Home / ಕವನ / ಕವಿತೆ / ಕನ್ನಡಮ್ಮ

ಕನ್ನಡಮ್ಮ

ರಾಜ್ಯೋತ್ಸವ ಬಂದೇ ಬಿಡುತ್ತದೆ
ಚಳಿಗಾಲ ಕಾಲಿಕ್ಕುತ್ತಿದ್ದಂತೆಯೇ
ಮುದುರಿದ ಕನ್ನಡಮ್ಮನ ಶೃಂಗಾರ
ನಾಡು ನುಡಿಗಳ ಹೊಗಳಿಕೆ
ರಾಜಕೀಯದವುಗಳ ಉದ್ದುದ್ದ ಭಾಷಣ
ಸಾಹಿತಿಗಳ ಹೊಗಳು ಭಟ್ಟಂಗಿ ಕೆಲಸ
ಪ್ರಶಸ್ತಿಗಳ ಸುರಿಮಳೆ.
ನಾಡಿನ ಜನರೇ ಎದ್ದೇಳಿ ಎದ್ದೇಳಿ
ಬರೆಯುವ ಕವಿಗಳ
ಕಾವ್ಯಕನ್ನಿಕೆ ಇತ್ತಿತ್ತಲಾಗಿ
ಸುಸ್ತಾಗಿ ಜೋಲಿ ಹೋಗಿ ಬೀಳುತ್ತಿದ್ದಾಳೆ.
ಆಯಿತಲ್ಲ ಕನ್ನಡಮ್ಮನಿಗೆ
ನೂರಾರು ಸಾವಿರಾರು ವರುಷಗಳು
ಹಸಿವು ಬಡತನ ನಿರುದ್ಯೋಗ
ಕನ್ನಡಮ್ಮ ಸಿಕ್ಕು ಒದ್ದಾಡುತ್ತಿದ್ದಾಳೆ,
ನಾಲಿಗೆ ತೊದಲುತಿದೆ
ನೆರೆ ರಾಜ್ಯಗಳ ಭಾಷೆಯಲಿ
ವಿದೇಶಿಯರ ವಿಲಾಸಗಳಲಿ
ಪಬ್ – ಡಿಸ್ಕೋ ಸಂಸ್ಕೃತಿಗಳಲಿ
ಅಷ್ಟೇ ಅಲ್ಲ
ತನ್ನ ಸ್ವಾರ್ಥ ರಾಜಕೀಯ
ಮಕ್ಕಳ ಅಧಿಕಾರ ದಾಹ ಕಚ್ಚಾಟಗಳಲಿ
ಸಾಹಿತಿಗಳ ಇಬ್ಬಗೆಯ ನೀತಿಗಳಲಿ
ಸಮಾಜದ ಕಳಂಕ ಲಂಪಟರ
ಧೂರ್ತ ಅನಾಚಾರ
ಅತ್ಯಾಚಾರರ ಹತ್ಯಾಕಾಂಡಗಳಲಿ

ಅಮ್ಮ ಕನ್ನಡಮ್ಮ
ಸುಸ್ತಾಗುತ್ತಿದ್ದಾಳೆ.
ಪ್ರತಿ ವರ್ಷಗಳ ರಾಜ್ಯೋತ್ಸವಗಳಲಿ
ಕನ್ನಡಮ್ಮನ ಮಕ್ಕಳು
ಏರಿದ್ದೆಷ್ಟೇ ಇದ್ದರೂ
ಅಮ್ಮ ಮಾತ್ರ ಇನ್ನೂ ಇನ್ನೂ
ಪ್ರಪಾತದಾಳಕ್ಕೆ ಇಳಿಯುತ್ತಲೇ ಇದ್ದಾಳೆ
ಭರ್ರನೆ ಬಂದು ಝರ್ರನೆ ಇಳಿದು ಹೋಗುವ
ರಾಜ್ಯೋತ್ಸವ ರಾಜಕೀಯ
ಉತ್ಸವಗಳಾಗುತ್ತಿವೆ,
ಕನ್ನಡಮ್ಮನಿಗೆ ಕ್ಯಾನ್ಸರ ಬಂದರೇನು ಗತಿ!
ಬನ್ನಿ ಎಲ್ಲರೂ
ಕನ್ನಡಮ್ಮನಿಗೆ ಪ್ರೀತಿ ಕೊಡೋಣ
ಸುತ್ತುವರಿಯೋಣ, ಕಾಯೋಣ
ಉಳಿಸಿಕೊಳ್ಳೋಣ
ಅವಳ ಮುಖದ ಮೇಲಿನ
ಶಾಂತ ಸ್ವರೂಪದ
ಸಂತೋಷದ ಹೆಮ್ಮೆಯ
ನಗು ಕಾಣೋಣ
ಬನ್ನಿ ಎಲ್ಲರೂ, ಬನ್ನಿ ಎಲ್ಲರೂ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...