Home / ಲೇಖನ / ಭಾಷೆ / ‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

ಕಪ್ರೋಸಂ ಎಂದರೇನು? ಯಾವುದೇ ಕನ್ನಡ ನಿಘಂಟಿನಲ್ಲೂ ಕಾಣಿಸದ ಒಂದೇ ಒಂದು ಶುದ್ಧ ಕನ್ನಡ ಪದ. ಅದು “ಕನ್ನಡಿಗರ ಉನ್ನತ ಸಾಧನೆಗಾಗಿ ಪ್ರೋತ್ಸಾಹ ಮತ್ತು ಸಂಶೋಧನ ಕೇಂದ್ರ” ಎಂಬುದರ ಸಂಕ್ಷಿಪ್ತರೂಪ.

ಇಂದಿನ ಕನ್ನಡ ಯುವಕರು ತಮ್ಮ ಪದವಿ ಮತ್ತು ಡಿಪ್ಲೋಮಾ ಶಿಕ್ಷಣವನ್ನು ಮುಗಿಸಿದ ಮೇಲೆ ತತ್ಷಣವೇ ಒಂದು ನಿಷ್ಫಲಪರಿಸರವನ್ನು ಪ್ರವೇಶಿಸುವಂತಾಗುತ್ತದೆ. ನೌಕರಿಗಳಿಲ್ಲ, ಉದ್ಯಮ ಚಟುವಟಿಕೆಯಿಲ್ಲ, ಹತ್ತಿರದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೌಕರ್ಯಗಳಿಲ್ಲ ಮತ್ತು ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿಲ್ಲ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ಸೌಕರ್ಯಗಳಿಲ್ಲ.

೧೦,೦೦೦ ನೌಕರಿಗಳನ್ನು ಸೃಷ್ಟಿಸುವ ದೊಡ್ಡ ಕಾರ್ಖಾನೆಗಳನ್ನು ಕಟ್ಟುತ್ತೇವೆ. ದುರ್ದೈವದಿಂದ ಅವುಗಳಲ್ಲಿ ೧೦೦೦ ಕನ್ನಡಿಗರಿಗೆ ಮಾತ್ರ ನೌಕರಿ ದೊರೆಯ ಬಹುದು. ರೇಲ್ವೆ ಇಲಾಖೆಯಲ್ಲಿ, ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ನೌಕರಿ ದೊರೆಯುವುದು ಕಷ್ಟವಾಗಿದೆ. ‘ಕಪ್ರೋಸಂ’ ಕಂಡುಕೊಂಡಿದ್ದೇನೆಂದರೆ ನೌಕರಿಗಳಿಗೆ ಆಯ್ಕೆ ಮಾಡಲು ಎಲ್ಲೆಲ್ಲಿ ಸ್ಪರ್ಧಾ ಪರೀಕ್ಷೆಗಳು ನಡೆದಿವೆಯೋ ಅಲ್ಲಿ ಕನ್ನಡಿಗರ ನಿರ್ವಹಣೆಯು ತೃಪ್ತಿಕರವಾಗಿರಲಿಲ್ಲ. ತತ್ಫಲವಾಗಿ ಪ್ರತಿ ವರ್ಷವೂ ಸಾವಿರಾರು ಕನ್ನಡಿಗರಿಗೆ ಹುದ್ದೆಗಳು ಕಳೆದುಹೋಗುತ್ತಿವೆ. ಹೊರಗಿನವರು ಅವುಗಳನ್ನು ಪಡೆದು ಕೊಂಡು ಸುಖವಾಗಿದ್ದಾರೆ. ಪಿಯುಸಿ ಅಥವಾ ಡಿಗ್ರಿ ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಉತ್ತಮಿಕೆಯನ್ನು ತೋರಿಸುವುದು ಹೇಗೆಂಬ ಬಗ್ಗೆ ಅಧ್ಯಯನ ವಿಷಯವೊಂದಿರಬೇಕು. ಇದು ಕನ್ನಡಯುವಕರಿಗೆ ಅತ್ಯಂತ ತುರ್ತಾದ ಆವಶ್ಯಕತೆಯಾಗಿದೆ. ನಕಾರಾತ್ಮಕ ವಾತಾವರಣದ ಕಾರಣ ಕನ್ನಡ ಯುವಕರು ಕೀಳರಿಮೆಯನ್ನು ಬೆಳೆಸಿಕೊಳ್ಳುವುದು ಕನ್ನಡ ಸಮಾಜಕ್ಕೆ ಒಳ್ಳೆಯದಲ್ಲ. ಈ ಕಾಲದ ಕನ್ನಡಯುವಕರ ಮೇಲೆ ಎರಡು ಆಪಾದನೆಗಳಿವೆ. ಎರಡೂ ಗಂಭೀರ ವಾದವುಗಳೇ. ಒಬ್ಬ ವಿವಿ‌ಐಪಿ ಅವರನ್ನು ಕೊಳಕು ಜನವೆಂದೂ ಇನ್ನೊಬ್ಬಾತ ಅವರನ್ನು ತಲೆಬಾಗುವ ಸಾಧುಗಳೆಂದೂ ಕರೆದಿದ್ದಾರೆ. ಆ ಇಬ್ಬರೂ ವಿಶಿಷ್ಠ ವ್ಯಕ್ತಿಗಳಾಗಿದ್ದು ಒಂದು ಜನಸಮುದಾಯವನ್ನು ಅಂದಾಜು ಮಾಡಲು ತಿಳಿದವರಾಗಿದ್ದಾರೆ. ಇಂದಿನ ತಲೆಮಾರಿನವರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಿದ್ದಿಕೊಳ್ಳುವ ಕೆಲಸವನ್ನು ಮಾಡಬೇಕು. ನಮ್ಮ ತಲೆಮಾರಿ ನವರೂ ಇಂತಹ ನಕಾರಾತ್ಮಕ ಟೀಕೆಗಳನ್ನು ಪಡೆದಿದ್ದರೂ ಅವುಗಳನ್ನು ಗಂಭೀರವಾಗಿ ಎಣಿಸದ ದುರ್ದೈವದಿಂದ ತಿದ್ದಿಕೊಂಡು ಉತ್ತಮಪಡಿಸಿಕೊಂಡು ಒಳ್ಳೆಯ ಬಿಂಬವನ್ನು ಮೂಡಿಸುವ ಪ್ರಯತ್ನದ ಬಗ್ಗೆ ನಮ್ಮ ತಲೆಮಾರು ಆಲೋಚಿಸಲಿಲ್ಲ. ನಕ್ಕು ಸಹಿಸಿಕೊಂಡು ಹೋಗುವ ಮನೋಭಾವವನ್ನು ಅಳವಡಿಸಿಕೊಂಡೆವು. ಅಪಜಯ ಸ್ವೀಕಾರದ ಸೌಮ್ಯ ಸ್ವರೂಪವಾಗಿತ್ತು. ಮುಂದಿನ ತಲೆಮಾರಿನವರಿಗೂ ಕೊರತೆಗಳನ್ನು ವರ್ಗಾಯಿಸಿದೆವು. ಕನ್ನಡ ಜನರನ್ನು ಆವರಿಸಿರುವ ನಿಷೇಧಾತ್ಮಕ ಬಿಂಬಗಳನ್ನು ಮುಂದಿನ ಜನಾಂಗಕ್ಕೂ ವರ್ಗಾಯಿಸದಂತೆ ಮಾಡುವ ಭಾರಿ ಜವಾಬ್ದಾರಿಯೂ ಇಂದಿನ ತಲೆಮಾರಿನ ಮೇಲಿದೆ.

‘ಕಪ್ರೋಸಂ’ ಪ್ರಕಾರ ಕನ್ನಡಿಗರ ನಮ್ರತೆಗೆ ಕನ್ನಡಿಗರಲ್ಲಿರುವ ಉದ್ಯಮ ಚಟುವಟಿಕೆಯ ಅಭಾವವು ಒಂದು ಕಾರಣವಾಗಿದೆ.

ಕನ್ನಡ ಜನರಿಗೆ ’ಕಪ್ರೋಸಂ’ ಒಂದು ಕಿರುಕಾಣಿಕೆ. ತನ್ನ ಜೀವನದ ಒಂದು ಭಾಗವಾಗಿ ಅದನ್ನು ಪ್ರತಿ ಕನ್ನಡಿಗನೂ ಪಡೆದುಕೊಂಡಿರಬೇಕು. ಕನ್ನಡ ಜನ ಮನಃ ಸ್ಥೈರ್ಯ ಈಗ ಕೆಲ್ವಿನ್ ಶೂನ್ಯದಲ್ಲಿರಬಹುದು. ಆದರೆ ಕಪ್ರೊಸಂನ ಅವಳಿ ಉದ್ದೇಶ್ಯಗಳಾದ ಉನ್ನತ ಸಾಧನೆಗಳಿಗಾಗಿ ಸತತ ಪ್ರಯತ್ನ ಮತ್ತು ಉತ್ಕೃಷ್ಟ ಸಾಧನೆಗಳಿಗಾಗಿ ಸತತ ಸಂಶೋಧನೆ ಇವುಗಳು ಕನ್ನಡಿಗರನ್ನು ಉತ್ತುಂಗ ಶಿಖರದಲ್ಲಿ ಮತ್ತು ಚಾನಲ್ ೩೦ರಲ್ಲಿ ಇರಿಸುತ್ತವೆ. ೨೧ನೇ ಶತಮಾನ ಕನ್ನಡ ಜನರ ಶತಮಾನವಾಗಿ ಮಾಡಲು ಕಪ್ರೋಸಂ ಮೂಲಕ ಸಾಧ್ಯವಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...