Home / ಲೇಖನ / ವಿಜ್ಞಾನ / ಮಣ್ಣುತಿನ್ನುವುದು ಆರೋಗ್ಯಕ್ಕೆ ಹಿತಕರ

ಮಣ್ಣುತಿನ್ನುವುದು ಆರೋಗ್ಯಕ್ಕೆ ಹಿತಕರ

“ಸಾಮಾನ್ಯವಾಗಿ ತಪ್ಪು ಮಾಡಿದ್ದರೆ ಮಣ್ಣುತಿನ್ನು ಹೋಗು” ಎಂದು ಉಡಾಫೆಯಾಗಿ ಹೇಳುವ ಜನರಿದ್ಧಾರೆ. ಒಂದರ್ಥದಲ್ಲಿ ಇದು ತಿನ್ನಲು ಯೋಗ್ಯವಲ್ಲದ್ದು ಎಂದೇ ಭಾವನೆ. ಅಥವಾ ಮಣ್ಣನ್ನು ಯಾರು ತಿನ್ನಲಾರರೆಂದೇ ಜನರ ನಂಬಿಕೆ. ಆದರೆ ಇತತ್ತೀಚಿನ ವೈಜ್ಞಾನಿಕ ಪ್ರಯೋಗಗಳ ಪ್ರಕಾರ ಮಣ್ಣು ಒಂದು ಆರೋಗ್ಯವರ್ಧಕ ಪದಾರ್ಥವೆಂದು ದೃಢಪಟ್ಟದೆ. ಇದರಲ್ಲಿ ಅನೇಕ ಪೌಷ್ಟಿಕಾಂಶಗಳು ಇವೆ; ಎಂದು ಸಾಬೀತಾದ ಮಾತು. ಕೆನಡಾದ ಇಬ್ಬರು ವಿಜ್ಞಾನಿಗಳು ಉತ್ತರಕೆರೋಲಿನಾ, ಚೀನಾ ಮತ್ತು ಜಿಂಬಾಬ್ವೆಯಲ್ಲಿ ಕೈಕೊಂಡ ಅಧ್ಯಯನದಿಂದ ಕಂಡು ಕೊಂಡಿದ್ದಾರೆ. ಶುದ್ದವಾದ ಹಳೆಯ ಮಣ್ಣು ಉತ್ತಮ ವಸ್ತುವೆಂದು ಸಂಶೋಧಕರ ಲ್ಲೊಬ್ಬರಾದ ಸುಸಾನ್ ಔಪ್ರೀಟರ್ ತಿಳಿಸುತ್ತಾರೆ. ಅದರಲ್ಲೂ ಭೂಮಿಯೊಳಗಿನ ಮಣ್ಣು ಕಬ್ಬಿಣ ಮತ್ತು ಅಯೋಡಿನ್‌ಗಳಿಂದ ಸಮೃದ್ಧವಾಗಿದ್ದರಿಂದ ಮಕ್ಕಳು ಮತ್ತು ಗರ್ಭಿಣಿಯರು ಉಪಯೋಗಿಸುತ್ತಾರೆ. ಅದರಲ್ಲೂ ಗರ್ಭಿಣಿಯರಿಗೆ ಈ ಮಣ್ಣು ಉತ್ತವು ಪೋಷಕಾಂಶ
ವೆಂದೂ ಅವರು ಹೇಳುತ್ತಾರೆ. (ವರದಿ : ಡ್ಯಾನ್‌ಬರಿ ಅಮೇರಿಕಾ ಅ. 26-1997)

ರೋಮನ್ನರು ಮಣ್ಣು ಮತ್ತು ಆಡಿನ ರಕ್ತವನ್ನು ಸೇರಿಸಿ ಮಾತ್ರೆಗಳನ್ನು ಮಾಡಿ ಉಪಯೋಗಿಸುತ್ತಿದ್ದರು. ಕಳೆದ ಶತಮಾನದಲ್ಲಿ ಜರ್ಮನ್ನರು ಬ್ರೆಡ್ಡಿನೊಂದಿಗೆ ಬೆಣ್ಣೆಯ ಬದಲು ಮಣ್ಣನ್ನು ಉಪಯೋಗಿಸುತ್ತಿದ್ದರಂತೆ. ಆಫ್ರಿಕಾದಲ್ಲಿ ಅಜೀರ್ಣವಾದವರಿಗೆ ಈ ಮಣ್ಣನ್ನೇ ಔಷಧಿಯನ್ನಾಗಿ ತಿನ್ನಲು ಕೊಡುತ್ತಾರೆ. ಈ ಮಣ್ಣಿನ ಸೇವನೆಯಲ್ಲಿ  ಉಪಕಾರಿಯಾಗಬಲ್ಲ ಅಂಶಗಳ ಬಗ್ಗೆ ಕೂಲಂಕುಷವಾಗಿ ಮನಗಾಣಲು ಟೋರಾಂಟೋ ವಿ. ವಿ. ಯ ಪ್ರಯೋಗಾಲಯದ ವಿಶ್ಲೇಷಕಿ ಡಾ|| ಸೂಸನ್ ಮತ್ತು ಯಾಕ್೯ ವಿ. ವಿ.ಯ ಪ್ರೊ.ವಿಲಿಯಂ ಮ್ಯಾಹನಿ ಅವರು ಅನೇಕ ಪ್ರಯೋಗ ನಡೆಯಿಸಿ ಒಪ್ಪಿಕೊಂಡರು. ಚೀನಾದ ಹುನಾನ್ ಪ್ರಾಂತ್ಯದ ಹಳದಿ ಮಿಶ್ರಿತ ಮೆದು ಮಣ್ಣಿನಲ್ಲಿ ಕಬ್ಬಿಣ, ಕ್ಯಾಲ್ಪಿಯಂ, ಮೆಗ್ಲೀಶಿಯಂ, ಪೊಟ್ಯಾಶಿಯಂ ಮತ್ತು ಇತರ ಖನಿಜಗಳಿವೆ. ಜಿಂಬಾಬ್ವೆಯ ಕೆಲವು ಮಣ್ಣಿನಲ್ಲಿ ಲಿನೈಟ್ ಪೌಷ್ಠಿಕಾಂಶ ಇರುವುದಾಗಿ ವಿಜ್ಞಾನಿಗಳು ತಿಳಿಸುತ್ತಾರೆ. ಮಣ್ಣಿನಿಂದಲೇ ನಮ್ಮನ್ನು ರಕ್ಷಿಸುವ ಬೆಳೆಗಳು ಬೆಳೆಯುತ್ತವೆ. ನೀರು, ಖನಿಜಗಳು ದೊರೆಯುತ್ತವೆ. ಜೀವರಕ್ಷಕ ವಿಟ್ಯಾಮಿನ್‌ಗಳು ಈ ಮಣ್ಣಿನಲ್ಲಿ ಇರುವುದರಿಂದಲೇ ಜೀವೋದ್ಭವ- ವಾಗುತ್ತದೆ. ಆದರೆ ಮಣ್ಣು ಕೊಳಕು ಪದಾರ್ಥವೆಂದು ಮಣ್ಣಿನ ಬದಲಾಗಿ ಜೀವರಕ್ಷಕ ಬೆಳೆಗಳ ಆಹಾರವಿರುವಾಗ ಬಹುತೇಕ ಜನ ತಿನ್ನುವುದಿಲ್ಲ ಮತ್ತು ಉದರದೊಳಗಿನ ನರಮಲಡಗಳ ತಂತುಗಳಲ್ಲಿ ಮುಣ್ಣು ಲೇಪನಗೊಂಡು
ನರಮಂಡಲದ ಕ್ರಿಯಾಶೀಲತೆಗೆ ತೊಡಕಾಗಲೂ ಬಹುದೆಂದು ಕೆಲವರ ಅಭಿಪ್ರಾಯ, ಆದ್ದರಿಂದ ಬಹುತೇಕ ಜನ ಮಣ್ಣು ತಿನ್ನಲಾರರು. ಒಂದು ವೇಳೆ ತಿಂದರೆ ಕೆಟ್ಟದ್ದೇನಲ್ಲ ಅಪಾಯಕಾರಿಯಾಗಲಾರದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...