Home / ಕವನ / ಕವಿತೆ / ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಹೈಡ್ ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ

ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ
ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ
ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ!
ಮುಂದೆ ನೋಡುವಿರ ಹಿಂದೆ ನೋಡುವಿರ
ಮನುಷ್ಯನಿಗಿರುವುದು ಎರಡೇ ಕಣ್ಣುಗಳು
ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ
ಬಂದರೂ ಅವರ ಕೈಕಾಲುಗಳು ಹಾಗೆಯೇ ಇರುತ್ತವೆಯೇ ?

ಉತ್ತರ ಅಯರ್ಲೆಂಡಿನಲ್ಲಿ ಏನಾಗುತ್ತಿದೆ?
ಆರ್ಜೆಂಟೇನಾದಲ್ಲಿ ನಿಕರಾಗುವಾದಲ್ಲಿ
ಇಲ್ಲಿ ಲಂಡನ್ನಲ್ಲಿ! ಜನ ಬದುಕಬೇಕೆ ಬೇಡವೆ?
ಕ್ರಾಂತಿಯನ್ನುವುದೀಗ ಅಂಗಡಿಯಲ್ಲಿ ಸಿಗುವ
ವಸ್ತುವಾಗಿಬಿಟ್ಟಿದೆ! ಸೆಲೋಫೇನ್ ಚೀಲಗಳಲ್ಲಿ
ಯಾರು ಬೇಕಾದರೂ ಕೊಳ್ಳಬಹುದು ಹತ್ತು,
ಪೌಂಡುಗಳಿಗೆ! “ಖಾಲಿ ಚೀಲಗಳನ್ನು ಮಾತ್ರ
ನಾಶಪಡಿಸಿರಿ, ಮಕ್ಕಳ ಕೈಗೆ ದೊರಕುವ ಕಡೆ
ಒಗೆಯಬೇಡಿರಿ!”- ಎನ್ನುತ್ತದೆ ಅದರ ಮೇಲಿನ
ಪ್ರಕಟಣೆ. ಆದರೆ ಚೀಲದೂಳಗಿನ ವಸ್ತು?
ಅದಕ್ಕೆ ಯಾರ ಲಂಗು ಲಗಾಮು ಸ್ವಾಮಿ? ಯಾವ
ಸರಕಾರೀ ನಿಯಂತ್ರಣ? ಅದು ಆಫ್ರಿಕೆಗೂ ಸಿದ್ಧ
ಲ್ಯಾಟಿನ್ ಅಮೇರಿಕೆಗೂ ಸಿದ್ಧ! ಮತ್ತೆ ಹೊಸ
ರೋಗಗಳ ಸೋಂಕು ತಗಲಿಸುತ್ತದೆ ನಮ್ಮ
ನಿಲಯದ ಬುದ್ದಿ ಜೀವಿಗಳಿಗೆ!

ಅವರೋ! ಹಾ! ಅವರ ಬಗ್ಗೆ ಎಷ್ಟು ಹೇಳಿದರೂ
ಕಡಿಮೆಯೆ! ಅವರು ಸಿಗರೇಟಿನ ಬೆಲೆಯಿಂದ
ಹಿಡಿದು ಅಣ್ವಸ್ತ್ರಗಳ ಬೆಲೆಯ ತನಕ ಎಲ್ಲವನ್ನೂ
ತಿಳಿದವರಂತೆ ಮಾತಾಡುತ್ತಾರೆ. ತಮ್ಮ ಪಕ್ಕದಲ್ಲೇ
ಬಾಂಬು ಸಿಡಿದರೂ ಕೇಳಿಸದಂತೆ ಸಾಕ್ರಟೀಸನ
ಶೈಲಿಯಲ್ಲಿ ಚರ್ಚಿಸುತ್ತಾರೆ! ಎಂಥ ಸಮಾಜ!

ನನಗೆ ಹೇಳುವುದಕ್ಕೆ ಬಹಳಷ್ಟಿದೆ-ಆದರೆ
ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಲು
ಆತುರದಿಂದಿದ್ದೀರಿ. ಸದ್ಯ ನಿಲ್ಲಿಸುವೆ. ನಾಳೆ
ಇಲ್ಲೇ ನಮ್ಮ ಭೇಟಿ. ಆದರೆ ಜಾಗ್ರತೆ!
ನಿಮ್ಮ ಕಾರಿನ ಬಾಗಿಲು ತೆಗೆಯುವ ಮೊದಲು
ಎರಡೆರಡು ಬಾರಿ ನೋಡಿಕೊಳ್ಳಿ!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...