಳ್ಳತಕ್ಕದ್ದು’
ಅನ್ನುವ ಮಾತು
‘ನೀವು ಮರೆಯುತ್ತೀರಿ’
ಎಂದು ಬದಲಾಗಿದೆ –
ರೂಟು ಬದಲಾದ ಬಸ್ಸಿನ
ಟೈಂಟೇಬಲ್ಲೂ ಬದಲಾಗುವ ಹಾಗೆ,
ಸಿನೊಗಾಗ್ನಲ್ಲಿ, ಋತು ಬದಲಾದಂತೆ
‘ಇಬ್ಬನಿ ಮತ್ತು ಮಳೆ’
ಎಂಬ ಫಲಕ
‘ಮಳೆಯನ್ನು ತರುವವನು’
ಎಂದು ಬದಲಾಗುವ ಹಾಗೆ
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.

ನಮ್ಮ ಬದುಕನ್ನು ಅಚ್ಚುಕಟ್ಟು ಮಾಡಿದ್ದೇವೆ…
ಹೂಹಾಸು, ಮೆತ್ತನೆ ಲಾನು, ಹಿತವಾದ ನೆರಳು.
ಹಸಿರು ತುಂಬಿದ ಕಾಲು ಹಾದಿ ಇವೆಲ್ಲ
ಹುಚ್ಚಾಸ್ಪತ್ರೆಯ ಮುಂದೆ ಇರುವ ಹಾಗೆ.
ಹತಾಶೆ ಜೆನ್ನಾಗಿ ಪಳಗಿ ನಮಗೆ ಶಾಂತಿ ತಂದಿದೆ.
ಆಶೆಗಳು ಮಾತ್ರ ಉಳಿದಿವೆ.
ರಾತ್ರಿಗಳನ್ನು ಛಿದ್ರಮಾಡಿ, ಹಗಲನ್ನು ಚಿಂದಿಮಾಡುವ ಅದಮ್ಯ ಆಶೆಗಳು.
ಸಿನಿಮಾ ಥಿಯೇಟರಿನೊಳಗೆ ಹೋಗುತ್ತಿರುವ ಜನ
ಮುಖ ಕೆಂಪಾಗಿ, ಕಣ್ಣು‌ಊದಿ, ಅಥವಾ ಬೇಸತು, ಅಥವಾ
ತುಟಿಯಲ್ಲಿ ಕಣ್ಣಲ್ಲಿ ನಗೆ ತುಂಬಿ ಹೊರಬರುತ್ತಿರುವ ಜನರನ್ನು
ನೋಡಿದರೂ ಗಮನಿಸದೆ, ಹಿಂದೆ ತಿರುಗದೆ,
ಕತಲು ಬೆಳಕು ಕತ್ತಲುಗಳಿಗೆ ಕಾಲಿಡುವ ಹಾಗೆ,
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ.
*****
ಮೂಲ: ಯೆಹೂದಾ ಅಮಿಛಾಯ್

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...