Home / ಕವನ / ಕವಿತೆ / ದ್ವಂದ್ವ

ದ್ವಂದ್ವ


ಒಂದು ಕಡೆ ಸಂತೋಷ-ಸುಖದ ಸಾಮ್ರಾಜ್ಯಮಯ
ನಂದನ ಸರ್ಗದ ಸಮಾವೇಶವಿಹುದು
ಬೇರೂಂದು ಕಡೆ ಬೇನೆ ಬೇಸರಿಕೆ- ಬಿಸುಸುಯ್ಗ-
ಳೇರಿರುವ ನಲವಿರದ ನರಕವಿಹುದು


ಒಂದು ಕಡೆ ಮದುವೆ-ಮಾಸಿರಿ ಬೆಡಗು-ಬಿನ್ನಣಗ-
ಳೊ೦ದಿರುವ ಶೃಂಗಾರ ಸೌರಭ್ಯವಿಹುದು
ಬೇರೊಂದು ಕಡೆ ವಿರಸ ವಿರಹದುರಿಯೆದ್ದಿರುವ
ನೈರಾಶ್ಯ-ಸ೦ತಾಪ ಸಂರೋಧವಿಹುದು


ಒಂದೆಡೆ ಮನೋಹರ ಮೃದ೦ಗ ಸ೦ಗೀತ ಜಯ-
ದುಂದುಭಿಯ ಮಂಗಲ ಧ್ವಾನವಿಹುದು
ಬೇರೊಂದು ಕಡೆ ರೋದನದ ಕೀರುದನಿ ಸುಯ್ವ
ಮಾರುದ್ದ ನಿಟ್ಟುಸಿರ ನಾದವಿಹುದು


ಒಂದು ಕಡೆ, ಕಿಲಕಿಲನೆ ನಗುತಿರುವ ಮೃದು ಹಸಿತ-
ದಿ೦ದಾದ ಮೆಲ್ಲುಲಿಯ ಬಿನದವಿಹುದು
ಬೇರೊಂದು ಕಡೆ ಮನವ ಮುಸುಕಿರುವ ಶೂನ್ಯತೆಯ
ಬೀರುತಿಹ ಚಿಂತಾನಲ ಜ್ವಾಲೆಯಿಹುದು


ಒ೦ದು ಕಡೆ ಧನಿಕರಾಡಂಬರದ ಸಂರಂಭ-
ದೊಂದು ಮುದ-ಮದಯುತ ವಿಲಾಸವಿಹುದು
ಬೇರೊಂದು ಕಡೆ ಬಡವರಾನುವಾ ಹಸಿವಿಂದ
ಮೀರಿ ತೋರುವ ಬನ್ನ ಬಾಳ್ವೆಯಿಹುದು


ಒಂದು ಕಡೆ ನಳನಳಿಸಿ, ನಲಿಯುತ್ತ, ಬೆಳೆಯುತ್ತ,
ಬಂದಿರುವ ಪಚ್ಚಪಸುರಿನ ಪೈರದಿಹುದು
ಬೇರೆ ಕಡೆ, ಬೆಂಗದಿರ ಬೀರುತಿಹ ಬಿಸಿಲಿಂದ
ಗಾರಾದ ನಿಷ್ಟ್ರಯೋಜನ ಭೂಮಿಯಿಹುದು


ಒಂದು ಕಡೆ ಸುರಿಯುವೈಕಲ್ಸೋನೆಯಿಂ ಸೆಡೆದು,
ನಿ೦ದಿರದೆ ಗಡಗಡನೆ ನಡುಗುತಿರಬಹುದು
ಬೇರೊಂದು ಕಡೆ ಸೆಕೆಯ ಕಾವಿನೌಷ್ಣ್ಯವನಾನ-
ಲಾರದೇ ಸಂಕಟಂಬಡುತಲಿರಬಹುದು


ಒಮ್ಮೆ ಸಮರದಿ ವೀರ-ವಿಜಯ ವಧು ಸಾಹಸದ
ಸಮ್ಮೋದದಿಂ ಸಾರ್ದು ಸಿರಿಯನುಗಬಹುದು
ಮತ್ತೊಮ್ಮೆ ಹೇಡಿತನವಡಹಸಿರಲು, ಹ೦ದೆಗೊಲಿ-
ದತ್ತಲೈತರಲಾರ್‍ಪಳಪಜಯಾಂಗನೆಯು


-ಇಂತೆಸೆವ ವಿಧವಿಧ ವಿರುದ್ಧ ವಿಜ್ಞಾನಗಳ-
ನಾಂತಿಹುದು ಸ೦ತತಂ ತಿರೆಯಂತರಂಗ
ಇದರ ಚೆಲುವನು ನೋಡಿ, ನಲವಾಂತು ವಿಶ್ವಪತಿ
ಪುದಿದ ಬಿನದದಿ ಮುಗುಳುನಗುತಲಿರಬಹುದು.

೧೦
ಈ ದ್ವ೦ದ್ವೆಗಳಲೆಲ್ಲ ಸಾಮ್ಯವನ್ನಳವಡಿಸಿ,
ಸಾಧಿಸುತ, ಸಾಮರಸ್ಯವ ಸಂಧಿಸಿ,
ಯೋಗವನು ಯೋಜಿಪುದೆ, ಯೋಗಿಯೆಂದೆನಿಸುವುದೆ
ಯೋಗೇಶ್ವರಂ ಬೋಧಿಸಿದ ‘ಗೀತೆ’ ಯರಿವು
*****
೧೯೩೮

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...