Home / ಲೇಖನ / ವಿಜ್ಞಾನ / ಮಾಲಿನ್ಯ ರಹಿತ ಪ್ಲಾಸ್ಟಿಕ್

ಮಾಲಿನ್ಯ ರಹಿತ ಪ್ಲಾಸ್ಟಿಕ್

ಈಗಿರುವ ಪ್ಲಾಸ್ಟಿಕ್ ವಾಯುಮಾಲಿನ್ಯ, ಜಲಮಾಲಿನ್ಯ, ಮಾಡುತ್ತ ಮನುಕುಲಕ್ಕೆ ಮಾರಕವಾಗಬಲ್ಲದೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಎಷ್ಟು ವರ್ಷಗಳಾದರೂ ಮಣ್ಣಿನಲ್ಲಿ ಕರಗದ ಈ ಪ್ಲಾಸ್ಟಿಕ್ ಅಸಂಖ್ಯಾತ ಮೂಕ ಪ್ರಾಣಿಗಳ ಬಲಿ ತೆಗೆದುಕೊಂಡಿದ್ದರೆ, ಭೂಮಿಯನ್ನು ಶುಷ್ಕಗೊಳಿಸುವಲ್ಲಿ ಅತಂಕಗೊಳಿಸಿ ಸಸ್ಯಗಳ ಬೆಳವಣಿಗೆ- ಯಾದಂತೆ ಮಾಡುತ್ತಿರುವುದೊಂದು ದುರಂತ. ಈ ಕಾರಣವಾಗಿ ಪರಿಸರಕ್ಕೆ ಮಾರಕವಾಗದೇ ಇರುವ ಮತ್ತು ಈಗಿನ ಪ್ಲಾಸ್ಟಿಕ್‌ನಂತೆ ಪಾರದರ್ಶಕವಾಗಿರುವ ಹೊಸ ಆವಿಷ್ಕಾರದ ಶೋಧನೆಯನ್ನು ವಿಜ್ಞಾನಿಗಳು ಮಾಡುತ್ತಲೇ
ಬರುತ್ತಿದ್ದಾರೆ.

ಕ್ರಿ.ಶ. 1879ರಲ್ಲಿಯೇ ಮಣ್ಣಿನಲ್ಲಿ ಕರಗಿ ಹೋಗುವ ಸಕ್ಕರೆಯ ಕಣಗಳಿಂದ ತಯಾರಿಸಿದ ಪ್ಲಾಸ್ಟಿಕ್ ಅನ್ನು ಅಮೇರಿಕದ ಮುದ್ರಕರೊಬ್ಬರು ಮೊಟ್ಟ ಮೊದಲ ಬಾರಿಗೆ ತಯಾರಿಸಿದ್ದರು. ಇದು ಬೆಳವಣಿಗೆ ಹೊಂದುವುದರಲ್ಲಿಯೇ 1909ರಲ್ಲಿ ಪೆಟ್ರೋಲಿಯಂ ಆಧಾರಿತ ಕೃತಕ ಪ್ಲಾಸ್ಟಿಕ್ ಬಂದ ನಂತರ ಮೊದಲಿನ ಪ್ಲಾಸ್ಟಿಕ್ ಮೂಲೆ ಗುಂಪಾಗಿ ಹೋಯಿತು.
ನಂತರ ಇದೇ ಒಂದು ಪರಿಸರಕ್ಕೆ ಮಾರಕವಾಗಿ ಕಾಡತೊಡಗಿತು.

ಸರಳವಾದ ಕ್ರಾಂತಿಕಾರಿ ತಂತ್ರ ಬಳಸಿ ಪ್ಲಾಸ್ಟಿಕ್ ತಯಾರಿಸಿದಲ್ಲಿ ಈ ಭೂಖಂಡ ಬಚಾವಾಗುವುದೆಂದು ಅರಿತ ವಿಜ್ಞಾನಿಗಳು “ಅಲ್ಕಾನಿಗೇನಿಸ್” ಒಂದು ಜಾತಿಯ ಬ್ಯಾಕ್ಟೀರಿಯಾದ ದೇಹದಲ್ಲಿ ಪ್ಲಾಸ್ಟಿಕ್‌ನಂತಹ ವಸ್ತುಸಂಗ್ರಹ- ವಾಗುತ್ತದೆಂದು ತಿಳಿಯಿತು. ಈ ಏಕಕೋಶ ಜೀವಿಗಳಲ್ಲಿ ತಮ್ಮ ತೂಕದ ಶೇಕಡ 99 ಭಾಗ ಪ್ಲಾಸ್ಟಿಕ್ ಜಿಗುಟು ದ್ರವ ಇದೆ ಎಂದು ವರ್ಜಿನಿಯಾದ ವಿಜ್ಞಾನಿಗಳು ಕಂಡುಹಿಡಿದರು. ಈ ಬ್ಯಾಕ್ಟೀರಿಯಾಗಳ ವಂಶವಾಹಿನಿಯನ್ನು ಅಭಿವೃದ್ಧಿ ಪಡಿಸಿ ಅಗತ್ಯವಿರುವಷ್ಟು ಪ್ಲಾಸ್ಟಿಕ್ ತಯಾರಿಸಬಹುದು. ಈ ತಂತ್ರವನ್ನು ಅಮೇರಿಕಾದಂತಹ ದೇಶವು ಹಿಂದುಳಿದ ರಾಷ್ಟ್ರಗಳಿಗ ಬಿಟ್ಟು ತೊಡದೇ ತಮ್ಮ ಹಳೆ ತಂತ್ರಜ್ಞಾನವನ್ನೇ ಸಾಗುಹಾಕುತ್ತದಾದ್ದರಿಂದ ಈಗಿನ ಪ್ಲಾಸ್ಟಿಕ್ ಸುಗ್ಗಿ ಹೆಚ್ಚಿ ಪರಿಸರ ನಾಶವಾಗುತ್ತಿರುವುದು. ಮುಂದೊಂದು ದಿನ ಈ ಹೊಸ ಫಲಶೃತಿಯನ್ನು ಅನುಭವಿಸುವ
ಕಾಲವೂ ಬರಬಹುದು.

ಇನ್ನೊಂದು ಸಂತೋಷದ ಸುದ್ದಿ ಎಂದರೆ ಜೋಳದ ತೆನೆಯಿಂದ ಹಾಗೂ ಕಾಳುಗಳಿಂದ ಮಣ್ಣಿನಲ್ಲಿ ಒಂದಾಗುವ ಪ್ಲಾಸ್ಟಿಕ್ ಅನ್ನು ತಯಾರಿಸಿಬುದೆಂದು ಇನ್ನೊಂದೆಡೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೇರಿಕಾದ ರಾಷ್ಟ್ರೀಯ ಪ್ರಯೋಗ ಶಾಲೆಯಲ್ಲಿ ಅಲೂಗಡ್ಡೆ ಸಿಪ್ಪೆಯಿಂದ ಪ್ಲಾಸ್ಟಿಕ್‌ನ್ನು ಈಗಾಗಲೇ ತಯಾರಿಸುತ್ತಿದ್ಧಾರೆ. ಉತ್ತರ ಭೂಭಾಗದಲ್ಲಿ ವಾಸಿಸುವ ಜನರು ರಾಶಿ ರಾಶಿ ಆಲೂಗಡ್ಡೆಯನ್ನು ತಿನ್ನುತ್ತಾರೆ ಮತ್ತು ಬಹುತೇಕ ಕಡೆ ಆಲೂಗಡ್ಡೆ- ಯನ್ನು ಯತೇಚ್ಚವಾಗಿ ಬೆಳೆಯಲಾಗುತ್ತದೆ. ಈ ಸಿಪ್ಪೆಯನ್ನೆಲ್ಲ ಪ್ಲಾಸ್ಟಿಕ್ ತಯಾರಿಸಲು ಬಳಸಿದರೆ ಇಂದಿನ ಪರಿಸರ
ಮಾಲಿನ್ಯದ ಸಮಸ್ಯೆಗ ಉತ್ತರ ಸಿಗಬಹುದು. ಇದು ಜೈವಿಕ ಪ್ಲಾಸ್ಟಿಕ್ ತಯಾರಿಸುವ ತಂತ್ರವಾಗಿದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್