Home / ಕವನ / ಕವಿತೆ / ಕನ್ನಡದ ವಿಶ್ವರೂಪ

ಕನ್ನಡದ ವಿಶ್ವರೂಪ


ಕನ್ನಡದ ಹೊಸದನಿಯು
ವಿಶ್ವದಾ ವಿವಿಧ ವಿಧ
ವಾಙ್ಮಯಕ್ಕೆಣೆಯಾಗಿ
ಕಾಣದೇನು?
ನವ ನವೋನ್ನತ ಭಾವ-
ವೈಖರಿಯು, ಕಲ್ಪನೆಯು
ಹೊಸ ವೃತ್ತಗಳ ನೃತ್ಯ,
ಈ ಸರ್ವ ಸಾಮಸ್ತೃ-
ದಿಂದೇಕ ಮೂರ್ತಿಯಹ
ಕನ್ನಡದ ನಲ್ಬರೆಹ
ಹೊಸ ಹುಟ್ಟಿನೊಂದುತ್ತ
ಹೊಸ ಹಾದಿವಿಡಿಯುತ್ತ,
ಹೋಗದೇನು?
ಸುವ್ಯವಸ್ಥಿತ ರೀತಿ
ಯಿಂದ, ನಿರ್ಭೀತಿಯಲಿ
ನೀತಿಯಲಿ, ಪ್ರೀತಿಯಲಿ
ನಡೆಯದೇನು?
‘ಕನ್ನಡ ಮನೋಹಾರಿ!
ಮನ್ನಣೆಯ ಕಸ್ತೂರಿ!’
ಎನ್ನುವಾ ಮಾತನ್ನು
ನುಡಿಸದೇನು?


ಕನ್ನಡದ ಹೊಸ ದನಿಯು
ಮೂಢ ರೂಢಿಯನೊಡೆದು,
ಚ್ಛೆತನ್ಯವನು ಪಡೆದು,
ರಸಋಷಿಯ ಮಡಿಲಿನಲಿ,
ಶಾಂತಿಮಯ ಕಾಂತಿಯಲಿ,
ಹಾಸ್ಯ ಲಾಸ್ಯವನೆಸಗಿ,
ವೀರ ತಾಂಡವ ನಾಟ್ಯ
ನಲಿಯದೇನು?
ಮ೦ಜುಳ ಮನೋಹಾರಿ-
ಯಾಗದೇನು?
ರಸಿಕ ಜನ ಮಾನಸವ
ಸಂತೋಷ ಸಾಗರದಿ
ತೇಲಿಸುತ, ನಲವಿನಲಿ
ನಿಲಿಸದೇನು?
ನಲ್ಗನ್ನಡವ ಮುಂದೆ
ತಾರದೇನು?


ವಿಶ್ವ ಸಾಹಿತ್ಯದಲಿ:-
ಗ್ರಂಥಗಳ ಸರಣಿಯಲಿ.-
ಕಾವ್ಯಗಳ ಮಾಲೆಯಲಿ,
ಕವಿತೆಗಳ ಕು೦ಜದಲಿ,
ಗೀತಗಳ ಗುಚ್ಛದಲಿ,
ಕೀರ್‍ತನ ವಿತಾನದಲಿ,
ಗರತಿಯರ ಗೀತಿಯಲಿ,
ಜಾನಪದ ಪದಗಳಲಿ,
ಲಾವಣಿಯ ಲಾಸ್ಯದಲಿ,
ಹಾಡುಗಳ ಹಿ೦ಡಿನಲಿ,
ಆ ಯಕ್ಷಗಾನದಲಿ,
ಹೃದ್ಯವಹ ಗದ್ಯದಲಿ,
ವಚನ ಸಾಹಿತ್ಯದಲಿ,
ಕತೆಗಳ ಕಲಾಪದಲಿ,
ಕಾದ೦ಬರೀ ಪಥದಿ,
ಹಾಸ-ಪರಿಹಾಸದಲಿ,
ಹರಟೆ-ಹುಚ್ಚಾಟದಲಿ,
ಘರ್ಷಣ ವಿಮರ್ಶೆಯಲಿ,
ವಿವಿಧ ವಿಧ ರೂಪಕದಿ,
ಪದ್ಯ ಮಯ ನಾಟಕದಿ,
ಏಕಾಂಕ ದೃಶ್ಯದಲಿ,
ಚಿತ್ರದ ವಿಚಿತ್ರದಲಿ,
ಪತ್ರಿಕೆಯ ಸೂತ್ರದಲಿ,
ಸುದ್ದಿಗಳ ಸ೦ಗ್ರಹದಿ,
ಭಾವಗಳ ಮೇಳದಲ್ಲಿ,
ಕಲ್ಪನೆಯ ವಿವಿಧದಲಿ,
ಕಲೆಗಳ ವಿಲಾಸದಲಿ,
ಕನ್ನಡವು ಮೇಲ್ಮೆಯನು
ಮುಟ್ಟದೇನು?
ಕರ್ಣ ಕಮನೀಯತೆಯ
ಕರೆಯದೇನು?
ಕೀರ್ತಿಯು ದಿಗಂತವನು
ಹಬ್ಬದೇನು?
ಇನ್ನಿತರ ಭಾಷೆಗಳ
ಮುಂಭಾಗದೆಡೆಯಲ್ಲಿ
ಮನ್ನಣೆಯ ಸನ್ನುತಿಯ
ಪಡೆಯದೇನು?
ತಲೆಯೆತ್ತಿ, ಮುಂದೊತ್ತಿ,
ನಿಲ್ಲದೇನು?
ವಿಶ್ವರೂಪವನಾ೦ತು
ಮೆರೆಯದೇನು?
ಕಳೆಯೇರಿ, ನಲವೇರಿ,
ನಲಿಯದೇನು?


ಕನ್ನಡದ ಭಕ್ತರಿಗೆ
ನಲ್ಗನ್ನಡಾಂಬಿಕೆಯು,
ಸಾಹಿತ್ಯ ಶಾರದೆಯು,
ವಾಙ್ಮಯ ಬ್ರಹ್ಮನಾ
ರಸ ಸಮಾಧಿ ಸ್ಥಿತಿಯ
ಭಾವೈಕ್ಯದಾನಂದ-
ರೂಪ ಸುಖ ಸಾಮ್ರಾಜ್ಯ-
ವರವನ್ನು ಕರುಣೆಯಿ೦-
ದೀಯಳೇನು?
ಸಗ್ಗದಾ ಸಿರಿಯನ್ನು
ತೋರಳೇನು?
*****
೧೯೪೦

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...