Home / ಲೇಖನ / ಇತರೆ / ಕವಿ, ಪ್ರೇಮಿ, ಹುಚ್ಚ

ಕವಿ, ಪ್ರೇಮಿ, ಹುಚ್ಚ

ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್
ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್

ಪ್ರಿಯ ಸಖಿ,
ಕಾವ್ಯವೆಂದರೇನೆಂದು ಅನೇಕ ಕವಿಗಳು, ಪ್ರಾಜ್ಞರು ಅನಾದಿಕಾಲದಿಂದಲೂ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅದು  ಬೆಳಗಿಸುವ ಬೆಳಕು, ಮನಸ್ಸಿಗೆ ಹಿಡಿದ ಕನ್ನಡಿ, ಮಾನವೀಯ ಸಾಧ್ಯತೆ, ಅಂತರಂಗವನ್ನು ಅರಳಿಸುವ ಶಕ್ತಿ, ಪ್ರತಿಭೆ ಹೊರಹಾಕುವ ಒಂದು ಮಾರ್ಗ, ಬೌದ್ಧಿಕ ಆಟ, ಹಣ ಹೆಸರು ಮಾಡುವ ಒಂದು ದಾರಿ, ಆತ್ಮಸಂತೋಷ ನೀಡುವ ಸಾಧನ… ಹೀಗೆ ಒಬ್ಬೊಬ್ಬರದು ಒಂದೊಂದು ಉತ್ತರ. ಹಾಗೆ ನೋಡಿದರೆ ಕವಿತೆಯೊಂದು ಹೀಗೆ ಇರಬೇಕು. ಇಷ್ಟು ಸಾಲುಗಳು ಇಂತದೇ ರೂಪದಲ್ಲಿರಬೇಕು ಎಂದು ಯಾರೂ ಚೌಕಟ್ಟು ಹಾಕುವಂತಿಲ್ಲ. ಏಕೆಂದರೆ ಕಾವ್ಯ ಸೃಷ್ಟಿಯೆಂಬುದು ಅತ್ಯಂತ ವೈಯಕ್ತಿಕವಾದ ಸೃಜನಶೀಲ ಸೃಷ್ಠಿಕ್ರಿಯೆ. ಎಲ್ಲ ಚೌಕಟ್ಟುಗಳನ್ನು ಮೀರಿ ಕಾವ್ಯ ರಚಿಸುವುದೇ ಹೊಸ ಕಾವ್ಯದ ಸೃಷ್ಠಿಗೆ ಕಾರಣವಾಗುತ್ತದೆ!

ಎಷ್ಟೋ ಬಾರಿ ಕವನಗಳು ಓದುಗರಿಗೆ ಅರ್ಥವಾಗದೇ ಇರುವುದೂ ಉಂಟು. ಕವಿಯ ಭಾವೋತ್ಕಟತೆಯ ಹಂತವಮ್ನ ಮುಟ್ಟದೇ ಕಾವ್ಯದೊಳಗೆ ಪರಕಾಯ ಪ್ರವೇಶವನ್ನು ಮಾಡದ ಹೊರತು ಸಹೃದಯನಿಗೆ ಕವಿತೆ ಅರ್ಥವಾಗುವುದು ಸಾಧ್ಯವಿಲ್ಲ. ಹೀಗೆಂದೇ ಕವಿತೆಯೊಂದರ ಓದು ಬೇರೆ ಪ್ರಕಾರಗಳ ಸಾಹಿತ್ಯದ ಓದಿಗಿಂತಾ ಹೆಚ್ಚಿನ ಏಕಾಗ್ರತೆಯನ್ನು, ಏಕಾಂತವನ್ನು, ನಿರ್ಮಲ ಪ್ರಶಾಂತ ಮನಸ್ಥಿತಿಯನ್ನು ಅರ್ಥೈಸುವಿಕೆಯ ನಿಟ್ಟಿನಲ್ಲಿ ದೀರ್ಘಸಮಯವನ್ನು ಬಯಸುತ್ತದೆ.

ಕವಿ, ಪ್ರೇಮಿ, ಹುಚ್ಚ ಇವರು ಮೂವರು ಹೆಚ್ಚು ಕಡಿಮೆ ಒಂದೇ ಮನಸ್ಥಿತಿಯವರೆಂದು ಹಿಂದಿನಿಂದ ಹೇಳುತ್ತಾ ಬಂದಿದ್ದಾರೆ. ಹುಚ್ಚನ ಮನೋವ್ಯಾಪಾರ ಸಾಮಾನ್ಯರಿಗೆ ನಿಲುಕುವಂತಹದ್ದಲ್ಲ. ಅವನು ಭಾವೋತ್ಕರ್ಷದಲ್ಲಿ ಮಾತನಾಡುವಾಗ ಎದುರಿನವರಿಗೆ ಅದರ ಹಿನ್ನೆಲೆ, ತಲೆಬುಡ ಒಂದೂ ತಿಳಿಯುವುದಿಲ್ಲ. ಪ್ರೇಮಿಯೊಬ್ಬನ ಸ್ಥಿತಿಯೂ ಇಂತಹುದೇ ಉತ್ಕಟ ಪ್ರೇಮದ ಅಮಲಿನಲ್ಲಿರುವವನಿಗೆ/ಳಿಗೆ, ಪ್ರಪಂಚದ ತುಂಬೆಲ್ಲಾ ತನ್ನ ಪ್ರೇಮಿಯ ಪ್ರತಿರೂಪವೇ ಕಾಣುತ್ತಿರುತ್ತದೆ. ಹಗಲುಗನಸು ಕಾಣುತ್ತಾ ಲೋಕವನ್ನೇ ಮರೆತು ತಮ್ಮಷ್ಟಕ್ಕೆ ನಗುತ್ತಿರುವುದು ಪ್ರೇಮ ತೀವ್ರತೆಯಲ್ಲಿ ನಡೆಸುವ ಹುಚ್ಚಾಟಗಳು, ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಸಹಜವಾಗಿ ಅದವರಿಗೆ ಒಂದು ರೀತಿಯ ಹುಚ್ಚು ಎನ್ನಿಸುತ್ತದೆ. ಹಾಗೇ ಕವಿ ಕೂಡ. ಭಾವಜೀವಿಯಾದ ತನ್ನ ಭಾವತೀವ್ರತೆಯಲ್ಲಿ ಉಕ್ಕಿದ ಭಾವನೆಗಳನ್ನು ಕವನವಾಗಿಸುವ ಅವನ ಮನಸ್ಥಿತಿಯೂ ಎಲ್ಲರಿಗೂ ಅರ್ಥವಾಗುವಂತಹುದಲ್ಲ.

ಉಕ್ಕುವ ಕಡಲಾಗಿಬಿಟ್ಟೆ
ಬಯಲಿನ ಒಡಲಾಗಿಬಿಟ್ಟೆ
ಈ ಜಗದ ತಾಯಾಗಿಬಿಟ್ಟೆ!
ಎಂಬ ಸಾಲುಗಳನ್ನು ಓದಿದಾಗ ಹೀಗಾಗಲು ವಾಸ್ತವದಲ್ಲಿ ಎಂದಾದರೂ ಸಾಧ್ಯವೇ? ಎನಿಸಿ ಬಿಡುತ್ತದೆ. ಆದರೆ ಕವಿಯ ಭಾವ ಲೋಕದ ತೀವ್ರ ಸ್ಪಂದನೆಯಲ್ಲಿ ಎಲ್ಲವೂ ಸಾಧ್ಯ. ಈ ನಿಟ್ಟಿನಲ್ಲಿ ಕವಿಯೂ ಕೂಡ ಅರ್ಥವಾಗದವನೇ ! ಅವನನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಹೀಗಿರಬಹುದು, ಹಾಗಿರಬಹುದು ಎಂದು ಆರೋಪಿಸಿಕೊಂಡು ಕವನವನ್ನು ಓದುವವರೇ, ಅರ್ಥೈಸಿಕೊಳ್ಳುವವರೇ ಬಹುಮಂದಿ!

ಸಖಿ, ಕವಿ, ಹುಚ್ಚ, ಪ್ರೇಮಿಗಳು ಅರ್ಥವಾಗಲು ಅವರಂತದೇ ಸೂಕ್ಷ್ಮ ಸಂವೇದನೆಗಳುಳ್ಳ ಸಹೃದಯರಿಗೆ ಮಾತ್ರ ಸಾಧ್ಯ ಅಲ್ಲವೇ ? ಅಂತಹ ಸಹೃದಯರು ಇರಲಿ ಬಿಡಲಿ ಕವಿ, ಪ್ರೇಮಿಗಳು ಮಾತ್ರ ಎಲ್ಲ ಕಾಲದಲ್ಲೂ ಇರುತ್ತಾರೆ. ತಮ್ಮ ಸಂವೇವನೆಗಳನ್ನು ತಮ್ಮದೇ ಭಾವಲೋಕದ ಭಾಷೆಯಲ್ಲಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲವೇ ಸಖಿ ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...