Home / ಕವನ / ಕವಿತೆ / ಹಾರಿ ಹೋಗತದ ಹಕ್ಕೀ

ಹಾರಿ ಹೋಗತದ ಹಕ್ಕೀ

ಅಂತೂ ಇಂತೂ ಒಂದು ದಿನ ಒಂದೇ ಕ್ಷಣಾ ಈ
ಕಂತೇ ಒಗೆಯುವುದು ನಿಶ್ಚಿತ
ಇರುವುದರಾಗೇ ಸಾಧಿಸಬೇಕು ಜನ್ಮ ಹುಟ್ಟಿಬಂದಭಿಮತ

ಹಾಂಗೂ ಹೀಂಗೂ ಸಾಗಿ ಹೋಗುತದ ಕಾಲ ಎಂಬ ಗಾಡೀ
ಇಬ್ಬನಿಯಂಗೆ ಕನಸಿನಹಂಗೆ ಮ್ಯಾಲಿನ ಮೋಡದ ಮೋಡೀ

ಹಿಡಿ ಹಿಡಿ ಹಿಡಿ ಹಿಡಿ ಅನ್ನೋದರಾಗ ಹಾರಿ ಹೋಗುತದ ಹಕ್ಕೀ
ಬೆರಳ ಸಂದಿನ್ಯಾಗ ಸೋರಿ ಹೋಗತಾವ ಬದುಕಿನ ಲೆಕ್ಕದ ಅಕ್ಕೀ

ಹಾರಾಡುತ್ತಿದೆ ಹದ್ದು ತಲಿ ಮ್ಯಾಲೆ ಜೀವದ ಹಕ್ಕೀ ಹಿಡಿಯಾಕ
ಕುಂತ ಕುಂತಲ್ಲೊ ದಾರಿ ದಾಟುವಾಗೊ ಅಪ್ಪಳಿಸುತ್ತದ ನೆಲಕ

ಗಬಕ್ಕನ ಕಚ್ಚಿ ಹಾರಿ ಹೋಗತದ ಬಾಯ್ಬಯ್ ಬಿಡ್ತಾವ ಸುತ್ತ
ಲಬಲಬ ಎದೆ ಬಡಕೊಂಡರು ಇಲ್ಲಾ ತಿರುಗಿ ಬರೋದಿಲ್ಲ ಮತ್ತ

ಕಾಲ ಎಂಬ ಇಲಿ ಮೂಸಿ ನೋಡತದ ಬೀಪೀ ಷುಗರ್ರು ಪಾರ್ಶೀ
ಕ್ಯಾನ್ಸರ್ ಏಡ್ಸೋ ಹುಣ್ಣೋ ಮಣ್ಣೋ ಯಾವುದೋ ರೋಗಾ ಸೇರ್ಸಿ
***

ರೊಕ್ಕಾ ರೊಕ್ಕಾ ಗಳಿಸೂ ಗಳಿಸೂ ಬೊಜ್ಜ ಮೈಯಾ ಬೆಳಸೂ
ಸುತ್ತಲಿನವರು ಸತ್ರೂ ಕೆಟ್ರೂ ಕಟುಕಸ್ವಾರ್ಥದಲೆ ಗಳಸೂ

ತಂದೆ ತಾಯಿಗಳ ಕಾಲಲಿ ತಡಕೂ ಬಂಧೂ ಬಳಗಾ ಕಸಾ
ನಿಂದೇ ನೀನು ಹೆಂಡ್ರು ಮಕ್ಳೂ ನೀನೇ ಜಗತ್ತು ರಸಾ

ಆಶೆ ಮುಚ್ಚಿಕೊಂಡು ಪಾಶ ಹಚ್ಚಿಕೊಂಡು ಒಂದಿನ ಗೊಟಕ್ಕ ಅಂತಿ
ಮೋಸ ತಗಲು ವಿಷ ಕೂಪದಿ ಬಿದ್ದು ಜೀವನ ಮರ್ಮವ ಮರತಿ
***

ನಾಯಿ ನರಿಹಂಗೆ ಕಾಗೆ ಗೂಗಿ ಹಂಗೆ ಕತ್ತೆ ಕೋಣನ್ಹಂಗೆ
ಹಂದಿ ಹದ್ದಿನಂಗೆ ಇಲಿ ಹೆಗ್ಗಣದಂಗೆ ಕ್ರೂರಮೃಗಗಳಂಗೆ

ಪ್ರಾಣಿ ಪಕ್ಷಗಳ ಹೋಲಿಸಿ ಮಾನವ ಶ್ರೇಷ್ಠನೆಂಬುವುದು ತಪ್ಪು
ಅವುಗಳ ಗುಣಗಳು ಇವನಲ್ಲಿರುವುವೆ ಯೋಚಿಸಿ ನೋಡಿ ಒಪ್ಪು

ಹೇಗಿರಬೇಕೊ ಆಯಾ ಪ್ರಾಣೀ ಹಾಂಗೇ ಅವು ಬಾಳ್ತಾವೇ
ಸುಮ್ಮ ಸುಮ್ಮನೇ ಅವುಗಳ ನಿಂದಿಸಿ ಅಪಮಾನ ಮಾಡುತಿರುವೆ
****

ಹಿಂದಿನ ಹಿರೇರು ಹೇಳ್ತಾ ಬಂದ್ರು ನೀರಿನ ಗುಳ್ಳೇ ಜನ್ಮಾ
ಆದರು ಅದನ್ನೆ ಗಟ್ಯಾಗಿ ಹಿಡಿಕೊಂಡು ಸಾಗ್ಯಾದ ನಮ್ಮ ಕರ್ಮ

ಆತ್ಮಾ ಆತ್ಮಾ ಸಾದ್ಸು ಅಂದ್ರು ಅತ್ಮದ ಚಿಂತಿ ಬ್ಯಾಡೋ
ಇರುವ ಬದುಕನೇ ಸಾರ್ಥಕ ಹ್ಯಾಂಗೆ ಮಾಡಿಕೊಬೇಕು ನೋಡೊ

ನ್ಯಾಯದ ದಾರಿ ಸತ್ಯದ ದಾರಿ ಗಟ್ಟಿಯ ದಾರಿ ಹಿಡಿಯೊ
ನನ್ನ ಜನಗಳು ನಾನೂ ಒಂದೇ ಎಂಬುವ ವಿಚಾರ ಪಡಿಯೊ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...