Home / ಕವನ / ಕವಿತೆ / ಕವಿ-ಕಾಲ

ಕವಿ-ಕಾಲ

ಸ್ಯಾದಸ್ತಿ ಸ್ಯಾನ್ನಾಸ್ತಿ ಸ್ಯಾದಸ್ತಿ ನಾಸ್ತೀತಿ- !
ಸ್ಯಾದವಕ್ತವ್ಯವೋ? ವಾಚಾಮಗೋಚರವೋ?
ಇಂದ್ರಿಯಾತೀತವೋ? ಖಲು ಜ್ಞಾನ ಬ್ರಹ್ಮವೋ?
ಆದ್ಯಂತ ರಹಿತ ನಾಕಾರ ಶೂನ್ಯಂ ದಿಟಂ
ಎಂಬೀನಿನಾದದಲಿ ತಥ್ಯಾಂಶವಿದೆ; ಸಹಜ!
ನಾ ಬ್ರಹ್ಮ ನೀ ಬ್ರಹ್ಮ; ಕಾಂಬುದೆಲ್ಲವು ಬ್ರಹ್ಮ!
ಬ್ರಹ್ಮನಿಂ ನಾ ಬೇರೆ; ಜೀವಾತ್ಮ ಪರಮಾತ್ಮ
ದ್ವೈತದಲಿ ದೇದೀಪ್ಯಮಾನವಾಗಿದೆ; ಸತ್ಯ;
ಸೊಲ್ಲಿನಲಿ ಶಬ್ದಾರ್ಥ ಬೆರೆದಂತೆ ಶಿವ-ಶಕ್ತಿ
ಒಂದಾಗಿ ಬೆಳಗಿಸಿವೆ ಜಡವ ಚೇತನಗೊಳಿಸಿ;
ಅಪರ ವಸ್ತುವ ನಂಬಿ ನಡೆವರೇ ಬಹಳ ಜನ
ಆದರೂ ನಾಸ್ತಿಕರು ತಲೆಯೆತ್ತಿ ನಿಂತಿಹರು
ಕಾಲ ಪ್ರವಾಹದಲಿ ಕೊಚ್ಚಿ ಹೋಗದೆ ಏಕೆ?
ಬುದ್ಧಿ ಬೆಳವಣಿಗೆಗಿದು ಬೆನ್ನೆಲುಬು; ಶಾಶ್ವತಂ!
ಭಾವನಾ ಸ್ವಾತಂತ್ರಕಿದು ಬೆಲೆಯು; ಇಲ್ಲದೊಡೆ
ಬರಿಕಾಡು, ಮಾನವ್ಯದಂತಸ್ತು ಮುಗಿಲಿನೊಲು
ವೈಶಾಲ್ಯ ಸಾಗರದ ಗಾಂಭೀರ್ಯಮಂ ತಳೆದು
ಚಾಚಿಹುದು ಸಪ್ತ ಸಾಗರದಾಚೆ-ಇದು ಊಹೆ!
ಊಹೆಯನು ಮೀರಿ ನಿಂತಿದೆ ತನ್ನ ಶಕ್ತಿಯನು
ಶೂನ್ಯದಲಿ ನೆರೆತುಂಬಿ; ಘನಘೋರ ಗಂಭೀರ
ನೋಟವಿದ ನೋಡೆ ಮನುಜನ ಚರ್ಮ ಚಕ್ಷುಗಳು
ಚೈತನ್ಯವಳಿದು ನಿಂತಿವೆ; ಧರ್ಮದಾರಿಯನು
ತೋರುವಡೆ ಸಾರ್ಥಕ್ಯ! ಧರ್ಮಹಾಳಾಗಿಹುದು
ಪ್ರೇಮಪ್ರೇತವ ತಬ್ಬಿ ವಿಕಟಾಟ್ಟಹಾಸದಲಿ-
ಕುಣಿಯುತಿದೆ!

ಓ! ಸಾಕು! ಕವಿವರ್ಯ ನಿನ್ನ ಘನ
ಪಾಂಡಿತ್ಯ ದರ್ಶನಂ; ಇದನಾರು ಓದುವರು?
ಕಾಲ ಬದಲಾಯಿಸಿದೆ; ಕೋಟಿಗಟ್ಟಳೆ ಜನರು
ಆನಂದದಿಂದೋದಿ ನಲಿದುಲಿವ ಸಾಹಿತ್ಯ
ನಿರ್ಮಿತಿಗೆ ನೀ ತೊಡಗು; ಇಲ್ಲದಿರೆ ನೀಸತ್ತು
ಸಾಹಿತ್ಯವನು ಕೊಂದು ನಾಡದ್ರೋಹವ ಬಗೆದು
ಮಣ್ಣಾಗಿ ಮಲಗುವೆಯೊ! ಇಂದಿನೀ ಓಘವನು
ದಿಟ್ಟಸೆಲೊ! ಕುರುಡನೊಲು ಹಗ್ಗವನು ಹೊಸೆದೊಡೇಂ
ಸಂದೀತು? ಕಾಲವನ್ನನುಸರಿಸಿ ಕವಿಸಾಗೆ
ಬುವಿ ಸ್ವರ್ಗ ವಿಷವಮೃತವಾದಂತೆ! ಇಲ್ಲದಿರೆ
ಕಾವ್ಯ ಶಬ್ದದ ಕಂತೆ, ಹಾಳೂರ ಬರಿಸಂತೆ!!
*****
ಬೆಂಗಳೂರು : ೧೯೪೪

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...