Home / ಕವನ / ಕವಿತೆ / ಗುರುಸಿದ್ಧರಾಜಯೋಗೀಂದ್ರರ ಲಿಂಗೈಕ್ಯ

ಗುರುಸಿದ್ಧರಾಜಯೋಗೀಂದ್ರರ ಲಿಂಗೈಕ್ಯ

ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ?
ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ
ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ?
ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ

ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು
ಮಣ್ಣು ಕೊಟ್ಟಿಹ ದೇಹ ಮಣ್ಣಿಗರ್ಪಿತವಹುದು
ಮಣ್ಣಿಗೆ ಮರೆತು ಅನ್ನುವೆವು ‘ನಾವು’ ಎಂದು
ದೇಹ ನಾವಲ್ಲ; ಮಣ್ಣಹುದು, ಮಣ್ಣು ಮಣ್ಣಿಗಾಗಿಹುದು

ನೀವು ಗಳಿಸಿದ ದೀಪ ಮೂರುಸಾವಿರ ದೀಪ
ಆ ದೀಪ ಕಿರಿಯಹುದೇ? ಕೊನೆಯಹುದೇ? ಹೇಳಿ
ಆರದಾ ದೀಪ ಗುರುಸಿದ್ಧ ನಂದಾದೀಪ
ಗುರುಸಿದ್ಧದೇವರಳಿದಿಲ್ಲ; ಅಳಿದುದವರ ದೇಹ ಕೇಳಿ

ಗಂಗಾಧರ ವಾಣಿಜ್ಯ ವಿದ್ಯಾಲಯದ ವಾಣಿಯವರು
ಶಾರದೆಯ ವೀಣೆಯದೋ ನುಡಿಸಿತವರ ಕೃಪಾ ಸುಧೆ
ಕಾಡಸಿದ್ಧೇಶ್ವರನ ಗುರುಸಿದ್ಧನಾಶ್ರಯಿಸಿಹನು
ಅತನು ಬೆಳೆಯುತೆ; ಆಶ್ರಯದಾತನಳಿಯಬಹುದೇ?

ಕಿರಿಯರಿಗೆ ಹಿರಿಯರಿಗೆ ನೀಡಿತವರ ಕಾಮಧೇನು ಕರವು
ವಿದ್ಯೆಯನು, ಬುದ್ಧಿಯನು, ಪುಣ್ಯವನ್ನು ಧರೆಯೊಳು
ನಾವುಂಡ ಅಂಮೃತದಲಿ ಅವರಾತ್ಮ ಕಾಣುವೆವು
ಅವರ ತತ್ವ ಕಳೆ ಏರಿ ಬೆಳೆಯುತ್ತಿದೆ ಭುವಿಯೊಳು

ಶಿವಯೋಗ ದಿನದಂದು ಗುರುಸಿದ್ಧ ಶಿವಯೋಗಿ
ಶಿವನೊಳೊಂದಾಗಿ ಗಂಗಾಧರ ಶಿವಯೋಗಿ ರೂಪತಾಳಿದರು
ಮೂರುಸಾವಿರ ಮಠದ ಸರ್ವಭಕ್ತರಿಗೆ ಆಶೀರ್ವದಿಸಿ
ರಾಜೇಂದ್ರಯೋಗಿಯದೋ ನಿಜಸಾಕ್ಷಾತ್ಕಾರ ತೋರುತಿಹರು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...