Home / ಕವನ / ಕವಿತೆ / ನಗುವಿತ್ತು ಹೂವಂತ ಮಾತಿತ್ತು

ನಗುವಿತ್ತು ಹೂವಂತ ಮಾತಿತ್ತು

ಹಠಾತ್ತಾಗಿ ಬಂದ ಚಡಪಡಿಕೆ
ಅದ್ಹೇಕೋ ನಿನ್ನ ಪಾದಗಳು
ಒಮ್ಮೆಲೆ ನೆನಪಾದವು
ಪಾದಗಳ ಬಳಿ ಕುಳಿತು
ಸರಿರಾತ್ರಿ ಧ್ಯಾನಿಸಿದ ನೆನಪು

ಇಡೀ ದೇಹವನ್ನು ಉಂಡ ಮೇಲೆ
ಉಳಿದದ್ದೇನು??
ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ
ಕನಸು ನನಸು ಬೀಜ ಮೊರೆತದ
ಜೀವ ಮಿಡಿತದ ಸದ್ದು
ಕಿವಿಗೆ ಮಾತಾಡಿ ತೆರಳಿತು

ಪಾದಗಳ ಬಳಿ ಕುಳಿತು ಧ್ಯಾನಿಸಿದೆ
ಮಗು ಪುಟ್ಟು ಕಾಲುಗಳಿಂದ
ಹಿತವಾಗಿ ಮುಖಕ್ಕೆ ಒದೆಯುತ್ತಿತ್ತು ಕಿಲಕಿಲ
ನಗುತ್ತಿತ್ತು ,ಭೂಮಿ ಮಳೆಮಿಂದು ನಕ್ಕಂತೆ

ಮಗು ತನ್ನ ಮುಖದಲ್ಲಿ
ನನಗೆ ಕನ್ನಡಿ ಹಿಡಿದಿತ್ತು
ಪಾದಗಳ‌ ಬಳಿ ಕುಳಿತು ಶರಣಾದೆ

ಬೆಳಗೊಳದ ಬಾಹುಬಲಿ
ಕಲ್ಲಾಗಿ ಆಕಾಶದೆತ್ತರಕೆ ಬೆಳೆದಿದ್ದ
ಅವನ ಪಾದಗಳ ಬಳಿ ನಿಂತೆ
ಕುಳಿತೆ ಧ್ಯಾನಿಸಿದೆ ಮಲಗಿದೆ

ಆಗಲೂ ನೆನಪಾದದ್ದು
ನೀನು, ಮಗುವಿನ ಒದೆತ ತಿವಿತ
ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಅದು ಸಾಮಾನ್ಯವೇನಲ್ಲ??

ಭೂಮಿ ತಾಯಿಯ ಬಳಿ ಬಂದೆ
ಹೊಲದಲ್ಲಿ ಮಲಗಿದೆ, ಸ್ವಲ್ಪ ಹೊತ್ತು ನಡೆದೆ…
ಕೈಗಳಿಂದ ಮಣ್ಣ ಸ್ಪರ್ಶಿಸಿದೆ
ಮಣ್ಣಲ್ಲಿ ಆಕೆಯ ಪಾದಗಳು ಸಿಕ್ಕವು
ಅಲ್ಲೇ ಆಕೆಯ ಧ್ವನಿ ಇತ್ತು
ಬದುಕಿತ್ತು ಒಡಲಿತ್ತು
ದಶಕಗಳ ನಂತರ ಹೊಲದ ಮುಖ ನೋಡಿದೆ
ಬಾಲ್ಯ ಮರುಕಳಿಸಿತು
ಇದೇ ಹೊಲದಲ್ಲಿ ಎತ್ತುಗಳು ದುಡಿದಿದ್ದವು, ಅಪ್ಪನ ಬೆವರಿತ್ತು ನಗುವಿತ್ತು ಹೂವಂತ ಮಾತಿತ್ತು

ಇದೇ ಹೊಲದಲ್ಲಿ ಬೆಳೆದ ನವಣೆ ಜೋಳದ ತೆನೆಯ ಜೊತೆ ಆಟವಾಡಿ, ಹಣ್ಣು ತಿಂದು ನಕ್ಕಿದ್ದೆವು ಹಸಿಗಡಲೆ ಸುಟ್ಟು ಮುಕ್ಕಿದ್ದೆವು

ಹೊಲದ ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಹುಡುಗಾಟವಲ್ಲ
ಕಳೆದು ಹೋದ ತಾಯಿ, ಯೌವ್ವನದ ಪ್ರೇಯಸಿಯ ಜೊತೆ
ನಕ್ಕಂತೆ ಬಿಕ್ಕಿದಂತೆ
ಮತ್ತೆ ನಕ್ಕು ಜಾತ್ರೆ ಮುಗಿಸಿ
ಮರಳಿ ಬದುಕಿಗೆ ನಡೆದಂತೆ…
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...