Home / ಕವನ / ಕವಿತೆ / ಮೌನ ಮಾತಾಗುವ ಹೊತ್ತು

ಮೌನ ಮಾತಾಗುವ ಹೊತ್ತು

ಹೂಗಳ ಮೌನ ಮಾತಾಗುವ ಹೊತ್ತು
ನಾನು ಅರಳಬೇಕಷ್ಟೇ…
ವಿಷಾದದ ಹಗಲು
ಹಳತಾದ ರಾತ್ರಿಗಳು
ಹಳೆಯ ಕಾಗದದ ಪುಟದಂತೆ
ಅಟ್ಟಸೇರಿ ಎಷ್ಟೋದಿನ ಮೌನದಿ‌ ಮಲಗಿದಂತೆ
ರಾತ್ರಿಗಳಿಗೂ ವಯಸ್ಸಾಗುತ್ತದೆ
ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ

ಬಯಲು ಬಿಕ್ಕಳಿಸುವ ಸಮಯ
ನಿನ್ನೆಗಳು ಮುಗ್ಗರಿಸಿ ಬಿದ್ದಿವೆ
ನಿನ್ನೆಗೆ ಕಂದನ ಪಾದವಾಗಿ
ವರ್ತಮಾನದ ಎದೆಗೆ ಒದೆಯುವ ಬಯಕೆ

ನಗರ ವಿಷಾದ ಹೊದ್ದು ಮಲಗುವ ಸಮಯ
ನಿನ್ನೆಗಳು ನಮ್ಮವಾಗಿದ್ದವು
ವರ್ತಮಾನ ನಮ್ಮದಲ್ಲ
ನಾಳೆಯೂ ಗೊತ್ತಿಲ್ಲ
ಗೊಂದಲದ ಬದುಕಿನಲಿ ಹಂಬಲ
ಮೊಳಕೆಗೆ ಮುನ್ನ ಸೋಲುತಿದೆ
ವರ್ತಮಾನಕೆ ಕಳೆದುದರ ಚಿಂತೆ ಹಳಹಳಿಕೆ

ನದಿ ದುಃಖಿಸುವ ಸಮಯ
ಹಾಗಿತ್ತು ಹೀಗಾಗಬೇಕಿತ್ತು ಏನಾಗಿಹೋಯಿತು ಹೀಗೆ ಬದಲಾಗಬಹುದು
ಕಷ್ಟ ; ಈ ಹಾಳು ಮನಸು ಬಂಧನಗಳ ಈ ಬಂಧನದಲ್ಲಿ
ಆ ಅದು ಸಾಧ್ಯವಿಲ್ಲ ಬಿಡು
ಕನಸು ಕಾಣಬೇಡ , ಮಾತು ಕೊಡಲಾರೆ ….

ಹಕ್ಕಿಗಳು ಗೂಡು ಸೇರುವ ಸಮಯ
ಈ ಮನುಷ್ಯರ ಗೊಣಗಾಟಗಳಲ್ಲಿ ವರ್ತಮಾನವೂ ಮುಪ್ಪಾಗಿ
ನಿನ್ನೆಯ ಹಳೆಯ ಪುಟಕ್ಕೆ ಸೇರುವ ಮುನ್ನ

ಎಲ್ಲವೂ ಶೃಂಗಾರ, ನಾನು ನೀನು
ಬೆತ್ತಲೆಯ ನದಿ ಬೆಟ್ಟ ಬಯಲು ಚಂದ್ರ ಹೂ ತಾರೆ

ನಿನ್ನೆ ಇವತ್ತು ನಾಳೆ ನಾಡಿದ್ದು
ನಾಲಿಗೆಗಳು ಶಬ್ದವಿಲ್ಲದ ಯುದ್ಧ ಮಾಡುವ ಸಮಯ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...