Home / ಕವನ / ಕವಿತೆ / ಗುರುಸಿದ್ಧರಾಜಯೋಗೀಂದ್ರರ ಲಿಂಗೈಕ್ಯ

ಗುರುಸಿದ್ಧರಾಜಯೋಗೀಂದ್ರರ ಲಿಂಗೈಕ್ಯ

ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ?
ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ
ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ?
ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ

ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು
ಮಣ್ಣು ಕೊಟ್ಟಿಹ ದೇಹ ಮಣ್ಣಿಗರ್ಪಿತವಹುದು
ಮಣ್ಣಿಗೆ ಮರೆತು ಅನ್ನುವೆವು ‘ನಾವು’ ಎಂದು
ದೇಹ ನಾವಲ್ಲ; ಮಣ್ಣಹುದು, ಮಣ್ಣು ಮಣ್ಣಿಗಾಗಿಹುದು

ನೀವು ಗಳಿಸಿದ ದೀಪ ಮೂರುಸಾವಿರ ದೀಪ
ಆ ದೀಪ ಕಿರಿಯಹುದೇ? ಕೊನೆಯಹುದೇ? ಹೇಳಿ
ಆರದಾ ದೀಪ ಗುರುಸಿದ್ಧ ನಂದಾದೀಪ
ಗುರುಸಿದ್ಧದೇವರಳಿದಿಲ್ಲ; ಅಳಿದುದವರ ದೇಹ ಕೇಳಿ

ಗಂಗಾಧರ ವಾಣಿಜ್ಯ ವಿದ್ಯಾಲಯದ ವಾಣಿಯವರು
ಶಾರದೆಯ ವೀಣೆಯದೋ ನುಡಿಸಿತವರ ಕೃಪಾ ಸುಧೆ
ಕಾಡಸಿದ್ಧೇಶ್ವರನ ಗುರುಸಿದ್ಧನಾಶ್ರಯಿಸಿಹನು
ಅತನು ಬೆಳೆಯುತೆ; ಆಶ್ರಯದಾತನಳಿಯಬಹುದೇ?

ಕಿರಿಯರಿಗೆ ಹಿರಿಯರಿಗೆ ನೀಡಿತವರ ಕಾಮಧೇನು ಕರವು
ವಿದ್ಯೆಯನು, ಬುದ್ಧಿಯನು, ಪುಣ್ಯವನ್ನು ಧರೆಯೊಳು
ನಾವುಂಡ ಅಂಮೃತದಲಿ ಅವರಾತ್ಮ ಕಾಣುವೆವು
ಅವರ ತತ್ವ ಕಳೆ ಏರಿ ಬೆಳೆಯುತ್ತಿದೆ ಭುವಿಯೊಳು

ಶಿವಯೋಗ ದಿನದಂದು ಗುರುಸಿದ್ಧ ಶಿವಯೋಗಿ
ಶಿವನೊಳೊಂದಾಗಿ ಗಂಗಾಧರ ಶಿವಯೋಗಿ ರೂಪತಾಳಿದರು
ಮೂರುಸಾವಿರ ಮಠದ ಸರ್ವಭಕ್ತರಿಗೆ ಆಶೀರ್ವದಿಸಿ
ರಾಜೇಂದ್ರಯೋಗಿಯದೋ ನಿಜಸಾಕ್ಷಾತ್ಕಾರ ತೋರುತಿಹರು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...