Home / ಕವನ / ಕವಿತೆ / ಸೂರ್‍ಯ

ಸೂರ್‍ಯ

ಈ ಸಂಜೆ ಕಂತುವ ಸೂರ್‍ಯ
ಯಾಕೋ ಮಂಕಾಗಿ
ಅವನ ಬಣ್ಣವೆ ಜಿಗುಟಾಗಿ…
ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ
ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ
ಗೂಡಿಗೆ ಮರಳುತ್ತಿದ್ದವು.

ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ
ಒರಲಿ ಉರುಳಾಡಿ ಶಬ್ಧಗಳೇ
ಸರಿದು ಹೋಗಿ ಎಲ್ಲೆಲ್ಲೂ ಮೌನ
ಓಣಿ ಎರೆದು ಮಲಗಿಸಿ ಕಂದನಂತೆ
ತೆಪ್ಪಗೆ ಮಲಗಿತ್ತು ಮಂಕಾದ ಸೂರ್ಯ
ಬೇರೆ ನಾಡಿಗೆ ಬೆಳಕು ಮಾರಾಟ ಮಾಡಲು.
ಹೋದ.

ಮರದಲ್ಲಿ ಅರಳದ ಹೂವಿನ
ಮೊಗ್ಗುಗಳಿಗೆ ಮೌನದ ಕತ್ತಲು
ಕಚುಗುಳಿ ಇಟ್ಟು ಅನುರಣಿಸಿದಾಗ
ಕೈ ಕಾಲು ಮಡಚಿ ಮಲಗಿದ ಕತ್ತಲೆ
ಕೋಣೆ ತುಂಬಾ ಕಂತಿದ ಸೂರ್ಯ
ಹಳದಿ ಬಣ್ಣ, ಕಣ್ಣು ಮುಚ್ಚಾಲೆಯಾಟದಲಿ
ಗೆದ್ದವರು ಯಾರೋ ಸೋತವರ ಯಾರೋ
ಸಣ್ಣ ಬೀಜಗಳ ಮರ ಮಾಡುವ ಸೂರ್ಯ
ಮತ್ತೆ ರಾಜಾರೋಷವಾಗಿ ಉದಯಿಸಿದ.

ಹೊಸ ಪಲ್ಲಕ್ಕಿ ಸಾಗಿದ ಮಾರ್ಗ ಗುಂಟ
ಮತ್ತೆ ಗೌಜುಗದ್ದಲ, ಒಬ್ಬರ ಮೇಲೊಂದು
ಮಗದೊಂದು ಪಾದದ ಗುರುತುಗಳು
ಸಾಗಿ ತೇಲಿ ಹೋದ. ಇರುವೆಗಳ ಸಾಲು.
ದಾರಿ ಬದಿಯ ಗಿಡ ಟೊಂಗೆಗಳಿಂದ ಇಣುಕಿದ
ಸೂರ್ಯ ಸೂಸಿ ರಾಗ ಧ್ವನಿಗಳು ಚೈತನ್ಯಗಳು

ಕಂತುವ ಸೂರ್ಯ ಹುಟ್ಟುವ ಸೂರ್ಯ
ನಮ್ಮ ನಿಮ್ಮಲ್ಲಿ ಏನು ಮಜಾ ಹುಟ್ಟಿಸಿದ್ದಾನೆ.
ವಿಸ್ಮಯ ರಂಗುಗಳಿಗೆ ಬೆಪ್ಪಾದ ಜನಪದ
ಬದುಕು ಕವಿತೆಗಳಲ್ಲಿ ಅವನನ್ನು ಹಣಿದಿದ್ದೇ
ಹಣೆದಿದ್ದು ಮತ್ತೆ ಎಲ್ಲಾ ಜೀವದ
ಉಸಿರಾದುದಕ್ಕೆ ಚಿಗುರಿ ಚಿಮ್ಮಿದಕ್ಕೆ
ಪೂರ್ಣ ಅರಳಿದ ಹೂ, ಕಳಿತ ಹಣ್ಣು
ಮಾಗಿದ ಎಲೆ ಸೋಗೆಯ ಮನೆ, ಆಳದ
ಬೇರು ಎಲ್ಲವೂ ಅವನಾಗಿದ್ದು ವಿಸ್ಮಯ ತಾಯ್ಗಂಡ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...