Home / ಕವನ / ಕವಿತೆ / ಕೇಂದ್ರದ ಸುತ್ತ

ಕೇಂದ್ರದ ಸುತ್ತ

ಜನನದಿಂದ ಆ ಮರಣದವರೆಗೆ
ಜೀವನದ ಮಧ್ಯ ಮಹಜಾಲದುಡಿಗೆ

ಭೂಮ್ಯೋಮ ಭೂಮ ವಿನ್ಯಾಸವಿಹುದು
ಸಂಸಾರ ಮತ್ತು ಸನ್ಯಾಸವಿಹುದು

ಮನಮೊನೆಯ ಮೇಲೆ ಕುಳಿತಿಹುದು ಹರಣ
ಹಾರುವುದೆ ಅದರ ಅತ್ಯಂತ ಧ್ಯಾನ

ಹನಿಹನಿಯು ಕೂಡಿ ಹಗರಣದ ಹಣವು
ಸೋರುವುದೆ ಅದರ ಚಿರನವ್ಯ ಗುಣವು

ಚಣಚಣವು ಹರಿದು ಬಾಳಾಯ್ತು ನದಿಯು
ಕುಣಿಕುಣಿದ ಸೂತ್ರ ನಿರ್ಣಯದ ವಿಧಿಯು

ಅರಳುವುದು ಸುಮವು ತುಂಬುವುದು ಮನವು
ಹೊರಳುವುದು ನೆಲಕೆ ಅದೊ ನೋಡು ನೆನವು

ತೊಗಲುಡಿಕೆಯದಕೆ ಮಾಂಸಲದ ಜೆಲುವು
ಹಗಲುಡಿಗೆ ಕಳಚಿ ರಾತ್ರಿಯಲಿ ಎಲುವು

ಚಿರ ಯೌವನದಲಿ ಮೆರೆಯುವಳು ಮುದುಕಿ
ನವ ಭಾವದಲ್ಲಿ ಬುದ್ದಿಯನು ಮುಸುಕಿ

ನಗು ಹೂವು ನೋಡ ಅಳುದೇಟಿಗಂಟಿ
ಸುಖ ಚೆಂಗುಲಾಬಿ ನೋವಾಗೆ ಕಂಟಿ

ಬಂದಿಹುದು ಪ್ರಾಣ ಇರಲಿಕೇನಲ್ಲ
ಬಂದಿಹುದು ವಯಸು ಚಿರವಾಗಿಯಲ್ಲ

ಅಹ ಸೃಷ್ಟಿ ಮೂಲ ಬಹು ಚಿತ್ರ ಚಿತ್ರ
ನಗುತಿಹುದು ತತ್ವ ತಿಳಿದಂಥ ನೇತ್ರ

ನೆರೆದಂತೆ ಜಾತ್ರೆ ಮರುದೀನಕೆ ಬಯಲು
ಬಯಲಾಟ ರಾತ್ರಿ ಬೆಳಗಾಗೆ ಬಯಲು

ಬೀಸಿದಳು ಅಕ್ಕ ಬಯಲಿನಲಿ ಬಟ್ಟೆ
ಬಟ್ಟೆಯನು ಹಿಡಿಯೆ ಅದು ಮೂರ ಬಟ್ಟೆ

ಸೆಳೆಹುದು ಜಾಲ ಹಣ ಬೆಡಗಿನಲ್ಲಿ
ನಂದನದಿ ಬಾಲ ಬೆರಗಾಗಲಿಲ್ಲಿ

ನಗುವೇನು ಆಟ ಹರಿದಾಟಗಳಲಿ
ಚಿಗುರುವುದು ಒಗರು ಹಾರಾಟಗಳಲಿ

ಸೂತ್ರಕ್ಕೆ ಕುಣಿದು ಮೈಮೈಯ ಮಣಿದು
ಪಾತ್ರಗಳ ಬಣ್ಣ ಬಣ್ಣದಲಿ ಹೆಣೆದು

ಮಳೆ ಬಂದು ನಿಂತ ಅಡವಿಯಲಿ ಮೌನ
ಇಳೆಗಾಯ್ತು ಧನ್ಯದೋಕುಳಿಯ ಮಾನ

ಬೀಜಕ್ಕೆ ಇಳೆಗೆ ಬರುವಂಥ ತವಕ
ಬೇನೆಯಲಿ ಬಳಲಿ ಜೀವರಸ ಪಾಕ

ಆಕ್ರಂದನಕ್ಕೆ ತೊಟ್ಟಲಿನು ಕಟ್ಟಿ
ಆನಂದವೆನುತ ಹೆಸುರಿಟ್ಟು ತಟ್ಟಿ

ತಾಯ್ತನದ ಸಿರಿಯ ಹೂ ಮಾಲೆ ಮುಡಿದು
ಬೀಗುವುದು ಕಲ್ಲು ಹಿರಿತನವ ಪಡೆದು

ಅತ್ತಿತ್ತ ಕಾಲ ಲಯದಲ್ಲಿ ಹಾಕಿ
ಒಂದೆರಡು ಒಡೆದು ಒಂದಾಗಿ ಸೋಕಿ
ಕೇಂದ್ರವನೆ ಹಿಡಿದು ಸುತ್ತಲೂ ಸುತ್ತಿ
ಜೀವಾಣು ಬಹುದು ಕೇಂದ್ರಕ್ಕೆ ಒತ್ತಿ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...