Home / ಕವನ / ಕವಿತೆ / ಭೂಪಾರದೊಳಗೆ ಮದೀನಶಹರದೊಳು

ಭೂಪಾರದೊಳಗೆ ಮದೀನಶಹರದೊಳು

ಭೂಪಾರದೊಳಗೆ ಮದೀನಶಹರದೊಳು
ವ್ಯಾಪಾರ ಮಾಡುವಾಗೀನ ಗಾಡಿಯೋ          ||ಪ||

ಕೂಪದೊಳು ಹರಿದಾಡುತಿಹ ಜಲ
ವ್ಯಾಪಿಸಿತು ಮುದ್ದಿನ ಸಲಾಕೆಯು
ರೂಪ ಬೆಂಕಿಯ ಪುಟವಗೊಳ್ಳುತ
ತಾಪದಿಂ ಸರಿಸ್ಯಾಡುತಿಹುದೋ                 ||ಆ.ಪ.||

ಸಧ್ಯಕ್ಕೆ ಕಾಶೀಮಸಾಹೇಬರ ಸಮರದಿ
ಮದ್ದು ಹೇರಿಸುವ ಆಗೀನ ಗಾಡಿಯೋ
ಚೋದ್ಯವಾಯಿತು ಚಮತ್ಕಾರದಿ
ಎದ್ದು ತಾನೇ ತಾನೇ ಬರುವುದು
ಗದ್ದಲದಿ ಸಾಗುವದು ಆದರೊಳು
ಇದ್ದಲಿಯ ಮಸಿಬಿದ್ದು ಬಯಲದಿ   ||೧||

ಅಬ್ಬರದಿಂದ ಮಕಾನದ ಹೊಲಕೆಲ್ಲ
ಗೊಬ್ಬರ ಹೇರುವ ಅಗೀನ ಗಾಡಿಯೋ
ಸಬ್ಬಯಲಿನೊಳು ಸರಸಿ ಬರುವಾಗ
ನಿಬ್ಬಯಲ ನಿಜತತ್ವ ಮಾಗ೯ದಿ
ಕೊಬ್ಬಿಕೊಂಡಿಹ ಕಮಲ ಚಕ್ರದಿ
ಗಬ್ಬಿನೊಳು ಗಮಕದಿ ಬರುವದೋ    ||೨||

ಕರ್ಬಲದೊಳಗೆಲ್ಲ ಕಟಗಿ ಹೊತ್ತು ಹಾಕಿ
ಉಬ್ಬೇರಿ ಬರುವ ಅಗೀನ ಗಾಡಿಯೋ
ಆರ್ಭಟಿಸಿ ಜಲವಾಯು ಸೂಸುತ
ಪೆರ್ಬುಲಿಯ ತೆರದಿಂದ ಒದರುತ
ಆಬ್ಬರದಿ ಹರದಾಡುವದು ಬಲು
ಹಬ್ಬಿಕೊಂಡಿತು ಹಲವು ಲೋಕದಿ     ||೩||

ಕ್ಷೋಣಿಪರಾಜನ ಶಹಾನ ದೊರಗಳ
ಠಾಣಿದೊಳಗಿರುವ ಅಗೀನ ಗಾಡಿಯೋ
ಪಾಣಿ ಅಲಗು ಸಮಸ್ತ ಆಯುಧ
ಕ್ಷೀಣವಿಲ್ಲದೆ ತುಂಬ ತವಕದಿ
ಬಾಣ ಬಿಲ್ಲುಗಳಿಡಿಸಿ ಬೇಗನೆ
ರಾಣಿ ಸರಕಾರ ಸದರಿನೊಳು           ||೪||

ಧರೆಯೊಳು ದಕ್ಷಿಣ ದೇಶದೊಳಗೆಲ್ಲ
ಅರಳಿ ಹೇರಿಸುವ ಅಗೀನ ಗಾಡಿಯೋ
ಸರಸದಿಂ ವಿಸ್ತರಿಸಿ ಪೇಳುವೆ
ವರ ಶಿಶುನಾಳಧೀಶನಾಜ್ಞೆಯ
ಮೆರೆಸಿದರು ಇಂಗ್ಲೀಷದೊರೆಗಳು
ಸರ್ವರಿಗೆ ಆಶ್ಚರ್ಯವಾಯಿತು         ||೫||

*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...