Home / ಲೇಖನ / ಇತರೆ / ಧರ್ಮ ಪರಿಪಾಲಕನಾರು ?

ಧರ್ಮ ಪರಿಪಾಲಕನಾರು ?

ಪ್ರಿಯ ಸಖಿ,
ಜನರ ಓಡಾಟವಿಲ್ಲದ ರಸ್ತೆ ಮಧ್ಯದಲ್ಲಿ ವ್ಯಕ್ತಿಯೊಬ್ಬ, ಗಾಯಗೊಂಡು ಬಿದ್ದು ನರಳಾಡುತ್ತಿದ್ದಾನೆ. ಆ ದಾರಿಯಲ್ಲಿ ಬಂದ ಸನ್ಯಾಸಿಯೊಬ್ಬ ಮರುಕಗೊಂಡರೂ ತನಗೂ ಈ ವ್ಯಕ್ತಿಗೂ ಸಂಬಂಧವೇನು? ನನ್ನದೇನಿದ್ದರೂ ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿಯೇ ಗುರಿ ಎಂದುಕೊಂಡು ದೇವರ ನಾಮ ಸ್ಮರಿಸುತ್ತಾ ಮುನ್ನಡೆಯುತ್ತಾನೆ. ಮುಂದೆ ಇದೇ ಹಾದಿಯಲ್ಲಿ ಬಂದ ಧಾರ್ಮಿಕನೊಬ್ಬ ಗಾಯಾಳುವನ್ನು ನೋಡಿ ಕನಿಕರಗೊಂಡರೂ ಅವನು ಮಾಡಿದ ಕರ್ಮದಿಂದ ಹೋದ ಜನ್ಮದ ಪಾಪದಿಂದ ಅವನು ಸಂಕಟ ಅನುಭವಿಸುತ್ತಿದ್ದಾನೆ. ಇದಕ್ಕೂ ನನಗೂ ಏನೇನೂ ಸಂಬಂಧವಿಲ್ಲ ಎಂದುಕೊಂಡು ದೇವರ ಪೂಜೆಗೆ ಹೊತ್ತಾಗುತ್ತದೆ ಎಂದು ಗಡಿಬಿಡಿಯಿಂದ ಮುಂದೆ ಹೋಗುತ್ತಾನೆ. ಅದೇ ದಾರಿಯಲ್ಲಿ ಬಂದ ಸಾಮಾನ್ಯ ಮನುಷ್ಯನೊಬ್ಬ ಗಾಯಾಳುವನ್ನು ಕಂಡು ಹಿಂದೆ ಮುಂದೆ ನೋಡದೇ ತಕ್ಷಣವೇ ಅವನಿಗೆ ತುರ್ತು ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ನಡೆಸುತ್ತಾನೆ.

ಸಖಿ, ಈಗ ಹೇಳು ಇವರು ಮೂವರಲ್ಲಿ ನಿಜವಾದ ಧರ್ಮ ಪರಿಪಾಲಕನಾರು? ಖಂಡಿತವಾಗಿ ಗಾಯಾಳುವಿಗೆ ನೆರವಾದ ಕೊನೆಯ ಸಾಮಾನ್ಯ ವ್ಯಕ್ತಿಯೇ ನಿಜವಾದ ಧರ್ಮಪರಿಪಾಲಕ.

ಧರ್ಮವೆಂಬುದು ಒಳ್ಳೆತನವನ್ನೆಲ್ಲಾ ಎರಕಹೊಯ್ದು ನಾವೇ ಹಾಕಿಕೊಂಡಿರುವ ಒಂದು ಕಟ್ಟುಪಾಡು, ಅಥವಾ ನಿಗ್ರಹ. ಜಗತ್ತಿನ ಎಲ್ಲ ಧರ್ಮಗಳು ಸದಾ ಒಳಿತನ್ನೇ ಪ್ರತಿಪಾದಿಸಿದೆ. ಹಿಂಸೆ ಮಾಡಬೇಡ, ಸುಳ್ಳು ಹೇಳಬೇಡ. ಮೋಸ ಮಾಡಬೇಡ, ಕೊಲ್ಲಬೇಡ… ಇತ್ಯಾದಿ ಅನಾಚಾರಗಳು ಬೇಡವೆಂದು ಎಲ್ಲ ಧರ್ಮಗಳೂ ಹೇಳುತ್ತವೆ. ಹಾಗೇ ಸಜ್ಜನನಾಗಿರು, ಪರೋಪಕಾರಿಯಾಗಿರು, ಶುದ್ಧ ಮನಸ್ಕನಾಗಿರು, ಇತರರ ಹಿತಚಿಂತಕನಾಗಿರು, ಇತರರಿಗೆ ಒಳಿತನ್ನೇ ಮಾಡುವವನಾಗಿರು…. ಇತ್ಯಾದಿ ಒಳ್ಳೆಯತನದ ಉಪದೇಶಗಳು ಎಲ್ಲ ಧರ್ಮದಲ್ಲೂ ಇದೆ.  ಕೆಟ್ಟದ್ದನ್ನು ಮಾಡೆಂದು ಯಾವ ಧರ್ಮವೂ ಉಪದೇಶಿಸುವುದಿಲ್ಲ. ಹಾಗೇ ಎಲ್ಲ ಧರ್ಮಗಳ ಆಧಾರಸ್ತಂಭ ಮಾನವೀಯತೆಯೇ!

ಆದರೆ ನಾವು ಧರ್ಮವನ್ನು ಅರ್ಧೈಸಿಕೊಳ್ಳುವುವರಲ್ಲಿ ತಪ್ಪಿದ್ದೇವೆ. ಹಾಗೂ ಅದರ ಆಚರಣೆಯಲ್ಲಿ ತಪ್ಪಿದ್ದೇವೆ. ಎಲ್ಲ ತಪ್ಪುಗಳನ್ನು ಮಾಡಿಯೂ ದೇವರಿಗೆ ಕೈ ಮುಗಿದರೆ ಪಾಪ ಪರಿಹಾರವೆಂದು ಸಮಜಾಯಿಷಿ ಮಾಡಿಕೊಂಡಿದ್ದೇವೆ. ಹೀಗೆಂದೇ ಇಂದು ಎಲ್ಲೆಡೆ ಅನಾಚಾರ, ಅಶಾಂತಿ ಮನೆ ಮಾಡಿದೆ. ಧರ್ಮವನ್ನು ಆಡಂಬರಕ್ಕಾಗಿ, ತೋರ್ಪಡೆಗಾಗಿ, ಬಾಯಿ ಮಾತಿಗಾಗಿ, ಉಪಯೋಗಿಸುತ್ತಿರುವ ನಾವು ಅದರ ಒಳ ಅರ್ಥವನ್ನು ತಿಳಿದುಕೊಳ್ಳುವುದನ್ನು ಮರೆಯುತ್ತಿದ್ದೇವೆ. ಧರ್ಮವನ್ನು ದೇವರು, ಪೂಜೆ, ಮಂತ್ರ, ವ್ರತ, ಮೋಕ್ಷ ಮುಂತಾದವಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವೆ. ಇವೆಲ್ಲವುಗಳ ಮೂಲ ಒಳಾರ್ಥ ಮಾನವೀಯತೆಯೇ. ಅದನ್ನು ಒಳಗೊಂಡ ಒಳ್ಳೆಯ ವ್ಯಕ್ತಿಯೇ ನಿಜವಾದ ಧರ್ಮದ ಪರಿಪಾಲಕ ಆದ್ದರಿಂದಲೇ ಹುಟ್ಟಿನಿಂದಾದವನಲ್ಲ ಧಾರ್ಮಿಕ. ಆಚರಣೆಯಿಂದಾದವನೇ ಧಾರ್ಮಿಕ !

ಸಖಿ, ಕಣ್ಣ ಮುಂದೆ ನರಳುತ್ತಾ ಬಿದ್ದಿರುವ ಗಾಯಾಳುವನ್ನು ಮೊದಲು ಉಪಚರಿಸುವುದು ಧರ್ಮವೋ, ಲೌಕಿಕದ ಎಲ್ಲವನ್ನೂ ಬಿಟ್ಟು ಕಣ್ಮುಚ್ಚಿ ದೇವರನ್ನು ಜಪಿಸುತ್ತಾ ಕೂರುವುದು ಧರ್ಮವೋ ಇನ್ನಾದರೂ ವಿವೇಚಿಸಬೇಕಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...