Home / ಕವನ / ಕವಿತೆ / ನಿಶ್ಶಬ್ಧ ಮೌನ

ನಿಶ್ಶಬ್ಧ ಮೌನ

ರಾತ್ರಿಯ ಆರೆಂಟು ತಾಸಿನ ವಿಮಾನ ಪ್ರಯಾಣ
ಕಿಟಕಿಯಾಚೆ ನೋಡಲೇನಿದ್ದಿತು!
ಯಾವಾಗಲೋ ಅಲ್ಲೊಂದು ಇಲ್ಲೊಂದು ಕಾಣುವ
ಸಮುದ್ರದ ಹಡಗಿನ ದೀಪಗಳು,
ಮರುಭೂಮಿಯಲಿ ಹೊತ್ತಿ ಉರಿಯುವ ಕಚ್ಚಾತೈಲ ಬೆಳಕು
ದೊಡ್ಡ ನಗರಗಳಾಗಿದ್ದರೆ ಒಂದಷ್ಟು ರಸ್ತೆ ದೀಪಗಳೋ ಏನೋ!
ನಿದ್ದೆ ಸಮಯ ಬೇರೆ ಗಡದ್ದಾದ ನಿದ್ದೆ-
ನಿದ್ದೆ ನಿದ್ದೆ ನಿದ್ದೆ

ಕೈ ಕುಲುಕಿ ಭುಜ ಅಲುಗಾಡಿಸಿ ಏನೋ ಕೇಳಿದಂತೆ….
ಎಚ್ಚರ, ಕಣ್ಮುಚ್ಚಿ ಕಣ್ಣು ಬಿಟ್ಟರೆ
ಮಬ್ಬು ಬೆಳಕಿನಲ್ಲಿ ನಿಶ್ಶಬ್ದ ಮೌನ
ಹೊದಿಕೆಯೊಳಗೆ ಪಯಣಿಗರ ನಿದ್ರೆ
ಬೆನ್ನು ತಿರುಗಿಸಿ ಕಪ್ಪು ಕೋಟಿನ ಆಕೆ ಸರಕ್ಕನೆ ಸರಿದಳು.
ಗಗನಸಖಿ ಅಲ್ಲದೆ ಮತ್ಯಾರಿದ್ದಾರು!

ಹಿಂದೊರಗಿ ಕಣ್ಣು ಮುಚ್ಚಲು ಪ್ರಯತ್ನಿಸಿದೆ
ಕಾಲಿಗೆ ಜಡ ವಸ್ತು ತಗುಲಿ ಮತ್ತೆ ಎಚ್ಚರ
ಹ್ಯಾಂಡ್ ಬ್ಯಾಗ್ ಅಲ್ಲದೇ ಮತ್ತಿನ್ನೇನು?
ಸಮಾಧಾನಿಸಿಕೊಳ್ಳುವಿಕೆ-

ವಿಮಾನ ಕೆಳಮನೆಯ ಸ್ಟೋರೇಜ್
ಕಾರ್ಗೋ ಕಂಟೈನರ್‌ಗಳ ಬಿಡಿಬಿಡಿಯಾದ ದೃಶ್ಯ.
ನೂರಾರು ಸೂಟ್‌ಕೇಸ ಬ್ಯಾಗುಗಳ ಗುಡ್ಡೆ
ಇರಲಿ ಅದಕ್ಕೇನಂತೆ!
ಅದರೊಳಗಡೆ ಅದೆಷ್ಟೋ ಪ್ರೀತಿ ಪ್ರೇಮದ ಪತ್ರಗಳು

ರಾಜಕೀಯ ವ್ಯವಹಾರಗಳ ಕಾಗದಗಳು
ಡಾಲರ್‍ಸ್, ಚೆಕ್, ಡ್ರಾಫ್ಟ್‌ಗಳ ರಾಶಿ
ಚಿನ್ನ ಬೆಳ್ಳಿ ಗಾಂಜಾ ಅಫೀಮುಗಳ ಬಚ್ಚಿಟ್ಟ ಸ್ಥಳ.
ಅದೇ ಅದೇ ಜಾಗತೀಕರಣದ ಪೇಟೆ ಪೇಟೆ….
ಇರಲಿ ಅದಕ್ಕೇನಂತೆ!

ಈ ಕಡೆಗೆ ಶೀತಾಗಾರ ಒಂದರ ಮೇಲೊಂದು ಶೆಲ್ಫ್‌ಗಳು
ಅದರೊಳಗೆ ಹೆಣಗಳ ಪೆಟ್ಟಿಗೆಗಳು
ವಿದೇಶಗಳೊಳಗೆ ಹೆಣವಾದವರು
ಮರಳಿ ಮಣ್ಣಿಗೆ ಮಣ್ಣಾಗಲು ಬರುತ್ತಿದ್ದಾರೆ.
ದಡಕ್ಕನೇ ಎದೆಬಡಿತ ಜೋರಾದದ್ದು.
ನನ್ನ ಕಾಲ ಕೆಳಗಿನ ಮನೆಯಲ್ಲೇ
ಅನಾಥ ಹೆಣಗಳಿದ್ದು ಕೂತಿರಬಹುದೆ
ಹೊರಟಾಗ ಇದೇ ಸೀಟಿನಲ್ಲಿ ಕುಳಿತು
ಈಗ ಇದೇ ಸೀಟಿನ ಕೆಳಗೆ ಏಕಾಂಗಿಯಾಗಿ
ರೋಧಿಸುತ್ತಿರಬಹುದೆ!

ಕೆಳಗೆ ನಿರ್ಜೀವಿಗಳ ಸ್ಮಶಾನ
ಮೇಲೆ ರಾಜನರಮನೆ ಟಚ್
ಕ್ಷಣಾರ್ಧದಲ್ಲಿ ಎದೆಯೊಡೆದು ಭೀತಿ ಮೂಡಿ
ಮೈತುಂಬ ಸಣ್ಣಗೆ ಬೆವರು ನಡುಕ-
ಈ ವಿಮಾನದೊಳಗೆ ಇದೆಲ್ಲ ಇರದಿರಲಿ ದೇವರೆ-
ನನ್ನ ಸೀಟಿನ ಎಲ್ಲ ಲೈಟು ಬಟನ್‌ಗಳು ಶುರುಮಾಡಿ ಕಣ್ಮುಚ್ಚಿದೆ.
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...