Home / ಕವನ / ಕವಿತೆ / ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ… ಬನ್ನಿ

ಬನ್ನಿ ಸಜ್ಜನರೇ ಬನ್ನಿ
ನವ ನಾಡ ಕಟ್ಟುವ ಬನ್ನಿ ||ಪ||

ಪ್ರಗತಿ ಬಂಡಾಯ ದಲಿತ ನವೋದಯ
ನವ್ಯ ಸಂಪ್ರದ ಶೀಲರೆ ಬನ್ನಿ,
ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ
ಸಮ್ಮಾನ ಜನಪದರೆ ಬನ್ನಿ, ||ಅ.ಪ.||

ಕಬ್ಬಿಗ ಬನದ ಕಾವ್ಯ ರಸದ
ಸುಧೆ ಕಳಸ ಹೊತ್ತು ಬನ್ನಿ,
ಮಾನವ ಜಾತಿ ತಾನೊಂದೆ ಕುಲವೆಂಬ
ಸ್ಪಟಿಕ ನುಡಿಯ ಬೆಳಕ ತನ್ನಿ,
ರವಿ ಕಾಣದ್ದನ್ನು ಕಾಣೋ ಕಲ್ಪನೆ ಕನಸಲೋಕದೀಚೆ….
ಕಣ್ ಕಂಡದ್ದನ್ನು ನಿಜ ನೇರ ನುಡಿಸೋ
ಸತ್ವ ದೀಪ್ತರಾಗಿ ಬನ್ನಿ |

ವಿಜ್ಞಾನ ದೇಗುಲದ ದೀಪದಾರತಿಯ
ನಿಜ ಬೆಳಕ ಬೀರ ಬನ್ನಿ,
ಜ್ಞಾನ-ವಿಜ್ಞಾನವು ಜಗದ ಬಲವೆಂಬ
ಮಣಿಕಾಂತಿ ತೋರ ಬನ್ನಿ,
ಮುಗಿಲೊಳಗು ಥಳಕುಗಳ ನಿಗೂಢ ಶೋಧ ದಾಚೆ…..
ನೆಲದ ಬದುಕಿನಾ ಜೀವ ಪ್ರೀತಿಸೋ
ಸೆಲೆ ಸುಳಿವ ಹಿಡಿದು ಬನ್ನಿ |

ಹಳೆಯ ಕೊಳೆಯ ಕಳೆಯನೊಮ್ಮನದಿ ಕೊಚ್ಚಿ
ನವನೀತ ನೇಹ ತನ್ನಿ,
ಕವಿ ಕವಿದ ನಿಶೆಯ, ಬಿಡಿ ಬಿಡಿಸೋ ಉಷೆಯ
ಹೊಂಗಿರಣವಾಗ ಬನ್ನಿ,
ಗೂಡು ಗೂಡುಗಳ ಹೊತ್ತಿ ಉರಿಸೋ ಹಗೆಯ ಜಾಲದೀಚೆ….
ಗೂಡೆದೆಯ ಗೂಡಿಗೂ ಪ್ರೀತಿ ಗುಟುಕನು
ಹಂಚಿ ಉಣಿಸಿ ಉಣಲು ಬನ್ನಿ |

ಅವರು ಇವರು ಇವರವರೆಂಬ
ತರತಮವ ಕೈಬಿಟ್ಟು ಬನ್ನಿ,
ಉಸಿರಿನ್ಹುಸಿರ ನಾಡ್ಹೆಸರ ಹಸಿರ ಬಸಿರ
ಸತ್ಯ ಹೊತ್ತು ತನ್ನಿ,
ಒಂದಾದುದೆಲ್ಲವೆರಡೆರಡ ಮಾಡೋ ಧಗೆಯ ತಂತ್ರದಾಚೆ….
ಒಂದು ಗೂಡಿಸುತ ಬಾನ್ಬೆಳಕ ಬೀರುವ
ದೀವಿಗೆಯ ಹಿಡಿದು ತನ್ನಿ |
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...