Home / ಕವನ / ಕವಿತೆ / ಹೊಸ ದೇವರ ಬರವಿಗಾಗಿ

ಹೊಸ ದೇವರ ಬರವಿಗಾಗಿ

ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ?
ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ?
ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ
ಸತ್ತ ನೀ ಮರಳಿ ಬರಲಿಲ್ಲ!

ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು
ಬಾಲಕರು ಬಂದು ಹರಸಿದರೂ
ಮಾಡಿಟ್ಟ ನೈವೇದ್ಯ ಹಳಸಿದರೂ
ಕೂಗಿದರೂ ಓಗೊಲಿಲ್ಲ
ಪಾತಾಳದಿಂದ ಬಲೀಂದ್ರ ಬರಲಿಲ್ಲ ಮತ್ತಿಲ್ಲಿಗೆ

ಸತ್ತರೆ ಅಜೀರ್ಣದಿಂದ ಇಂದ್ರಾಗ್ನಿ ವರುಣರು ಮತ್ತೆ ಹುಟ್ಟಲಿಲ್ಲ
ಈ ಬ್ರಹ್ಮವಿಷ್ಣುರುದ್ರರೂ ವಯೋವೃದ್ಧರಾಗಿ ಮನುಷ್ಯ
ಜನಾಂಗ ಸ್ವರ್ಗ‍ದ ಸಂಪರ್ಕ ಕಳೆದಾಗ
ಸ್ವಂತ ಭೂಖಂಡವೂ ಕತ್ತಲೆಯ ಅಭೇದ್ಯ ಖಂಡ
ಅರ್ಥ ಚ್ಯುತಿಗೊಂಡ ಭಾಷೆ ಬರೇ ಗೊಂದಲಗೇರಿ ಸದ್ದುಗದ್ದಲದ
ಸುತ್ತು ಮುಖಗಳ ಮೇಲೆ ಕಿತ್ತರೂ ಬಾರದಂಥ ಅಂಟುಮೌನ
ಅಂತರ್ಮುಖದೊಳಗೆ ಕೂಡ ಅಪರಿಚಿತತ್ವ ಮುಖಾಮುಖಿಯ
ಈ ಹೆಪ್ಪುಗತ್ತಲೆಯಲ್ಲಿ ಹುಡುಕಿದರೆ

ಕ್ಯೂಬ ಬೊಲೀವಿಯಾ ಶೇಗವೇರಾ ಸಹ ದಾಟಿ
ಮತ್ತೆ ಹಿಪ್ಪಿ ಅತಿಮಾನಸಗಳನ್ನೂ ಅತಿಕ್ರಮಿಸಿ
ಅಂತ್ಯಗಳನ್ನೂ ಸೀಮೆಗಳನ್ನೂ ತಿರಸ್ಕರಿಸಿ
ಬೆಳೆದರೆ ಜೀವವಿಕಾಸವಲ್ಲ ಸಾಕ್ಷಾತ್ ಸ್ವಯಂಭೂ
ಸ್ವಂತ ಸನ್ನಿವೇಶಗಳ ತುರ್ತು ಆಶಯಗಳೇ ಮೈತಳೆದು
ನಮ್ಮ ನಾಭಿಕುಹರಗಳಿಂದ ತೊಡೆಗಳಿಂದ ನರಗಳಿಂದ
ಮೈ ಮನಸ್ಸಿನ ಭಾಗವಾಗಿ ನಮ್ಮೆಲ್ಲರ ಸಮಗ್ರ
ಸಂಕೇತವಾಗಿ ಏಳುತ್ತಾರೆ ಎದ್ದು ಸ್ವರ್ಣಗೋಪುರ ಸ್ಥಾಪನೆಗಳ
ಕೆಡವಿ-ಕೆಡವಿದರೆ ಉಸಿರಾಟ-ಉಸಿರಾಡಿದರೆ
ನಮ್ಮ ಬಿಡುಗಡೆ ಬಿಡುಗಡೆಯಲ್ಲಿ ಹೊಸ ಹುಟ್ಟು ಬೆಳವಣಿಗೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...