Home / ಕವನ / ಕವಿತೆ / ಕವಿಯ ಮೊದಲ ಕವನ

ಕವಿಯ ಮೊದಲ ಕವನ

ಮಲೆನಾಡಿನ ಮಳೆಗಾಲದಲ್ಲಿ
ನಮ್ಮೂರು ಕಾಲೇಜು ಬಾಗಿಲುಗಳು
ತೆಗೆದುಕೊಳ್ಳುತ್ತವೆ.
ಬಣ್ಣ ಬಣ್ಣದ ಛತ್ರಿಗಳು
ಬಿಚ್ಚಿಕೊಳ್ಳುತ್ತವೆ.
ಸೂಜಿ ಮಲ್ಲಿಗೆ ಗುಂಡು ಮಲ್ಲಿಗೆಗಳು
ಘಮ ಘಮಿಸುತ್ತವೆ.
ಕಾಲೇಜು ಮೆಟ್ಟಲೇರುವ ಹುಡುಗಿಯರ
ಗಲ್ಲಗಳು ಕೇದಿಗೆಯಾದರೆ ಕಣ್ಣುಗಳು
ನೀರಳೆಯಾಗುತ್ತವೆ.
ಸ್ಟೇಷನರಿ ಅಂಗಡಿಯಲ್ಲಿಯ
ಲಿಪ್‌ಸ್ಟಿಕ್, ರೋಜ್, ಪರ್ಸಗಳು ಕರಗುತ್ತವೆ.
ಮಳೆಗೆ ಮಿಂದು ನಡುಗುವ
ಬೆಡಗಿಯರನ್ನು ನೋಡಿ Book stall
ದವರೂ ಬಿಸಿಯಾಗಿ ಬೆವರುತ್ತವೆ.
ಹಳೇ ಮೇಷ್ಟ್ರುಗಳು,
ಛೇಡಿಸುವ ಹೊಸ ಹುಡುಗಿಯರೆಂದು
ಇದ್ದ ಎರಡು ಕೂದಲುಗಳಿಂದ
ಬೋಳು ತಲೆ ಮುಚ್ಚುತ್ತ
ಇಸ್ತ್ರಿ ಹೊಡೆವ, ಕಾಲರ್ ಹರೆದ
ಶರ್ಟ್ ಹಾಕಿಕೊಂಡು,
ವಯಸ್ಸಾಗಿ ಒಳಗೆ ಠೊಳ್ಳಾಗಿದ್ದರೂ
ಜೊಳ್ಳು ಎಲುಬಿನ ಎದೆ ಏರಿಸಿ
ಇಲ್ಲದ ಮೀಸೆ ತಿರುಗಿಸಿ
ಭಲ ಭೀಮನ ಠೀವಿಯಂತೆ
ಕ್ಲಾಸಿಗೆ ಬಂದೇ ಬಿಡುತ್ತಾರೆ.
ಹುಡುಗಿಯರ ಕಿಲ ಕಿಲ ನಗು
ಹುಡುಗರ ಕಲ ಕಲ ಮಾತುಗಳಲ್ಲಿ
ಕ್ಲಾಸು ಸುರುವಾಗುತ್ತದೆ.
ಬಾಣಗಳು ಬೋಳು ತಲೆಗೆ ಬೀಳುತ್ತವೆ
ಮೇಷ್ಟ್ರು ಸುಸ್ತಾಗುತ್ತಾರೆ
ಜೊಳ್ಳು ಎಲುಬಿನ ಬೊಜ್ಜು ಮೇಷ್ಟ್ರು
‘ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ
ರಪ ರಪ ಮಳೆ ಹೊಡೆಯುತ್ತದೆ
ಬಣ್ಣದ ಛತ್ರಿಗಳು ಬಿಚ್ಚಿಕೊಳ್ಳುತ್ತವೆ
ಮೇಷ್ಟ್ರನ್ನು ಮುತ್ತುತ್ತವೆ
ಧನ್ಯ ನಾ ಎನ್ನುತ್ತಾರೆ
ಕಾಲೇಜು ಹುಡುಗರು
ಕವಿಗಳಾಗುವ
ಮೊದಲನೆಯ ಕವನ
ಸುರುವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...