Home / ಲೇಖನ / ವಿಜ್ಞಾನ / ವಿಸ್ಮಯ ಜೀವ ಸೃಷ್ಟಿಯ ವಂಶಾಣು ವರ್ಗಾವಣೆ

ವಿಸ್ಮಯ ಜೀವ ಸೃಷ್ಟಿಯ ವಂಶಾಣು ವರ್ಗಾವಣೆ

ಚಿತ್ರ: ಕಾಲಿನ್ ಬೆಹ್ರೆನ್ಸ್

ಈಗಾಗಲೇ ತಂತ್ರಜ್ಞಾನದಿಂದ ಏನೆಲ್ಲ ವಿಸ್ಮಯಗಳ ಸೃಷ್ಟಿಯಾಗುತ್ತಲಿದೆ. ಮುಂದಿನ ಶತಮಾನದಲ್ಲಿ ನಂಬಲಸಾಧ್ಯವಾದ ಕೌತುಕಗಳನ್ನು ಪ್ರಕಟಿಸುತ್ತದೆ. ಹೊಸ ಪೀಳಿಗೆಯ ಹಸು, ಕುರಿ, ಕೋಳಿ ಇತ್ಯಾದಿಗಳನ್ನು ತಯಾರಿಸಬಹುದು. ಇವು ನೈಸರ್ಗಿಕವಾಗಿ ಜನಿಸಿದವಾಗಿರುವುದಿಲ್ಲ. ಮನುಷ್ಯನು ಇವುಗಳ ವಂಶಾಣುಗಳಲ್ಲಿ ವ್ಯತ್ಯಾಸಗಳನ್ನು ಮಾಡಿ ಕೃತಕವಾಗಿ ನಿರ್ಮಿಸಿದ ಪ್ರಾಣಿಗಳಾಗಿರಬಹುದು.

ಒಂದು ಪ್ರಾಣಿಯ ವಂಶಾಣುವಿನಲ್ಲಿ (Gene) ಪರಿವರ್ತನೆ ಮಾಡಿ ನಮಗೆ ಎಂತಹ ರೀತಿಯ ಹೊಸ ಪ್ರಾಣಿಗಳನ್ನು ತಯಾರಿಸಬಹುದು. ಉದಾ: ಬಕೆಟ್ ಗಟ್ಟಲೇ ಹಾಲು ಕರಿಯುವ ಹಸುಬೇಕೆಂದರೆ ವಂಶಾಣು ವರ್ಗಾವಣೆಯ (Transgenic) ತಂತ್ರಜ್ಞಾನದಿಂದ ಅಂತಹ ಹಸುಗಳನ್ನು ಸೃಷ್ಟಿಸಬಹುದು. ತಂತ್ರಜ್ಞಾನದಿಂದ ಬೆಳೆಸಿದ ಹತ್ತಿಯು ಪಾಲಿಯೆಸ್ಟರ್ ಸಂಯುಕ್ತವನ್ನು ಉತ್ಪಾದಿಸಬೇಕೆಂದರೆ ಹಾಗೂ ಮಾಡಬಹುದು. ಆಡಿನ ಹಾಲಿನಲ್ಲಿ ‘ಹಿಮೋಫೀಲಿಯಾ ಎಂಪಿಸೀಮಾ’ ರೋಗಗಳನ್ನು ನಿಯಂತ್ರಿಸುವ ಪದಾರ್ಥಗಳಿರುತ್ತವೆ.

ಅಮೇರಿಕಾದಲ್ಲಿ ರೈತರು ಮೂವತ್ತು ದಶಲಕ್ಷ ಎಕರೆ ಭೂಮಿಯಲ್ಲಿ ವಂಶಾಣು ವರ್ಗಾವಣೆ ಆಧಾರಿತ ಸಮಸ್ಯೆಗಳನ್ನು ಈಗಾಗಲೇ ಬೆಳೆಸುತ್ತಿದ್ದಾರೆ. ಬರಲಿರುವ ಕಾರ್ಖಾನೆಗಳಲ್ಲಿ ಜೈವಿಕ ತಂತ್ರಜ್ಞಾನಗಳನ್ನು ಬಳಸಿ ಅನೇಕ ಪ್ಲಾಸ್ಟಿಕ್‌ಗಳು, ಎಂಜೈಮ್‌ಗಳು, ಪರ್ಯಾಯ ಇಂಧನಗಳು ತಯಾರಾಗುತ್ತವೆ. ವಿಶಿಷ್ಟವಾದ ಮರಗಳಿಂದ ಉತ್ತಮ ಮಟ್ಟದ ಕಾಗದ ಪಲ್ಫ್ ತಯಾರಾಗುವುದು ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಸಾಬೂನಿಗೆ ಬೇಕಾಗುವ ವಿಶಿಷ್ಟ ಬೀಜಗಳನ್ನು ತಯಾರಿಸುತ್ತದೆ. ವಂಶಾಣುವರ್ಗಾವಣೆಯ ತಂತ್ರಜ್ಞಾನವು ಔಷಧ ಶಾಸ್ತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಲಿದೆ. ವರ್ಜಿನೀಯಾದ ಪಾಲಿಟೆಕಕ್ನಿಕ್ ಇನ್ಸ್‍ಟ್ಯೂಟ್ ಅಂಡ್ ಸ್ಟೇಟ್ ಯುನಿವರ್ಸಿಟಿಯಲ್ಲಿ ತಯಾರಿಸಿದ ಹಂದಿಗಳ ಹಾಲಿನಲ್ಲಿ ಅನೇಕ ರೋಗ ನಿವಾರಕ ಗುಣಗಳಿವೆಯಂತೆ. ಮನುಷ್ಯರ ರಕ್ತ ಹೆಪ್ಪುಗಟ್ಟಿಸುವಿಕೆಗೆ ಬೇಕಾಗುವ ಪ್ರೋಟೀನು – ಸಿ ಉಸಿರಾಟದ ತೊಂದರೆಗಳನ್ನು ತೊಡೆದು ಹಾಕುವ ‘ಆಲ್ಫಾ-೧’ ಯಟಿಟ್ರಿ ಪ್ಸಿನ್‌ಗಳು ಅದರಲ್ಲಿವೆ. ಒಂದು ಹಂದಿ ಪ್ರತಿವರ್ಷಕ್ಕೆ ಕರೆಯುವ ೩೦೦ ಲೀಟರ್ ಹಾಲಿನಲ್ಲಿ
ಶೇಕಡಾ ಹತ್ತನೆ ಒಂದು ಭಾಗದಷ್ಟು ಪ್ರೋಟಿನ್ -ಸಿ ಇರುತ್ತದೆಂದು ಕಂಡು ಹಿಡಿಯಲಾಗಿದೆ. ಮ್ಯಾಸಾಚ್ಯೂಟ್ಸ್‌ ಜೆಂಜೈಮ್ ಟ್ರಾನ್ಸ್‌ಜೆನಿಕ್ಸ್ ಕಾರ್ಪೊರೇಶನ್‌ನಲ್ಲಿ ಅಭಿವೃದ್ಧಿ ಪಡಿಸಿದ ಆಡುಗಳ ಹಾಲಿನಲ್ಲಿ ಕೆಲವೊಂದು ಕ್ಯಾನ್ಸರ್‌ಗಳು, ಹೃದಯರೋಗ, ಚರ್ಮರೋಗ ಮತ್ತು ಇತರ ಅನೇಕ ರೋಗಗಳನ್ನು ಶಮನಗೊಳಿಸುವ ಗುಣಗಳಿವೆ, ಎಂದು ವರದಿಯಾಗಿದೆ.

ವಂಶಾಣುವರ್ಗಾವಣೆಯ ತಂತ್ರಜ್ಞಾನವು ಎಷ್ಟರ ಮಟ್ಟಿಗೆ ವರವಾಗುವುದೋ ಅಷ್ಟೇ ಶಾಪವಾಗಿ ಪರಿಣಮಿಸಬಹುದೆಂಬ ಆತಂಕ ವಿಜ್ಞಾನಿಗಳಿಗಿದೆ. ನಿಸರ್ಗದ ಜೀವ ಜಗತ್ತಿನ ಸಮತೋಲನವನ್ನು ಹಾಳುಮಾಡಬಹುದು ಎಂಬ ಭಯ ಅವರದು. ಇಷ್ಟಾದ್ದಾಗ್ಯೂ ಸಸ್ಯಗಳಿಂದ ಹೆಚ್ಚು ಅಗ್ಗವಾದ ಪದಾರ್ಥಗಳನ್ನು ತಯಾರಿಸಬಹುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...