Home / ಕವನ / ಕವಿತೆ / ಅಭಿಸಾರಿಕೆಯು

ಅಭಿಸಾರಿಕೆಯು

ನಾನಭಿಸಾರಿಕೆ ಹೊರಟಿಹೆನೂ ನಲ್ಲನಕೂಡಲು ರಾತ್ರಿಯೊಳೂ
ರಾಧೆಯು ಕೃಷ್ಣನ ಸಂಗದೊಳೂ, ಕೂಡಿದವೋಲ್ನಾ ಕೂಡುವೆನೂ ||

ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ |
ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ ||

ಬಿಂಕವ ಮೆರೆಯಲು ನಾನಿಂದೂ, ಶಂಕಿಸುವುದು ಜನಜಾರಿಣಿಯೂ |
ಶಂಕಿಪಜನರ ಕಣ್ಣೊಳಗೇ, ತೂರುವೆ ಮಣ್ಣನು ನಾನಿಂದೂ ||

ದ್ರೌಪದಿಯೈವರ ವರಿಸಿದಳೂ, ನನ್ನಯಗಂಡರು ಮೂರೆರಡೂ
ಪತಿಯರು ದೇಹವಕೊಂಡಿಹರೂ, ಮನವನು ಕದ್ದಿಹ‌ಮಾರಮಣಾ ||

ಪತಿಯರು ಮನವನು ಕಳವುದಕೇ, ಸತತದಿ ಯತ್ನವಮಾಡುವರೂ |
ಪತಿಯರ ಮೂಲೆಗೆಯೊತ್ತುತ್ತೇ, ನಡೆದಿಹೆನೆಲ್ಲನ ಕೂಡ್ವುದಕೇ ||

ಕಾಮನು ಕ್ರೋಧನು ಮೋಹನನೂ, ಮತ್ಸರ ಮದದಂಭಾದಿಗಳೂ |
ಪತಿಗಳು ನನ್ನನು ಶೆಳೆಯುವರೂ, ಗತಿಕಾಣಸದೆ ನಾಹೊರಟಿಹೆನೂ ||

ಅತಿ ದಾರುಣವಿದು ಕಾಯಕವೂ, ಪತಿಗಳ ಮೋಸವಗೊಳಿಸುವದೂ |
ಸೂಳಿಯರೋಣಿಗೆ ಹೊರಟಿಹೆನೂ, ಸೂಳರಿಯುತೆ ನಾಜಾರುನೆನೂ ||

ಖೂಳರ ಕಣ್ಣಿಗೆ ಬೀಳದಲೇ, ಜಾಳವನೊಡ್ಡುತೆ ಕುಶಲದಲೀ |
ಬಾಳಿಗೆ ಮಣ್ಣನು ಎರಚತ್ತೇ ಗೋಳಿನ ಮಾಯವ ದೂಡುವೆನೂ ||

ಮದಿರೆಯ ಕುಡಿಯುತೆ ಮದಿಸುವೆನೂ, ಮದವೇರುತೆ ನಾಕುಣಿಯುವೆನೂ |
ಮದಿರೆಯ ಭಟ್ಟಿಯು ಮನದೊಳಗೇ, ಮಧುರಿಪುವಿನ ನಾಮಾಮೃತವು ||

ಶಾಸನವಿದ ತಾಬಂಧಿಸದೂ ಶೋಷಿಸದಿದು ತಾದೇಹಗಳಾ |
ಈಶನ ಕೃಪೆಯಿಂದೆಲ್ಲರಿಗೆ, ತೋಷನೀಡ್ವುದು ಸಂತತದೀ ||

ಮದಿರೆಯ ಕುಡಿಯುತೆ ಮೋಹನನೂ ಕಡುಮದದಿಂದಲಿ ತಾಕುಣಿದೂ|
ಭಜಿಸಿದ ಸಂತತ ಹರಿನಾಮಾ, ಭಜಿಸುತ ಶೇರಿದ ವೈಕುಂಠಾ ||
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...