Home / ಕವನ / ಕವಿತೆ / ನಿಶ್ಶಬ್ಧ ಮೌನ

ನಿಶ್ಶಬ್ಧ ಮೌನ

ರಾತ್ರಿಯ ಆರೆಂಟು ತಾಸಿನ ವಿಮಾನ ಪ್ರಯಾಣ
ಕಿಟಕಿಯಾಚೆ ನೋಡಲೇನಿದ್ದಿತು!
ಯಾವಾಗಲೋ ಅಲ್ಲೊಂದು ಇಲ್ಲೊಂದು ಕಾಣುವ
ಸಮುದ್ರದ ಹಡಗಿನ ದೀಪಗಳು,
ಮರುಭೂಮಿಯಲಿ ಹೊತ್ತಿ ಉರಿಯುವ ಕಚ್ಚಾತೈಲ ಬೆಳಕು
ದೊಡ್ಡ ನಗರಗಳಾಗಿದ್ದರೆ ಒಂದಷ್ಟು ರಸ್ತೆ ದೀಪಗಳೋ ಏನೋ!
ನಿದ್ದೆ ಸಮಯ ಬೇರೆ ಗಡದ್ದಾದ ನಿದ್ದೆ-
ನಿದ್ದೆ ನಿದ್ದೆ ನಿದ್ದೆ

ಕೈ ಕುಲುಕಿ ಭುಜ ಅಲುಗಾಡಿಸಿ ಏನೋ ಕೇಳಿದಂತೆ….
ಎಚ್ಚರ, ಕಣ್ಮುಚ್ಚಿ ಕಣ್ಣು ಬಿಟ್ಟರೆ
ಮಬ್ಬು ಬೆಳಕಿನಲ್ಲಿ ನಿಶ್ಶಬ್ದ ಮೌನ
ಹೊದಿಕೆಯೊಳಗೆ ಪಯಣಿಗರ ನಿದ್ರೆ
ಬೆನ್ನು ತಿರುಗಿಸಿ ಕಪ್ಪು ಕೋಟಿನ ಆಕೆ ಸರಕ್ಕನೆ ಸರಿದಳು.
ಗಗನಸಖಿ ಅಲ್ಲದೆ ಮತ್ಯಾರಿದ್ದಾರು!

ಹಿಂದೊರಗಿ ಕಣ್ಣು ಮುಚ್ಚಲು ಪ್ರಯತ್ನಿಸಿದೆ
ಕಾಲಿಗೆ ಜಡ ವಸ್ತು ತಗುಲಿ ಮತ್ತೆ ಎಚ್ಚರ
ಹ್ಯಾಂಡ್ ಬ್ಯಾಗ್ ಅಲ್ಲದೇ ಮತ್ತಿನ್ನೇನು?
ಸಮಾಧಾನಿಸಿಕೊಳ್ಳುವಿಕೆ-

ವಿಮಾನ ಕೆಳಮನೆಯ ಸ್ಟೋರೇಜ್
ಕಾರ್ಗೋ ಕಂಟೈನರ್‌ಗಳ ಬಿಡಿಬಿಡಿಯಾದ ದೃಶ್ಯ.
ನೂರಾರು ಸೂಟ್‌ಕೇಸ ಬ್ಯಾಗುಗಳ ಗುಡ್ಡೆ
ಇರಲಿ ಅದಕ್ಕೇನಂತೆ!
ಅದರೊಳಗಡೆ ಅದೆಷ್ಟೋ ಪ್ರೀತಿ ಪ್ರೇಮದ ಪತ್ರಗಳು

ರಾಜಕೀಯ ವ್ಯವಹಾರಗಳ ಕಾಗದಗಳು
ಡಾಲರ್‍ಸ್, ಚೆಕ್, ಡ್ರಾಫ್ಟ್‌ಗಳ ರಾಶಿ
ಚಿನ್ನ ಬೆಳ್ಳಿ ಗಾಂಜಾ ಅಫೀಮುಗಳ ಬಚ್ಚಿಟ್ಟ ಸ್ಥಳ.
ಅದೇ ಅದೇ ಜಾಗತೀಕರಣದ ಪೇಟೆ ಪೇಟೆ….
ಇರಲಿ ಅದಕ್ಕೇನಂತೆ!

ಈ ಕಡೆಗೆ ಶೀತಾಗಾರ ಒಂದರ ಮೇಲೊಂದು ಶೆಲ್ಫ್‌ಗಳು
ಅದರೊಳಗೆ ಹೆಣಗಳ ಪೆಟ್ಟಿಗೆಗಳು
ವಿದೇಶಗಳೊಳಗೆ ಹೆಣವಾದವರು
ಮರಳಿ ಮಣ್ಣಿಗೆ ಮಣ್ಣಾಗಲು ಬರುತ್ತಿದ್ದಾರೆ.
ದಡಕ್ಕನೇ ಎದೆಬಡಿತ ಜೋರಾದದ್ದು.
ನನ್ನ ಕಾಲ ಕೆಳಗಿನ ಮನೆಯಲ್ಲೇ
ಅನಾಥ ಹೆಣಗಳಿದ್ದು ಕೂತಿರಬಹುದೆ
ಹೊರಟಾಗ ಇದೇ ಸೀಟಿನಲ್ಲಿ ಕುಳಿತು
ಈಗ ಇದೇ ಸೀಟಿನ ಕೆಳಗೆ ಏಕಾಂಗಿಯಾಗಿ
ರೋಧಿಸುತ್ತಿರಬಹುದೆ!

ಕೆಳಗೆ ನಿರ್ಜೀವಿಗಳ ಸ್ಮಶಾನ
ಮೇಲೆ ರಾಜನರಮನೆ ಟಚ್
ಕ್ಷಣಾರ್ಧದಲ್ಲಿ ಎದೆಯೊಡೆದು ಭೀತಿ ಮೂಡಿ
ಮೈತುಂಬ ಸಣ್ಣಗೆ ಬೆವರು ನಡುಕ-
ಈ ವಿಮಾನದೊಳಗೆ ಇದೆಲ್ಲ ಇರದಿರಲಿ ದೇವರೆ-
ನನ್ನ ಸೀಟಿನ ಎಲ್ಲ ಲೈಟು ಬಟನ್‌ಗಳು ಶುರುಮಾಡಿ ಕಣ್ಮುಚ್ಚಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...