Home / ಕವನ / ಕವಿತೆ / ಕೋರ್‍ಸಿಕಾ

ಕೋರ್‍ಸಿಕಾ

ನಿನಗಿಂತ ಕಂಪುಳ್ಳ ದ್ವೀಪಗಳಿರಬಹುದು ಕೋರ್‍ಸಿಕಾ! ಸುಗಂಧ ದೇಹಿ!
ಜಾವಾ, ಸುಮಾತ್ರಾ, ಸಿಂಹಲ,-ಮತ್ತಿನ್ನನೇಕ.
ನಿನ್ನಡವಿಗಿಂತ ನಿಬಿಡವಿಹ ವನಗಳುಂಟು ಲೋಕದಲ್ಲಿ.
ಆದರೆ ಬೀಸಲಿಲ್ಲ ಮತ್ತೆಲ್ಲಿಯೂ ಮೂಲೋಕಕೆ ನಿನ್ನ
ಕೀರ್ತಿಯನೊಯ್ವಂಥ ಗಂಧವಹನು.
ಅರಳಲಿಲ್ಲವಿನ್ನೆಲ್ಲಿಯೂ ನಿನ್ನ ನರುಗಂಪನಜರಾಮರವಾಗಿ ಕಾಯ್ವ
ವನಸುಮವು.
ನೀರಮೇಲೆ ತೇಲಿಬಿಟ್ಟ ಸೂರ್ಯಪುತ್ರನಂತೆ-ಕರ್ಣನಂತೆ-
ಕರ್ಣಪೂರವಾದನು ನಿನಗೆ ನೆವೋಲಿಯನ್ನನು-ಬೆಳಗಿದನು ಪ್ರಖರವಾಗಿ,
ಚಂದ್ರನಂತೆ ಸಮುದ್ರಕುವರನಾಗಿ ಮೂಡಿಸಿದನೀರೇಳು ಲೋಕದಿ
ನಿನ್ನ ಧವಳಗಿರಿಗಳಂತತಿ ಧವಳವಾದ ವಿಮಲ ಕೀರ್ತಿಯನ್ನು!
ಅತ್ಯಾಸೆಯಲ್ಲವದು,-ಅವತಾರಿಯಾಗಲಿವ ಪಟ್ಟ ಸಾಹಸವು.
ವಿಶ್ನವೇ ತನಗೆ ಕೊಡೆಯಾಗಬೇಕೆಂದ,
ದೇವತ್ವವನು ತನ್ನಲಿಳಿಸಬೇಕೆಂದ.
ಪೌರುಷದ ಶಿಖರವನೇರಿ-ದೈವತವದೇ ಅದೇ ಎಂದು ಕುಣಿಯಬೇಕೆಂದ.
ಅಲ್ಲದೆ ಬರಿ ಪದವಿಗಾಗಿ-ಸಂಪದಕಾಗಿ-ಶಕ್ತಿಗಾಗಿ ಹಾತೊರೆದವನಲ್ಲ.
ಅರ್ಧ ಸಾಧಿಸಿತು; ಅರ್ಧ ಸಾಧಿಸಲಿಲ್ಲ; ಅದು ಅವನ ತಪ್ಪಲ್ಲ.
ಬೇರೆಯಿತ್ತು ದೈವದಾಟ:
ಕಾಲಕ್ಕೆ ಸರಿಯಾಗಿ ಸಿಕ್ಕ ಸಾಮಗ್ರಿಗಳನಣಿಗೊಳಿಸಿ
ತನ್ನ ಕನಸನೊಂದ ಕಟ್ಟಬೇಕೆಂದು ಇದಕಿಂತ ಹಿರಿಮಾತಾವುದು?
ಒ೦ದು ದ್ವೀಪದಲ್ಲಿ ಹುಟ್ಟಿ ಇನೊಂದು ದ್ವೀಪದಲ್ಲಿ ಮಡಿದ.
ಇವನ ಜೀವನದ ತುದಿಮೊದಲು ಸಂಜೆಮುಂಜಾವಂತೆ: ಒಂದೇ ಬಣ್ಣದವು.
ಹರೆಯದ ಹಗಲಿನಲ್ಲಿ ಮಾತ್ರ ನವಖ೦ಡಗಳನ್ನು ಬೆಳೆಗಿದನು-ಸೂರ್ಯನಂತೆ.
ಸಮುದ್ರದಲ್ಲಿಯೇ ಹುಟ್ಟಿ ಸಮುದ್ರದಲ್ಲಯೇ ಗುಪ್ತನಾದನಿವನು
ಪಶ್ಚಿಮದ ಸಮುದ್ರಗುಪ್ತನು ನೋಡಾ!
*****
Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...