Home / ಕವನ / ಕವಿತೆ / ಸೂರ್‍ಯ

ಸೂರ್‍ಯ

ಈ ಸಂಜೆ ಕಂತುವ ಸೂರ್‍ಯ
ಯಾಕೋ ಮಂಕಾಗಿ
ಅವನ ಬಣ್ಣವೆ ಜಿಗುಟಾಗಿ…
ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ
ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ
ಗೂಡಿಗೆ ಮರಳುತ್ತಿದ್ದವು.

ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ
ಒರಲಿ ಉರುಳಾಡಿ ಶಬ್ಧಗಳೇ
ಸರಿದು ಹೋಗಿ ಎಲ್ಲೆಲ್ಲೂ ಮೌನ
ಓಣಿ ಎರೆದು ಮಲಗಿಸಿ ಕಂದನಂತೆ
ತೆಪ್ಪಗೆ ಮಲಗಿತ್ತು ಮಂಕಾದ ಸೂರ್ಯ
ಬೇರೆ ನಾಡಿಗೆ ಬೆಳಕು ಮಾರಾಟ ಮಾಡಲು.
ಹೋದ.

ಮರದಲ್ಲಿ ಅರಳದ ಹೂವಿನ
ಮೊಗ್ಗುಗಳಿಗೆ ಮೌನದ ಕತ್ತಲು
ಕಚುಗುಳಿ ಇಟ್ಟು ಅನುರಣಿಸಿದಾಗ
ಕೈ ಕಾಲು ಮಡಚಿ ಮಲಗಿದ ಕತ್ತಲೆ
ಕೋಣೆ ತುಂಬಾ ಕಂತಿದ ಸೂರ್ಯ
ಹಳದಿ ಬಣ್ಣ, ಕಣ್ಣು ಮುಚ್ಚಾಲೆಯಾಟದಲಿ
ಗೆದ್ದವರು ಯಾರೋ ಸೋತವರ ಯಾರೋ
ಸಣ್ಣ ಬೀಜಗಳ ಮರ ಮಾಡುವ ಸೂರ್ಯ
ಮತ್ತೆ ರಾಜಾರೋಷವಾಗಿ ಉದಯಿಸಿದ.

ಹೊಸ ಪಲ್ಲಕ್ಕಿ ಸಾಗಿದ ಮಾರ್ಗ ಗುಂಟ
ಮತ್ತೆ ಗೌಜುಗದ್ದಲ, ಒಬ್ಬರ ಮೇಲೊಂದು
ಮಗದೊಂದು ಪಾದದ ಗುರುತುಗಳು
ಸಾಗಿ ತೇಲಿ ಹೋದ. ಇರುವೆಗಳ ಸಾಲು.
ದಾರಿ ಬದಿಯ ಗಿಡ ಟೊಂಗೆಗಳಿಂದ ಇಣುಕಿದ
ಸೂರ್ಯ ಸೂಸಿ ರಾಗ ಧ್ವನಿಗಳು ಚೈತನ್ಯಗಳು

ಕಂತುವ ಸೂರ್ಯ ಹುಟ್ಟುವ ಸೂರ್ಯ
ನಮ್ಮ ನಿಮ್ಮಲ್ಲಿ ಏನು ಮಜಾ ಹುಟ್ಟಿಸಿದ್ದಾನೆ.
ವಿಸ್ಮಯ ರಂಗುಗಳಿಗೆ ಬೆಪ್ಪಾದ ಜನಪದ
ಬದುಕು ಕವಿತೆಗಳಲ್ಲಿ ಅವನನ್ನು ಹಣಿದಿದ್ದೇ
ಹಣೆದಿದ್ದು ಮತ್ತೆ ಎಲ್ಲಾ ಜೀವದ
ಉಸಿರಾದುದಕ್ಕೆ ಚಿಗುರಿ ಚಿಮ್ಮಿದಕ್ಕೆ
ಪೂರ್ಣ ಅರಳಿದ ಹೂ, ಕಳಿತ ಹಣ್ಣು
ಮಾಗಿದ ಎಲೆ ಸೋಗೆಯ ಮನೆ, ಆಳದ
ಬೇರು ಎಲ್ಲವೂ ಅವನಾಗಿದ್ದು ವಿಸ್ಮಯ ತಾಯ್ಗಂಡ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...