Home / ಕವನ / ಕವಿತೆ / ಇವನಾರೆ?

ಇವನಾರೆ?

ಪರಿವರ್ಧಿನಿ


ಎ೦ದಾಗುವುದೋ ಧರ್ಮಗ್ಲಾನಿಯು,
ಮುಂದಾಗುವುದೆಂದೋ ದುರ್ನೀತಿಯು,
ಅಂದೇ ತಪ್ಪದೆ ತಾನವತಾರವ-
ನೆಸಗುವನಿವನಾರೇ?

ಸಂದಾ ದುಷ್ಟರ ಭಾರವ ಸಹಿಸದೆ,
ಬಂದಡಿವಿಡಿ ದಿಹ ಭೂವನಿತೆಯ ಬಗೆ-
ದಂದುಗವಟ್ಟಲು ಮಾನಿಸವುಟ್ಟೊಳು
ಪುಟ್ಟಿದನಿವನಾರೇ?


ಶಯ್ಯಾ ಶೇಷನ ದಿಟ್ಟಿಸಿ, ‘ನೀನೀ-
ಗೊಯ್ಯನೆ ರೋಹಿಣಿಯುದರದಿ ಜನಿಸುತ,
ರಯ್ಯಂ ಮಿಗೆ ಬಲರಾಮಾಕಾರದೊ
ಳಗ್ರಜನೆನಗಾಗು’

ಒಯ್ಯಾರದೊಳಿಹ ಮಾಮಾಯೆಯನಾ-
ರಯ್ಯುತ, ‘ನಂದಜೆಯಾಗುತ, ಮುಂ ಸಾ-
ಹಾಯ್ಯವನೆನಗೆಸಗಲು ಜನಿಸೆನ್ನುವ
ಸೂತ್ತಿಕನಿವನಾರೇ?


ಬಂಧನ ಗೃಹದಲಿ, ಕತ್ತಲೆ ಕೋಣೆಯ
ಸಂದಿನೊಳಿರುತಿಹ ಮಾತೆಯ ಬಳಿಯಲಿ,
ಸು೦ದರ ಕಾಯದ ಹೊಳಪಿನ ಕದಿರುಗ-
ಳೆತ್ತಲು ಪಸರಿಸಿರೆ,
ಅ೦ದದೊಳಾಯುಧವಿಡಿದಿಹ ನಾಲ್ದೋ-
ಳೊ೦ದಿದ ಬಂಧುರದಾಕೃತಿಯೊಪ್ಪಿರೆ,
ಮು೦ದಿಹ ಜನನಿ-ಜನಕರೊಳ೦ದದಿ
ಭಾಷಿಪನಿವನಾರೇ?


“ತ೦ದೆಯೆ! ತಾಯಿಯೆ! ನಿಮ್ಮನು ಸುಮ್ಮನೆ
ಬ೦ಧನಮೊ೦ದಿಸಿ, ಮುಂ ಪುಟ್ಟಿದ ಶಿಶು
ವೃಂದಮನೆಲ್ಲವ ಕಲ್ಲೆದೆಯಿಂ ಕ-
ಗ್ಗಲ್ಲಿಗೆ ಸಲ್ಲಿಸುತ,

ಕೊಂದಿಹ ಮೂಢ ನೃಶಂಸನ ಕಂಸನ
ಸಂದೆಯವಿಲ್ಲದೆ, ಶಮನನ ಸದನ-
ಕ್ಕೊಂದಿಪೆ” ನೆನ್ನುತ, ಮು೦ಗಜ್ಜವನೊರೆ-
ದರಿಪಿದನಿವನಾರೇ?


ಶ್ರಾವಣ ಮಾಸದೊಳಷ್ಟಮಿ ಯಾಮಿನಿ
ತೀವಿರೆ ಬುವಿಯನು, ಕಾರ್ಗಾಲದ ಸರಿ-
ಯಾವರಿಸಲ್, ವಸುದೇವನ ಕೈಯ್ದಾ-
ವರೆಯಲ್ಲಿವನಾರೇ?

ಈ ವಿಧ ಕಷ್ಟವನಟ್ಟಲು, ದೇವನ
ಭಾವಕ್ಕನುಗತನಾಗುತ ಬಂದಿಹ,
ಹಾವೆರೆಯನ ಹೆಡೆ ಕೂಡೆ, ಮಣಿ ದೀವಿಗೆ
ಯಾದವನಿವನಾರೇ?


ಯಮುನೆಯು ದಾರಿಯ ಬಿಟ್ಟರೆ, ಮಧ್ಯದಿ
ಗಮಿಸುವ ಜನಕನ ಕೈಯಲ್ಲಿ ಮಲಗಿಹ,
ಸುಮ ಕೋಮಲ ವರ ಕಾಯದೊಳೊಪ್ಪುವ
ನವ ಶಿಶುವಿವನಾರೇ?

ಮಮತೆಯ ನಂದ-ಯಶೋದ ಕ೦ದನು
ಸಮನಿಸೆ ತಾನತಿ ಮುದದಲ್ಲಿ ಬಳೆಯುತ-
ಲಮರಲು ಗೋವಳರವರಾ ಮಡಿಲಿನೊ-
ಳಾಡುವನಿವನಾರೇ?


‘ಜೋ ಜೋ ಹರಿಗೋವಿಂದನೆ! ಕಂದನೆ!
ಜೋ ಜೋ ಕರಿ ಸಿರಿ ಮೈಯನೆ! ಚೆಲುವನೆ!
ಜೋ ಜೋ ಗೋಕುಲ ಗೋಪಾನಂದಕ!
ಕೃಷ್ಣನೆ! ಜೋ’ ಯೆನುತ

ಸಾಜದೆ ಗೋಪಿಕೆಯರು ಸಂತೋಷದಿ
ಮೆಲ್ಜೋಗುಳವನು ಪಾಡಲು ತೊಟ್ಟಿಲೊ-
ಳೋಜೆಯೊಳೊರಗುತ ಕಿವಿಗಳ ನಿಮಿರಿಸಿ,
ಪಟ್ಟಿಹನಿವನಾರೇ?


ಭೀಕರ ಕಾಯದ ರಕ್ಕಸಿಯೊರಗಿರ-
ಲಾಕೆಯ ವಕ್ಷಸ್ಥಲದಲಿ ಹೊರಳುತ
ಲಾ ಕುಚವೆರಡರ ಹೀರುತಲಸುವನು
ಹಿ೦ಡಿದನಿವನಾರೇ?

ಆ ಕಂಸನ ಮತದಿಂದೈತಂದಿಹ
ಆಕುಲ ಶಕಟಾಸುರನನು ಕಾಲಿಂ-
ದೌಕುತಲುರುಳಿಸಿ, ಕೆಡೆ ಬೀಳಿಸಿ, ಮಡು-
ಹಿದ ಮಗುವಿವನಾರೇ?


‘ಈ ಕೃಷ್ಣನ ವಧಿಸುತ, ಹೆಸರಳಿಯಿಸ-
ಬೇಕೆಂ’ ದಾಗಲೆ ಸುಳಿಗಾಳಿಯ ತೆರ-
ದಾಕೃತಿಯಾ೦ತ ತೃಣಾವರ್ತನ ಕ-
ತ್ತೊತ್ತಿದವನಾರೇ?

ಲೋಕವ ಹಿಂಸಿಸಲೈತಹ ದನುಜರ-
ನೇಕರ ತನ್ನಯ ಬಾಲಕ ಲೀಲಾ-
ನೀಕದಿ ನಾಶಿಸಿ, ತಿರೆಹೊರೆಯಿಳುಹಿದ
ಚಿಕ್ಕವನಿವನಾರೇ?

೧೦
ತಾಯಿಯು ಹೆದರಿಸಿ, ‘ಮಣ್ಣನು ಮೆದ್ದಿಹೆ
ಬಾಯನು ಬಿಚ್ಚೆ’ನೆ ತೆರೆಯಲು, ಅದರೊಳ-
ಗಾಯತ ಲೋಕವ ಕಾಣಿಸಿ, ವಿಸ್ಮಯ-
ಗೊಳಿಸಿದನಿವನಾರೇ?

ತಾಯಿಗೆ ಮನೆಯಲಿ ಕೆಲಸವನೆಸಗಲ-
ದೀಯದೆ ಕೆಣಕಲು, ಹಗ್ಗದಿ ಕಟ್ಟುತ
ನೋಯಿಪೆ’ ನೆನ್ನುತ ಬಂಧಿಸೆ, ಕಟ್ಟಿಗೆ
ಸಿಲುಕದನಿವನಾರೇ?

೧೧
ಹರಿದೋಡುವನಂ ಸೈರಿಸದಮ್ಮನು
ಒರಳಲಿ ದಾವಿಂ ಕಟ್ಟುತಲಗಲಲು,
ಸರಿಯುತ, ಮತ್ತಿಯಳ್ಮರದಿರುಕಿನೊ-
ಳಿರುವವನಿವನಾರೇ?

ತರುಗಳವೆರಡುಂ ಮುರಿದುರುಳಲ್‌, ಬಂ-
ದರು ಶಾಪವನುಳಿದುತ್ತರ ಪತಿಯಣು-
ಗರು; ಬಳಿಕವರಿಂ ನತಿ-ನುತಿಯಾ೦ತಿಹ
ಯದುಸುತನವನಾರೇ ?

೧೨
ಎಳವೆಯೊಳು೦ಡರೆ ಹಾಲ್ಮೊಸರಳೆಯಂ,
ಬಳವಿಯು ಕಳೆವೆತ್ತೊಲಿಯುವುದೆಂಬುದ
ತಿಳಿಸಲು ಲೋಕಕೆ, ಹಸಿ ಹಾಲ್ಬೆಣ್ಣೆಯ
ಮೆದ್ದವನಿವನಾರೇ?

ಎಳೆಗೊಲ್ಲತಿಯರ ನಲ್ಮೆಯನಾನುತ,
ಬಳೆಯುತ, ತುರುವಳರೆಳೆಯರ ಕೆಳೆತನ-
ದೊಳು ದನಗಾಯುತ, ಗೋರಕ್ಷೆಯನಿಳೆ-
ಗರಿಪಿದನಿವನಾರೇ?

೧೩
ತುರು-ಕರು ಕಾಯುವ ಕಾಲದಿ ವ್ರಜದಲಿ
ತರುಗಳ ತಣ್ಣೆಳಲನ್ನಾಶ್ರಯಿಸುತ,
ಸುರುಳೆಲೆ ಸುಳಿಯಿಂ ಪೀಪಿಯನೂದುತ್ತ
ವಿಹರಿಪನಿವನಾರೇ?

ಮರಿಗೋಗಿಲೆಗಳ ಕುಹುಕುಹು ರವವನು-
ಕರಣೆಯಗೈಯುತಲಣಕಿಸಿ ನಗುತಲಿ,
ಕರ ತಾಡನ ಪರನಾಗಿಹ ಚೆಲುವಿನ
ಚೆನ್ನಿಗನಿವನಾರೇ?

೧೪
ಕಲಕಲ ನಾದದಿ ಹರಿಯುವ ಯಮುನೆಯ
ಸುಲಲಿತ ವೇದಿಕೆಯಗ್ರದಿ, ಮುದದಲಿ
ನಲಿಯುವ ಮಂಜುಳ- ಮೋಹನ-ಲೀಲಾ
ವಿಗ್ರಹನಿವನಾರೇ?

ಕೊಳಲನ್ನೂದುತ, ಸರಸದಿ ತೀರದೊ-
ಕಲೆಯುವ, ಮುಗ್ಧ-ಮನೋಹರ ಕಾಯದ
ಅಲಕ ವಿಚಿತ್ರಿತ ವದನ ಸರೋರುಹ
ಸು೦ದರನಿವನಾರೇ?

೧೫
ಪುಲಿನದಿ ಲೀಲಾ ಕಮಲವ ಬರೆಯತ,
ಲಲಿತ ಕ್ರೀಡೆಯನಾಡುತಲೊಡುತ,
ಸಲಿಲ ವಿಹಾರ ವಿಮೋಹಿತ ಮಾನಸ-
ನಾಗಲು ನಲಿವಿನಲಿ

ವಲಿತ-ವಿಲೋಲ-ತರ೦ಗಿತ ಯಮುನಾ-
ಜಲದಲಿ ‘ಜಲಕ’ ವ ನಾಡುವ, ನೂತನ
ಜಲಧರ ಶ್ಯಾಮಲ, ಕೋಮಲ ಕಾಯ, ಕಿ-
ಶೋರನು ಇವನಾರೆ?

೧೬
ಕಂದರನೆಲ್ಲರನಂತೆಯೆ ದನಗಳ
ಮಂದೆಯ ತನ್ನಯ ವಿಷದಿಂ ಮೂರ್ಚೆಯ-
ನೊ೦ದಿಸೆ ಕಾಳಿಯನವನಾ ಹೆಡೆಯಲಿ
ಕುಣಿದವನಿವನಾರೇ?

ವೃಂದಾವನದಲ್ಲಿರಲೊಂದು ದಿನಂ
ಮುಂದಿನ ತಾಳವನಕ್ಕೆಯ್ದಲ್ ಮುನಿ-
ಸಿ೦ದ೦ ಬ೦ದಾ ಧೇನುಕ ರಾಸಭ-
ನಸು ಹಿಳಿದಿವನಾರೇ?

೧೭
ತನ್ನಯ ಸುತ್ತಲು ತುರುವಿಂಡೊಲಿದಿರೆ,
ಉನ್ನತ ಶಿಲೆಯಲಿ ಮ೦ಡಿಸಿ ಮುದದಲಿ
ಸನ್ನುತ ಮುರಲಿಯ ಬಾಜಿಸಿ ಮೋಹಿಪ
ಮೋಹನನಿವನಾರೆ?

ಕನ್ನೆಯರೆಲ್ಲರು ರಾಸ ಕ್ರೀಡಾ-
ಸನ್ನೆಯರಾಗುತ, ಸುತ್ತಲು ಕುಣಿಯಲು,
ಚೆನ್ನೆನೆ ವೇಣುವನೂದುತ ಮಧ್ಯದಿ
ನಲಿದವನಿವನಾರೆ?

೧೮
ಆ ಕಡೆ ಈ ಕಡೆ ಸೈನಿಕ ಸಾಗರ
ವೇಕೀಭವಿಸಿರಲದರೊಳನುಗ್ಗುವ
ಶ್ರೀಕರ ಪಾರ್ಥ ಸ್ಯಂದನವಟ್ಟುವ
ಸಾರಥಿಯಿವನಾರೇ?

`ಏಕೆನ ಗಾಜಿಯು ಸಾಕೆಂ’ ದೆನ್ನುತ
ವ್ಯಾಕುಲ ನಾದಾ ವಿಜಯನ ಮನವ-
ನ್ನಾ ಕಾಳಗಕನುವಾಗಿಸಿ, ಗೀತೆಯ-
ನರಿಪಿದನಿವನಾರೇ?
*****
೧೯೩೬

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...