ಮರುಗುವೆಯ ನೀ ಗೆಳೆಯ ನಮ್ಮ ನಾಡಿನ ಪರಿಗೆ:
ಜನವಿದಭಿಮಾನಕೃಪಣಮಸೂಯಾಭೂಯಿಷ್ಠ-
ಮನುಕರಣಪಟು ನಟನಶೀಲಮನವಸ್ಥಿತಂ
ಸಿರಿಯೊ ತಂದ್ರೋಪಹತಮುಚ್ಛಿಷ್ಟಭೋಗಿಮನ-
ಮಸುರಲೋಭೋತ್ಸೃಷ್ಟವಿಜ್ಞಾನಯಂತ್ರಮದ-
ವಾರಣಾವಿಷ್ಟ ನಾಗರಿಕ ನಿಸ್ವಾದು ನಿ-
ಸ್ಸಾರಜೀವನಂ ಸ್ವಲ್ಪಾರ್ಥಮಲ್ಪಕಾಮಂ
ವಿಸರ್ಜಿತಶಿವಮಹೋ ವಿಗಳಿತಾತ್ಮವಿದೆಂದು?
ಆಲಿಸು ಸುನಾಯಿಯನು ಕಲ್ಯಾಣದಾಯಿಯನು!
ಇರವಿನಂತರ್ನಭದ ವೈಶಾಲ್ಯವಾಳಗಳ
ಅರಿವಿನೊಳಗುಜ್ವಲಿಸುವಾತ್ಮಾನುಭೂತಿಗಳ
ಕಾಲಕಾಲವಕ್ರಮಿಸುತದ್ಯದೊಳೆ ತೋರುತಿದೆ
ಸ್ವರ್ಣಸ್ವಪ್ನಾಂಬರವ ತಾಯ್ನೆಲಕೆ ಮರಳಿಯುಡಿಸಿ
ಕೃಷ್ಣೆಗೊದವಿದ ದೈವಕರುಣೆಯೊಲು ಖೇದವಳಿಸಿ.
*****

















