Home / ಲೇಖನ / ಇತರೆ / ಧರ್ಮ ಪರಿಪಾಲಕನಾರು ?

ಧರ್ಮ ಪರಿಪಾಲಕನಾರು ?

ಪ್ರಿಯ ಸಖಿ,
ಜನರ ಓಡಾಟವಿಲ್ಲದ ರಸ್ತೆ ಮಧ್ಯದಲ್ಲಿ ವ್ಯಕ್ತಿಯೊಬ್ಬ, ಗಾಯಗೊಂಡು ಬಿದ್ದು ನರಳಾಡುತ್ತಿದ್ದಾನೆ. ಆ ದಾರಿಯಲ್ಲಿ ಬಂದ ಸನ್ಯಾಸಿಯೊಬ್ಬ ಮರುಕಗೊಂಡರೂ ತನಗೂ ಈ ವ್ಯಕ್ತಿಗೂ ಸಂಬಂಧವೇನು? ನನ್ನದೇನಿದ್ದರೂ ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿಯೇ ಗುರಿ ಎಂದುಕೊಂಡು ದೇವರ ನಾಮ ಸ್ಮರಿಸುತ್ತಾ ಮುನ್ನಡೆಯುತ್ತಾನೆ. ಮುಂದೆ ಇದೇ ಹಾದಿಯಲ್ಲಿ ಬಂದ ಧಾರ್ಮಿಕನೊಬ್ಬ ಗಾಯಾಳುವನ್ನು ನೋಡಿ ಕನಿಕರಗೊಂಡರೂ ಅವನು ಮಾಡಿದ ಕರ್ಮದಿಂದ ಹೋದ ಜನ್ಮದ ಪಾಪದಿಂದ ಅವನು ಸಂಕಟ ಅನುಭವಿಸುತ್ತಿದ್ದಾನೆ. ಇದಕ್ಕೂ ನನಗೂ ಏನೇನೂ ಸಂಬಂಧವಿಲ್ಲ ಎಂದುಕೊಂಡು ದೇವರ ಪೂಜೆಗೆ ಹೊತ್ತಾಗುತ್ತದೆ ಎಂದು ಗಡಿಬಿಡಿಯಿಂದ ಮುಂದೆ ಹೋಗುತ್ತಾನೆ. ಅದೇ ದಾರಿಯಲ್ಲಿ ಬಂದ ಸಾಮಾನ್ಯ ಮನುಷ್ಯನೊಬ್ಬ ಗಾಯಾಳುವನ್ನು ಕಂಡು ಹಿಂದೆ ಮುಂದೆ ನೋಡದೇ ತಕ್ಷಣವೇ ಅವನಿಗೆ ತುರ್ತು ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ನಡೆಸುತ್ತಾನೆ.

ಸಖಿ, ಈಗ ಹೇಳು ಇವರು ಮೂವರಲ್ಲಿ ನಿಜವಾದ ಧರ್ಮ ಪರಿಪಾಲಕನಾರು? ಖಂಡಿತವಾಗಿ ಗಾಯಾಳುವಿಗೆ ನೆರವಾದ ಕೊನೆಯ ಸಾಮಾನ್ಯ ವ್ಯಕ್ತಿಯೇ ನಿಜವಾದ ಧರ್ಮಪರಿಪಾಲಕ.

ಧರ್ಮವೆಂಬುದು ಒಳ್ಳೆತನವನ್ನೆಲ್ಲಾ ಎರಕಹೊಯ್ದು ನಾವೇ ಹಾಕಿಕೊಂಡಿರುವ ಒಂದು ಕಟ್ಟುಪಾಡು, ಅಥವಾ ನಿಗ್ರಹ. ಜಗತ್ತಿನ ಎಲ್ಲ ಧರ್ಮಗಳು ಸದಾ ಒಳಿತನ್ನೇ ಪ್ರತಿಪಾದಿಸಿದೆ. ಹಿಂಸೆ ಮಾಡಬೇಡ, ಸುಳ್ಳು ಹೇಳಬೇಡ. ಮೋಸ ಮಾಡಬೇಡ, ಕೊಲ್ಲಬೇಡ… ಇತ್ಯಾದಿ ಅನಾಚಾರಗಳು ಬೇಡವೆಂದು ಎಲ್ಲ ಧರ್ಮಗಳೂ ಹೇಳುತ್ತವೆ. ಹಾಗೇ ಸಜ್ಜನನಾಗಿರು, ಪರೋಪಕಾರಿಯಾಗಿರು, ಶುದ್ಧ ಮನಸ್ಕನಾಗಿರು, ಇತರರ ಹಿತಚಿಂತಕನಾಗಿರು, ಇತರರಿಗೆ ಒಳಿತನ್ನೇ ಮಾಡುವವನಾಗಿರು…. ಇತ್ಯಾದಿ ಒಳ್ಳೆಯತನದ ಉಪದೇಶಗಳು ಎಲ್ಲ ಧರ್ಮದಲ್ಲೂ ಇದೆ.  ಕೆಟ್ಟದ್ದನ್ನು ಮಾಡೆಂದು ಯಾವ ಧರ್ಮವೂ ಉಪದೇಶಿಸುವುದಿಲ್ಲ. ಹಾಗೇ ಎಲ್ಲ ಧರ್ಮಗಳ ಆಧಾರಸ್ತಂಭ ಮಾನವೀಯತೆಯೇ!

ಆದರೆ ನಾವು ಧರ್ಮವನ್ನು ಅರ್ಧೈಸಿಕೊಳ್ಳುವುವರಲ್ಲಿ ತಪ್ಪಿದ್ದೇವೆ. ಹಾಗೂ ಅದರ ಆಚರಣೆಯಲ್ಲಿ ತಪ್ಪಿದ್ದೇವೆ. ಎಲ್ಲ ತಪ್ಪುಗಳನ್ನು ಮಾಡಿಯೂ ದೇವರಿಗೆ ಕೈ ಮುಗಿದರೆ ಪಾಪ ಪರಿಹಾರವೆಂದು ಸಮಜಾಯಿಷಿ ಮಾಡಿಕೊಂಡಿದ್ದೇವೆ. ಹೀಗೆಂದೇ ಇಂದು ಎಲ್ಲೆಡೆ ಅನಾಚಾರ, ಅಶಾಂತಿ ಮನೆ ಮಾಡಿದೆ. ಧರ್ಮವನ್ನು ಆಡಂಬರಕ್ಕಾಗಿ, ತೋರ್ಪಡೆಗಾಗಿ, ಬಾಯಿ ಮಾತಿಗಾಗಿ, ಉಪಯೋಗಿಸುತ್ತಿರುವ ನಾವು ಅದರ ಒಳ ಅರ್ಥವನ್ನು ತಿಳಿದುಕೊಳ್ಳುವುದನ್ನು ಮರೆಯುತ್ತಿದ್ದೇವೆ. ಧರ್ಮವನ್ನು ದೇವರು, ಪೂಜೆ, ಮಂತ್ರ, ವ್ರತ, ಮೋಕ್ಷ ಮುಂತಾದವಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವೆ. ಇವೆಲ್ಲವುಗಳ ಮೂಲ ಒಳಾರ್ಥ ಮಾನವೀಯತೆಯೇ. ಅದನ್ನು ಒಳಗೊಂಡ ಒಳ್ಳೆಯ ವ್ಯಕ್ತಿಯೇ ನಿಜವಾದ ಧರ್ಮದ ಪರಿಪಾಲಕ ಆದ್ದರಿಂದಲೇ ಹುಟ್ಟಿನಿಂದಾದವನಲ್ಲ ಧಾರ್ಮಿಕ. ಆಚರಣೆಯಿಂದಾದವನೇ ಧಾರ್ಮಿಕ !

ಸಖಿ, ಕಣ್ಣ ಮುಂದೆ ನರಳುತ್ತಾ ಬಿದ್ದಿರುವ ಗಾಯಾಳುವನ್ನು ಮೊದಲು ಉಪಚರಿಸುವುದು ಧರ್ಮವೋ, ಲೌಕಿಕದ ಎಲ್ಲವನ್ನೂ ಬಿಟ್ಟು ಕಣ್ಮುಚ್ಚಿ ದೇವರನ್ನು ಜಪಿಸುತ್ತಾ ಕೂರುವುದು ಧರ್ಮವೋ ಇನ್ನಾದರೂ ವಿವೇಚಿಸಬೇಕಲ್ಲವೇ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...