Home / ಲೇಖನ / ವಿಜ್ಞಾನ / ಭವಿಷ್ಯದ ಕ್ರಾಂತಿಕಾರದ ಔಷಧಿಗಳು

ಭವಿಷ್ಯದ ಕ್ರಾಂತಿಕಾರದ ಔಷಧಿಗಳು

ಮಾನವನ ವಂಶವಾಹಿನಿಯಲ್ಲಿರುವ ಸುಮಾರು 3 ಬಿಲಿಯನ್ D.N.A. ಗಳಲ್ಲಿ ಶೇ.25 ರಷ್ಟು ವ್ಯಾಧಿಕಾರಕವೆ೦ದು ಗುರುತಿಸಲಾಗಿದೆ.. ಇದನ್ನೇ ಆಧಾರವಾಗಿಟ್ಟುಕೊ೦ಡು ಆಯಾ ವ೦ಶವಾಹಿನಿಗಳು ಉಂಟುಮಾಡುವ ರೋಗಗಳನ್ನು ತಡೆಗಟ್ಟಲು ಸಮರ್ಥವಾದ ಔಷಧಿಗಳನ್ನು ವಿಜ್ಞಾನಿಗಳು ಕಂಡುಹಿಡಿಯಲಿದ್ದಾರೆ. ಇದರಿ೦ದ ರೋಗಿಯ ‘ಬಯೋಕೆಮಿಸ್ಟ್ರಿ’ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಚುಚ್ಚುಮದ್ದಿನ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅಸ್ತಮಾಗೆ ಉಪಯೋಗಿಸುವ ‘ಇನ್‌ಹೇಲರ್’ ಗಳಂತೆ ಉಸಿರಿನೊಂದಿಗೆ ಎಳೆದುಕೊಳ್ಳುವ ರೂಪದಲ್ಲಿ ಹಲವಾರು ಔಷಧಿಗಳು ಮಾರುಕಟ್ಟೆಗೆ ಬರಲಿದೆ. ನಾವು ಪ್ರತಿದಿನ ತಿನ್ನುವ ಆಹಾರದೂ೦ದಿಗೆ ದೇಹದೊಳಗೆ ಸೇರುವ ಔಷಧಿಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಕೆಲಸ ಮಾಡುವ ಮಾತ್ರೆಗಳು ಬರುತ್ತವೆ. ಗಂಭೀರ ಆಹಾರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸುಲಭವಾಗಿ ಉಪಯೋಗಿಸಲು ಮತ್ತು ಶೀಘ್ರ ಉಪಶಮನವನ್ನು ನೀಡುವ ಔಷಧಿಗಳು ಅಂಗಡಿಗಳಿಗೆ ಬರಲಿದೆ. ಮುಖ್ಯವಾಗಿ ಟಿ.ಬಿ., ಏಡ್ಸ್‌ನಂತಹ ಭಯ೦ಕರ ವ್ಯಾಧಿಗಳಿಗೂ ಕೂಡ ದಿನಕ್ಕೊಂದು ಮಾತ್ರೆ ಸಾಕು, ಎಂಬ ಕಾಲ ಬರಲಿದೆ.

ಕೆಲವು ಔಷಧಿಗಳು ಬಕ್ಕತಲೆಯ ಮೇಲೆ ಕೂದಲು ಬೆಳೆಸಲು ಉಪಯೋಗವಾದರೆ, ಕೂದಲು ಉದುರುವುದನ್ನು ತಡೆಗಟ್ಟುವಂಥಹ ಔಷಧಿಗಳನ್ನು ಚಿಕಾಗೋ ವಿಶ್ವವಿದ್ಯಾನಿಲಯದ ಸ೦ಶೋಧನಾವೃಂದವು ವಿಧಾನವನ್ನು (ಹೊಸ) ಕಂಡುಹಿಡಿದಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಹೆಚ್.ಲೀ. ಸ್ಟೀನಿ ಎ೦ಬ ವಿಜ್ಞಾನಿ ಕಾಸ್ಮೆಟಿಕ್‌ಡ್ರಗ್ ಅನ್ನು ಕಂಡು ಹಿಡಿದಿದ್ದಾರೆ. ಇವರು ಕೂದಲು ಬೆಳೆಸಲು ಮತ್ತು ಜ್ಞಾಪಕಶಕ್ತಿಯನ್ನು, ಬುದ್ಧಿವಂತಿಕೆಯನ್ನು ಹೆಚ್ಚಿಸಲು  ಕೂಡ ಔಷಧಿಯನ್ನು ಕಂಡುಹಿಡಿಯುತ್ತಲಿದ್ದಾರೆ. ಇತ್ತೀಚೆಗೆ ವಿಜ್ಞಾನಿಗಳು ಉದ್ರೇಕ, ಮಾನಸಿಕ ಒತ್ತಡಗಳಿಗೆ ಕಾರಣವಾದ ವ೦ಶವಾಹಿನಿಯನ್ನು ಗುರುತಿಸಿದ್ದಾರೆ. ಮಧ್ಯಪಾನ, ಮಾದಕ ದ್ರವಗಳ ಚಟಕ್ಕೆ ಕಾರಣವಾಗುವ ವ೦ಶವಾಹಿನಿಯನ್ನು ಗುರುತಿಸಲಾಗಿದೆ.

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...