Home / ಲೇಖನ / ಇತರೆ / ಧರ್ಮ ಪರಿಪಾಲಕನಾರು ?

ಧರ್ಮ ಪರಿಪಾಲಕನಾರು ?

ಪ್ರಿಯ ಸಖಿ,
ಜನರ ಓಡಾಟವಿಲ್ಲದ ರಸ್ತೆ ಮಧ್ಯದಲ್ಲಿ ವ್ಯಕ್ತಿಯೊಬ್ಬ, ಗಾಯಗೊಂಡು ಬಿದ್ದು ನರಳಾಡುತ್ತಿದ್ದಾನೆ. ಆ ದಾರಿಯಲ್ಲಿ ಬಂದ ಸನ್ಯಾಸಿಯೊಬ್ಬ ಮರುಕಗೊಂಡರೂ ತನಗೂ ಈ ವ್ಯಕ್ತಿಗೂ ಸಂಬಂಧವೇನು? ನನ್ನದೇನಿದ್ದರೂ ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿಯೇ ಗುರಿ ಎಂದುಕೊಂಡು ದೇವರ ನಾಮ ಸ್ಮರಿಸುತ್ತಾ ಮುನ್ನಡೆಯುತ್ತಾನೆ. ಮುಂದೆ ಇದೇ ಹಾದಿಯಲ್ಲಿ ಬಂದ ಧಾರ್ಮಿಕನೊಬ್ಬ ಗಾಯಾಳುವನ್ನು ನೋಡಿ ಕನಿಕರಗೊಂಡರೂ ಅವನು ಮಾಡಿದ ಕರ್ಮದಿಂದ ಹೋದ ಜನ್ಮದ ಪಾಪದಿಂದ ಅವನು ಸಂಕಟ ಅನುಭವಿಸುತ್ತಿದ್ದಾನೆ. ಇದಕ್ಕೂ ನನಗೂ ಏನೇನೂ ಸಂಬಂಧವಿಲ್ಲ ಎಂದುಕೊಂಡು ದೇವರ ಪೂಜೆಗೆ ಹೊತ್ತಾಗುತ್ತದೆ ಎಂದು ಗಡಿಬಿಡಿಯಿಂದ ಮುಂದೆ ಹೋಗುತ್ತಾನೆ. ಅದೇ ದಾರಿಯಲ್ಲಿ ಬಂದ ಸಾಮಾನ್ಯ ಮನುಷ್ಯನೊಬ್ಬ ಗಾಯಾಳುವನ್ನು ಕಂಡು ಹಿಂದೆ ಮುಂದೆ ನೋಡದೇ ತಕ್ಷಣವೇ ಅವನಿಗೆ ತುರ್ತು ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ನಡೆಸುತ್ತಾನೆ.

ಸಖಿ, ಈಗ ಹೇಳು ಇವರು ಮೂವರಲ್ಲಿ ನಿಜವಾದ ಧರ್ಮ ಪರಿಪಾಲಕನಾರು? ಖಂಡಿತವಾಗಿ ಗಾಯಾಳುವಿಗೆ ನೆರವಾದ ಕೊನೆಯ ಸಾಮಾನ್ಯ ವ್ಯಕ್ತಿಯೇ ನಿಜವಾದ ಧರ್ಮಪರಿಪಾಲಕ.

ಧರ್ಮವೆಂಬುದು ಒಳ್ಳೆತನವನ್ನೆಲ್ಲಾ ಎರಕಹೊಯ್ದು ನಾವೇ ಹಾಕಿಕೊಂಡಿರುವ ಒಂದು ಕಟ್ಟುಪಾಡು, ಅಥವಾ ನಿಗ್ರಹ. ಜಗತ್ತಿನ ಎಲ್ಲ ಧರ್ಮಗಳು ಸದಾ ಒಳಿತನ್ನೇ ಪ್ರತಿಪಾದಿಸಿದೆ. ಹಿಂಸೆ ಮಾಡಬೇಡ, ಸುಳ್ಳು ಹೇಳಬೇಡ. ಮೋಸ ಮಾಡಬೇಡ, ಕೊಲ್ಲಬೇಡ… ಇತ್ಯಾದಿ ಅನಾಚಾರಗಳು ಬೇಡವೆಂದು ಎಲ್ಲ ಧರ್ಮಗಳೂ ಹೇಳುತ್ತವೆ. ಹಾಗೇ ಸಜ್ಜನನಾಗಿರು, ಪರೋಪಕಾರಿಯಾಗಿರು, ಶುದ್ಧ ಮನಸ್ಕನಾಗಿರು, ಇತರರ ಹಿತಚಿಂತಕನಾಗಿರು, ಇತರರಿಗೆ ಒಳಿತನ್ನೇ ಮಾಡುವವನಾಗಿರು…. ಇತ್ಯಾದಿ ಒಳ್ಳೆಯತನದ ಉಪದೇಶಗಳು ಎಲ್ಲ ಧರ್ಮದಲ್ಲೂ ಇದೆ.  ಕೆಟ್ಟದ್ದನ್ನು ಮಾಡೆಂದು ಯಾವ ಧರ್ಮವೂ ಉಪದೇಶಿಸುವುದಿಲ್ಲ. ಹಾಗೇ ಎಲ್ಲ ಧರ್ಮಗಳ ಆಧಾರಸ್ತಂಭ ಮಾನವೀಯತೆಯೇ!

ಆದರೆ ನಾವು ಧರ್ಮವನ್ನು ಅರ್ಧೈಸಿಕೊಳ್ಳುವುವರಲ್ಲಿ ತಪ್ಪಿದ್ದೇವೆ. ಹಾಗೂ ಅದರ ಆಚರಣೆಯಲ್ಲಿ ತಪ್ಪಿದ್ದೇವೆ. ಎಲ್ಲ ತಪ್ಪುಗಳನ್ನು ಮಾಡಿಯೂ ದೇವರಿಗೆ ಕೈ ಮುಗಿದರೆ ಪಾಪ ಪರಿಹಾರವೆಂದು ಸಮಜಾಯಿಷಿ ಮಾಡಿಕೊಂಡಿದ್ದೇವೆ. ಹೀಗೆಂದೇ ಇಂದು ಎಲ್ಲೆಡೆ ಅನಾಚಾರ, ಅಶಾಂತಿ ಮನೆ ಮಾಡಿದೆ. ಧರ್ಮವನ್ನು ಆಡಂಬರಕ್ಕಾಗಿ, ತೋರ್ಪಡೆಗಾಗಿ, ಬಾಯಿ ಮಾತಿಗಾಗಿ, ಉಪಯೋಗಿಸುತ್ತಿರುವ ನಾವು ಅದರ ಒಳ ಅರ್ಥವನ್ನು ತಿಳಿದುಕೊಳ್ಳುವುದನ್ನು ಮರೆಯುತ್ತಿದ್ದೇವೆ. ಧರ್ಮವನ್ನು ದೇವರು, ಪೂಜೆ, ಮಂತ್ರ, ವ್ರತ, ಮೋಕ್ಷ ಮುಂತಾದವಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವೆ. ಇವೆಲ್ಲವುಗಳ ಮೂಲ ಒಳಾರ್ಥ ಮಾನವೀಯತೆಯೇ. ಅದನ್ನು ಒಳಗೊಂಡ ಒಳ್ಳೆಯ ವ್ಯಕ್ತಿಯೇ ನಿಜವಾದ ಧರ್ಮದ ಪರಿಪಾಲಕ ಆದ್ದರಿಂದಲೇ ಹುಟ್ಟಿನಿಂದಾದವನಲ್ಲ ಧಾರ್ಮಿಕ. ಆಚರಣೆಯಿಂದಾದವನೇ ಧಾರ್ಮಿಕ !

ಸಖಿ, ಕಣ್ಣ ಮುಂದೆ ನರಳುತ್ತಾ ಬಿದ್ದಿರುವ ಗಾಯಾಳುವನ್ನು ಮೊದಲು ಉಪಚರಿಸುವುದು ಧರ್ಮವೋ, ಲೌಕಿಕದ ಎಲ್ಲವನ್ನೂ ಬಿಟ್ಟು ಕಣ್ಮುಚ್ಚಿ ದೇವರನ್ನು ಜಪಿಸುತ್ತಾ ಕೂರುವುದು ಧರ್ಮವೋ ಇನ್ನಾದರೂ ವಿವೇಚಿಸಬೇಕಲ್ಲವೇ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...