Home / ಕವನ / ಕವಿತೆ / ಆನೆಗಳು ಎರಡು ವಿಧ

ಆನೆಗಳು ಎರಡು ವಿಧ

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ-
ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ-
ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ
ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು
ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು
ಪ್ರೀತಿ ಜಗಳ ಹೋರಾಟ ಜನನ ಮರಣ ಎಲ್ಲವೂ ಅಲ್ಲಿಯೇ
ಆಗ ಕೆಲವಾನೆಗಳೆಂದುವು-ಛೇ ಇದೆಂಥ ಬಾಳು!
ಕೇವಲ ಮೀನು ಕಪ್ಪೆಗಳಂತೆ ನಾವು ಯಾವಾಗಲೂ
ನೀರೊಳಗೆ ಅಡಗುವುದೇ ?! ಇಷ್ಟು ಭಾರೀ ದೇಹವನು
ಹೊತ್ತಿದ್ದು ಮಳೆಗೆ ನೆರೆಗೆ ಝಂಝಾವಾತಕ್ಕೆ
ಗುರಿಯಾಗಿ! ಆನೆಯ ವಂಶದವರೇ! ದಂಡೆಯೇರಲು
ಧೈರ್ಯವಿದ್ದವರೆಲ್ಲ ಬನ್ನಿ ಮುಂದೆ! ಅದೋ ಬಯಲು
ಅದೋ ಅರಣ್ಯ! ಅದೋ ಘಟ್ಟ! ಅದೋ ಅದೋ
ಪರ್ವತದ ಶಿಖರಗಳು!

ದೊಡ್ಡಾನೆ ಸಣ್ಣಾನೆ ಮರಿಯಾನೆಗಳೆಂದು ಅನೇಕ
ಆನೆಗಳು ತಾ ಮುಂದೆ ತಾ ಮುಂದೆ ಎನ್ನುತ್ತ
ಹತ್ತಿದುವು ದಂಡೆ ಹಾದುವು ಬಯಲು ಹೊಕ್ಕವು ಅರಣ್ಯ
ಏರಿದುವು ಘಟ್ಟ ಅಲೆದುವು ಪರ್ವತದ ಶಿಖರಗಳ
ಮೊದಮೊದಲು ತುಸು ಕಷ್ಟವೇ ಆಯಿತು ಅವಕ್ಕೆ
ಉಸಿರುಗಟ್ಟಿದಂತಾಯಿತು ದೇಹ ತೂಗಿ ತೊನೆ-
ದಂತಾಯಿತು ಎಲ್ಲ ಕೇವಲ ಕೆಲವೇ ವರ್ಷಗಳು
ಕ್ರಮೇಣ ಕಿವಿಗಳು ಗೆರಸೆಗಳಾದುವು ಪಾದಗಳು
ಗೊರಸೆಯಾದುವು ಎಲ್ಲಕ್ಕಿಂತ ಮುಖ್ಯ ಮೂಗು
ಮಹಾಸೊಂಡಿಲಾಯಿತು ಹಲ್ಲುಗಳು ಉಕ್ಕಿನ ಖಡ್ಗ –
ದಂತಾದುವು ಇಂಥ ಕಾಡಾನೆಗಳಿಗೆ ಮೃಗರಾಜನೆಂಬ
ಬಿರುದೂ ಬಂತು. ಅವು ಘೊಳ್ಳನೆ ಘೀಳಿಟ್ಟು
ನೀರಾನೆಗಳನ್ನು ಹಂಗಿಸಿದುವು. ನೀರಾನೆಗಳು ಪಾಪ!
ಹುಟ್ಟಾ ಆಲಸಿಗಳು ಇದ್ದಲ್ಲಿ ಇರುವಂಥ ಧಡ್ಡರು
ಯಾವ ಸಾಹಸವನ್ನೂ ಕೈಗೊಳ್ಳದ ದಪ್ಟಚರ್ಮದ
ಮೈಗಳ್ಳರು.

ಕಾಡಾನೆಗಳು ತಾನೆ ಎಷ್ಟು ಕಾಲ ಸ್ವೇಚ್ಛೆಯಿಂದ
ಇದ್ದಾವು? ಅವು ಖೆಡ್ಡಾದಲ್ಲಿ ಬಿದ್ದುವು. ಮನುಷ್ಯರ
ಕೈಯಲ್ಲಿ ಸಿಕ್ಕಿದುವು. ಮಾವುತರೆಂಬ ಜನರಿಂದ
ಅಂಕುಶದ ತಿವಿತ ಅನುಭವಿಸುತ್ತ ಭಾರವಾದ
ವಸ್ತುಗಳನ್ನು ಎಳೆಯತೊಡಗಿದುವು. ಜಾತ್ರೆಯಲ್ಲಿ
ದೇವರನ್ನು ಹೊರತೊಡಗಿದುವು ಈಗೀಗ ಅವು
ಸರ್ಕಸ್ಸಿನಲ್ಲಿ ಎಗರಾಡುತ್ತವೆ ಪಾರ್ಕುಗಳಲ್ಲಿ ಮಕ್ಕಳಿಗೆ
ಅಶ್ಚರ್ಯದ ಪ್ರಾಣಿಗಳಾಗಿ ನಿಲ್ಲುತ್ತವೆ-ಇತ್ತ ನೀರಾನೆಗಳು
ಜೀವವಿಕಾಸವನ್ನೆ ಧಿಕ್ಕರಿಸಿವೆಯೊ ಮರೆತಿವೆಯೊ
ಜಲದೊಳಗಿನ ನಾದಜಗತ್ತಿನಲ್ಲಿ ಮೈಮಮರೆತಿವೆಯೊ
ಹೇಳುವುದು ಹೇಗೆ ? ಅವುಗಳ ನಡುವೆ ಈಚೆಗೆ
ಮುಂದಾಳುಗಳು ಯಾರೂ ಬಂದಿಲ್ಲ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...