Home / ಕವನ / ಕವಿತೆ / ಭರತಾರ್ಪಣ

ಭರತಾರ್ಪಣ

ಈ ತನುಮನ
ಭರತಾರ್ಪಣ
ಓ ಮನ್ಮನ
ಮನ್ಮಾತೆಯ
ಪುಣ್ಯಸ್ತನ-
ವನ್ನೀಕ್ಷಣ
ಕುಡಿ ತತ್ ಕ್ಷಣ
ಸಲ್ಲಕ್ಷಣ
ನ ವಿಲಕ್ಷಣ
ಓ ಮನ್ಮನ
ಈ ತನುಮನ
ಭರತಾರ್ಪಣವು!
*
ಮಾನವ್ಯವು
ಇಹ ದಿವ್ಯವು
ನವ ನವ್ಯವು
ಅಹ ಭವ್ಯವು
ಬಹು ವಿಶ್ರುತ
ವೀ ಭಾರತ!
ಇಲ್ಲಿಯೆ ರತ
ವಲ್ಲವೆ ಹಿತ?
ತತ್ ಪ್ರೇಷಿತ
ಮತ್ ಸ್ನೇಹಿತ
ಓ ಮನ್ಮನ
ಪ್ರಿಯ ಮನ್ಮನ
ಈ ತನುಧನ
ಭರತಾರ್ಪಣವು!!
*
ಅಲ್ಲಿಂದಲೊ
ಎಲ್ಲಿಂದಲೊ
ಇಂತೀ ಜನ
ಬಂತೀ ಕ್ಷಣ
ನೆಲೆ ನಿಲ್ಲದ
ಸೆಲೆ ಸಲ್ಲದ
ನದಿ ನದಿಗಳು
ಮುದ ಬೀರುತ
ಅದೊ ಬಂದವು
ಇದೊ ಸಂದವು
ನೀರ್‌ ಮಿಕ್ಕಿತು
ಕಡಲುಕ್ಕಿತು
ಓ ಮನ್ಮನ
ಮೀಯ್ ತನುಮನ
ತನುಮನಧನ
ಭರತಾರ್ಪಣವು!!
*
ಆರ್ಯರ ಕುಲ
ದ್ರಾವಿಡ ಫಲ
ಅಕೊ ಚೀಣರು
ಶಕ ಹೂಣರು
ಪಾರಸಿಕರು
ಪಾಠಾಣರು
ಮೊಗಲ್ ರಸಿಕರು
ಪ್ರಿಯ ಪ್ರಾಣರು
ಒಂದೇ ಶಿರ
ಒಂದೇ ಮನ
ಈ ತನುಮನ
ಭರತಾರ್ಪಣವು!
*
ಆ ಪಡುವಲ!
ದಾ ಬಾಗಿಲ
ಅಗೊ ತೆರೆಯಿತು
ಇಗೊ ನೆರೆಯಿತು
ಹೊಸ ಹೊಸ ಜನ
ಸುವಿಲಕ್ಷಣ
ಹೊಸ ಸಂಗತಿ
ಸೋಜಿಗ ಶ್ರುತಿ
ಹೊಸ ಕಾಣಿಕೆ
ಮನಗಾಣಿಕೆ
ಒಂದೇ ಶಿರ
ಒಂದೇ ಮನ
ಈ ತನುಧನ
ಭರತಾರ್ಪಣವು!!
*
ಒಂದೇ ಶಿರ
ಒಂದೇ ಮನ
ಭಾರತ ನರ-
ನಾರಾಯಣ
ತಲೆದೂಗುವೆ
ತಲೆಬಾಗುವೆ
ಕೈ ಮುಗಿಯುವೆ
ಮೈಯೊಗೆಯುವೆ
ನಿನ್ನಡಿಯೊಳು
ನನ್ನಯ್ಯನೆ
ಕಲ್ಯಾಣವ
ಮನಗಾಣುವ
ಭಾರತ ನರ-
ನಾರಾಯಣ
ತನುಮನಧನ
ನಿನಗರ್ಪಣವು!!
*****
Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...