Home / ಕವನ / ಕವಿತೆ / ನರಗುಂದ

ನರಗುಂದ

ಹೆಸರೀಗೆ ನರಗುಂದ, ಮೊಸರೀಗೆ ನೀರಿಲ್ಲ
ಕುಸುರದ ಸಿಂಬಿ ಬರಿಗೊಡ | ಇಟಗೊಂಡು
ಉಸರಂತ ಬಾವಿ ಇಳಿದಾರೊ ೧

ನರಗುಂದ ಕಾಳವನ, ಮರಿಗುದರಿ ಸಾಯಽಲಿ
ಚದರಂಗ ಮಾಲ ಮುರಿಯಽಲಿ | ಸೊರಟೂರ
ಸದರೀಗೆ ಸುದ್ದಿ ಹರಿಯಽಲಿ ೨

ನರಗುಂದವೆಂಬೂದು, ಅರಗಿಣಿ ಪಟ್ಟಣ
ಕೆರೆ ಕಡಿಸಿ ನೀರ ಕುಡಿಲಿಲ್ಲ | ಬಾಬಣ್ಣ
ತಿರುಗಿ ನರಗುಂದ ಹೊಗಲಿಲ್ಲ ೩

ಕೆಂಪು ಮಾರಿಯ ದಂಡು, ಗುಂಪಾಗಿ ಮುತ್ತ್ಯಾರೊ
ಕಂಪಿಸಿಹೋತೊ ನರಗುಂದೊ | ಬಾಬಸಾಬ
ಹಂಪಿಹೊಳಿ ಮುಂದ ತಡವ್ಯಾನೊ ೪

ಹಂಡಬಂಡದ ಕುದುರಿ, ಗೊಂಡೆ ಲಾಗಾಮನ್ಹಾಕಿ
ದಂಡು ಇಳದೀತೊ ನರಗುಂದೊ | ಬಾಬಾಸಾಬ
ಗುಂಡಿಲಿಕ್ಕ್ಯಾನೊ ಗುಡಿಯಾಗೊ ೫

ವಿಣ್ಣ್ಯಾ ತಾಂಡದ ಬಂಟ, ಕಣ್ಣಿಟ್ಟ ಸಿರಕೊಯ್ದು
ಮಣ್ಣ ಪಾಲಾದ ಮೆಣಸನ್ನ | ನರಗುಂದ
ಅಣ್ಣ ಕೂಗ್ಯಾನೊ ಕಾಳಗೊ ೬

ಮುಂಡರಗಿ ಭೀಮಣ್ಣ, ಬಂಡಾಯ ಎಬ್ಬಿಸಿದ
ದಂಡ ಕೂಡ್ಯಾನೊ ನರಗುಂದ | ಬಾಬಣ್ಣ
ಕೆಂಡ ಕಾರ್ಯಾನೊ ಕುಂವಣಿಗೊ ೭

ಮಾಲಕಮಸಾಹೇಬ, ಕೇಳಿ ಮೆಣಸನ ಸಾವ
ಗಾಳಿ ಬಂದ್ಹಾಂಗ ಮುತ್ತ್ಯಾನೊ | ನರಗುಂದ
ತಾಳ ಬಾಸ್ವಾತೊ ಚಣದಾಗೊ ೮

ಬಾಪು ವಂತರ ಸಂಚು, ಘಾತ ನರಗುಂದಾತೊ
ಹೋತೊ ಹಾಳಾಗಿ ನಿಪ್ಪತಗಿ| ನರಗುಂದ
ಖ್ಯಾತಿ ಜನದಾಗ ಕಡೆತನಕ ೯

ಹಾರೂರು ಹಾವಾಗಿ ಕೋರ್ಯಾರೊ ಒಳಸಂಚು
ಗಾರಗಾರಾತೊ ನರಗುಂದೊ | ಬಾಬಾಸಾಬ
ಕಾರ ಮಳಿಯಾಗ ಮನಿಬಿಟ್ಟ ೧೦

ಕಾಡೆಲ್ಲ ಕತ್ತರಿಸಿ, ನಾಡೆಲ್ಲ ತತ್ತರಿಸಿ
ಬಾಡುಗಳ್ಳರು ಹಾರೂರ | ತಾ ನಂಬಿ
ಕಾಡಿಗೀಡಾದ ಬಾಬಣ್ಣ ೧೧

ಮಡದಿ ಮಕ್ಕಳ ಬಿಟ್ಟ, ಹಡದ ತಾಯಿಯ ಬಿಟ್ಟ
ಕಡೆಗಾತ ಬಿಟ್ಟ ನಾಡಾಸೆ | ಬಾಬಾಸಾಬ
ಕೇಡಿಗೆ ಬಿಟ್ಟ ನರಗುಂದ ೧೨

ದೇಶಽವ ಕಡೆಮಾಡಿ, ಆಶೆಽಗೆ ಈಡಾಗಿ
ಕಾಸು ಕವಡಿಽಗೆ ಕಡೆಯಾಗಿ | ಹಾರೂರು
ಹಾಸಿ ಬೆಂಕ್ಯಾಗ ಬೂದ್ಯಾಗಿ ೧೩

ನರಗುಂದ ಅರಸನಿಗೆ, ವನವಾಸ ಬಂದೀತೊ
ತಿರುಗ್ಯಾನೊ ಕಾಡ ಪಾಲಾಗಿ | ಸೂಟರಗ
ತೊರಗಲ ಸಿಮ್ಯಾಗ ಕೈಸಿಕ್ಕೊ ೧೪

ಮಾಳಿಮ್ಯಾಗಿನ ಹುಲ್ಲ, ಗಾಳಿಗ್ಹಾರಿದರೇನು
ಗಾಲ ಮೇಲಾತೊ ನರಗುಂದೊ | ಬಾಬಾಸಾಬ
ಗಾಳೀಗಿ ಬಾಯ ಬಿಡತಾನೊ ೧೫

ಹೂಲಿ ಸಾಮಿಯು ಕೊಟ್ಟ, ಕೊಲ ಮಿಂಚಿನ ಸಾಪ
ಗಾಲ ಮೇಲಾತೊ ನರಗುಂದೊ | ಮರುವರುಷ
ಕೂಲಿ ಕುಂಬಳಿಗೆ ಎರುವಾತೊ ೧೬
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...