Home / ಕವನ / ಕವಿತೆ / ದ್ವಂದ್ವ

ದ್ವಂದ್ವ


ಒಂದು ಕಡೆ ಸಂತೋಷ-ಸುಖದ ಸಾಮ್ರಾಜ್ಯಮಯ
ನಂದನ ಸರ್ಗದ ಸಮಾವೇಶವಿಹುದು
ಬೇರೂಂದು ಕಡೆ ಬೇನೆ ಬೇಸರಿಕೆ- ಬಿಸುಸುಯ್ಗ-
ಳೇರಿರುವ ನಲವಿರದ ನರಕವಿಹುದು


ಒಂದು ಕಡೆ ಮದುವೆ-ಮಾಸಿರಿ ಬೆಡಗು-ಬಿನ್ನಣಗ-
ಳೊ೦ದಿರುವ ಶೃಂಗಾರ ಸೌರಭ್ಯವಿಹುದು
ಬೇರೊಂದು ಕಡೆ ವಿರಸ ವಿರಹದುರಿಯೆದ್ದಿರುವ
ನೈರಾಶ್ಯ-ಸ೦ತಾಪ ಸಂರೋಧವಿಹುದು


ಒಂದೆಡೆ ಮನೋಹರ ಮೃದ೦ಗ ಸ೦ಗೀತ ಜಯ-
ದುಂದುಭಿಯ ಮಂಗಲ ಧ್ವಾನವಿಹುದು
ಬೇರೊಂದು ಕಡೆ ರೋದನದ ಕೀರುದನಿ ಸುಯ್ವ
ಮಾರುದ್ದ ನಿಟ್ಟುಸಿರ ನಾದವಿಹುದು


ಒಂದು ಕಡೆ, ಕಿಲಕಿಲನೆ ನಗುತಿರುವ ಮೃದು ಹಸಿತ-
ದಿ೦ದಾದ ಮೆಲ್ಲುಲಿಯ ಬಿನದವಿಹುದು
ಬೇರೊಂದು ಕಡೆ ಮನವ ಮುಸುಕಿರುವ ಶೂನ್ಯತೆಯ
ಬೀರುತಿಹ ಚಿಂತಾನಲ ಜ್ವಾಲೆಯಿಹುದು


ಒ೦ದು ಕಡೆ ಧನಿಕರಾಡಂಬರದ ಸಂರಂಭ-
ದೊಂದು ಮುದ-ಮದಯುತ ವಿಲಾಸವಿಹುದು
ಬೇರೊಂದು ಕಡೆ ಬಡವರಾನುವಾ ಹಸಿವಿಂದ
ಮೀರಿ ತೋರುವ ಬನ್ನ ಬಾಳ್ವೆಯಿಹುದು


ಒಂದು ಕಡೆ ನಳನಳಿಸಿ, ನಲಿಯುತ್ತ, ಬೆಳೆಯುತ್ತ,
ಬಂದಿರುವ ಪಚ್ಚಪಸುರಿನ ಪೈರದಿಹುದು
ಬೇರೆ ಕಡೆ, ಬೆಂಗದಿರ ಬೀರುತಿಹ ಬಿಸಿಲಿಂದ
ಗಾರಾದ ನಿಷ್ಟ್ರಯೋಜನ ಭೂಮಿಯಿಹುದು


ಒಂದು ಕಡೆ ಸುರಿಯುವೈಕಲ್ಸೋನೆಯಿಂ ಸೆಡೆದು,
ನಿ೦ದಿರದೆ ಗಡಗಡನೆ ನಡುಗುತಿರಬಹುದು
ಬೇರೊಂದು ಕಡೆ ಸೆಕೆಯ ಕಾವಿನೌಷ್ಣ್ಯವನಾನ-
ಲಾರದೇ ಸಂಕಟಂಬಡುತಲಿರಬಹುದು


ಒಮ್ಮೆ ಸಮರದಿ ವೀರ-ವಿಜಯ ವಧು ಸಾಹಸದ
ಸಮ್ಮೋದದಿಂ ಸಾರ್ದು ಸಿರಿಯನುಗಬಹುದು
ಮತ್ತೊಮ್ಮೆ ಹೇಡಿತನವಡಹಸಿರಲು, ಹ೦ದೆಗೊಲಿ-
ದತ್ತಲೈತರಲಾರ್‍ಪಳಪಜಯಾಂಗನೆಯು


-ಇಂತೆಸೆವ ವಿಧವಿಧ ವಿರುದ್ಧ ವಿಜ್ಞಾನಗಳ-
ನಾಂತಿಹುದು ಸ೦ತತಂ ತಿರೆಯಂತರಂಗ
ಇದರ ಚೆಲುವನು ನೋಡಿ, ನಲವಾಂತು ವಿಶ್ವಪತಿ
ಪುದಿದ ಬಿನದದಿ ಮುಗುಳುನಗುತಲಿರಬಹುದು.

೧೦
ಈ ದ್ವ೦ದ್ವೆಗಳಲೆಲ್ಲ ಸಾಮ್ಯವನ್ನಳವಡಿಸಿ,
ಸಾಧಿಸುತ, ಸಾಮರಸ್ಯವ ಸಂಧಿಸಿ,
ಯೋಗವನು ಯೋಜಿಪುದೆ, ಯೋಗಿಯೆಂದೆನಿಸುವುದೆ
ಯೋಗೇಶ್ವರಂ ಬೋಧಿಸಿದ ‘ಗೀತೆ’ ಯರಿವು
*****
೧೯೩೮

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...