Home / ಕವನ / ಕವಿತೆ / ಆನೆಗಳು ಎರಡು ವಿಧ

ಆನೆಗಳು ಎರಡು ವಿಧ

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ-
ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ-
ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ
ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು
ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು
ಪ್ರೀತಿ ಜಗಳ ಹೋರಾಟ ಜನನ ಮರಣ ಎಲ್ಲವೂ ಅಲ್ಲಿಯೇ
ಆಗ ಕೆಲವಾನೆಗಳೆಂದುವು-ಛೇ ಇದೆಂಥ ಬಾಳು!
ಕೇವಲ ಮೀನು ಕಪ್ಪೆಗಳಂತೆ ನಾವು ಯಾವಾಗಲೂ
ನೀರೊಳಗೆ ಅಡಗುವುದೇ ?! ಇಷ್ಟು ಭಾರೀ ದೇಹವನು
ಹೊತ್ತಿದ್ದು ಮಳೆಗೆ ನೆರೆಗೆ ಝಂಝಾವಾತಕ್ಕೆ
ಗುರಿಯಾಗಿ! ಆನೆಯ ವಂಶದವರೇ! ದಂಡೆಯೇರಲು
ಧೈರ್ಯವಿದ್ದವರೆಲ್ಲ ಬನ್ನಿ ಮುಂದೆ! ಅದೋ ಬಯಲು
ಅದೋ ಅರಣ್ಯ! ಅದೋ ಘಟ್ಟ! ಅದೋ ಅದೋ
ಪರ್ವತದ ಶಿಖರಗಳು!

ದೊಡ್ಡಾನೆ ಸಣ್ಣಾನೆ ಮರಿಯಾನೆಗಳೆಂದು ಅನೇಕ
ಆನೆಗಳು ತಾ ಮುಂದೆ ತಾ ಮುಂದೆ ಎನ್ನುತ್ತ
ಹತ್ತಿದುವು ದಂಡೆ ಹಾದುವು ಬಯಲು ಹೊಕ್ಕವು ಅರಣ್ಯ
ಏರಿದುವು ಘಟ್ಟ ಅಲೆದುವು ಪರ್ವತದ ಶಿಖರಗಳ
ಮೊದಮೊದಲು ತುಸು ಕಷ್ಟವೇ ಆಯಿತು ಅವಕ್ಕೆ
ಉಸಿರುಗಟ್ಟಿದಂತಾಯಿತು ದೇಹ ತೂಗಿ ತೊನೆ-
ದಂತಾಯಿತು ಎಲ್ಲ ಕೇವಲ ಕೆಲವೇ ವರ್ಷಗಳು
ಕ್ರಮೇಣ ಕಿವಿಗಳು ಗೆರಸೆಗಳಾದುವು ಪಾದಗಳು
ಗೊರಸೆಯಾದುವು ಎಲ್ಲಕ್ಕಿಂತ ಮುಖ್ಯ ಮೂಗು
ಮಹಾಸೊಂಡಿಲಾಯಿತು ಹಲ್ಲುಗಳು ಉಕ್ಕಿನ ಖಡ್ಗ –
ದಂತಾದುವು ಇಂಥ ಕಾಡಾನೆಗಳಿಗೆ ಮೃಗರಾಜನೆಂಬ
ಬಿರುದೂ ಬಂತು. ಅವು ಘೊಳ್ಳನೆ ಘೀಳಿಟ್ಟು
ನೀರಾನೆಗಳನ್ನು ಹಂಗಿಸಿದುವು. ನೀರಾನೆಗಳು ಪಾಪ!
ಹುಟ್ಟಾ ಆಲಸಿಗಳು ಇದ್ದಲ್ಲಿ ಇರುವಂಥ ಧಡ್ಡರು
ಯಾವ ಸಾಹಸವನ್ನೂ ಕೈಗೊಳ್ಳದ ದಪ್ಟಚರ್ಮದ
ಮೈಗಳ್ಳರು.

ಕಾಡಾನೆಗಳು ತಾನೆ ಎಷ್ಟು ಕಾಲ ಸ್ವೇಚ್ಛೆಯಿಂದ
ಇದ್ದಾವು? ಅವು ಖೆಡ್ಡಾದಲ್ಲಿ ಬಿದ್ದುವು. ಮನುಷ್ಯರ
ಕೈಯಲ್ಲಿ ಸಿಕ್ಕಿದುವು. ಮಾವುತರೆಂಬ ಜನರಿಂದ
ಅಂಕುಶದ ತಿವಿತ ಅನುಭವಿಸುತ್ತ ಭಾರವಾದ
ವಸ್ತುಗಳನ್ನು ಎಳೆಯತೊಡಗಿದುವು. ಜಾತ್ರೆಯಲ್ಲಿ
ದೇವರನ್ನು ಹೊರತೊಡಗಿದುವು ಈಗೀಗ ಅವು
ಸರ್ಕಸ್ಸಿನಲ್ಲಿ ಎಗರಾಡುತ್ತವೆ ಪಾರ್ಕುಗಳಲ್ಲಿ ಮಕ್ಕಳಿಗೆ
ಅಶ್ಚರ್ಯದ ಪ್ರಾಣಿಗಳಾಗಿ ನಿಲ್ಲುತ್ತವೆ-ಇತ್ತ ನೀರಾನೆಗಳು
ಜೀವವಿಕಾಸವನ್ನೆ ಧಿಕ್ಕರಿಸಿವೆಯೊ ಮರೆತಿವೆಯೊ
ಜಲದೊಳಗಿನ ನಾದಜಗತ್ತಿನಲ್ಲಿ ಮೈಮಮರೆತಿವೆಯೊ
ಹೇಳುವುದು ಹೇಗೆ ? ಅವುಗಳ ನಡುವೆ ಈಚೆಗೆ
ಮುಂದಾಳುಗಳು ಯಾರೂ ಬಂದಿಲ್ಲ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...