Home / ಕವನ / ಕವಿತೆ / ಕೋರ್‍ಸಿಕಾ

ಕೋರ್‍ಸಿಕಾ

ನಿನಗಿಂತ ಕಂಪುಳ್ಳ ದ್ವೀಪಗಳಿರಬಹುದು ಕೋರ್‍ಸಿಕಾ! ಸುಗಂಧ ದೇಹಿ!
ಜಾವಾ, ಸುಮಾತ್ರಾ, ಸಿಂಹಲ,-ಮತ್ತಿನ್ನನೇಕ.
ನಿನ್ನಡವಿಗಿಂತ ನಿಬಿಡವಿಹ ವನಗಳುಂಟು ಲೋಕದಲ್ಲಿ.
ಆದರೆ ಬೀಸಲಿಲ್ಲ ಮತ್ತೆಲ್ಲಿಯೂ ಮೂಲೋಕಕೆ ನಿನ್ನ
ಕೀರ್ತಿಯನೊಯ್ವಂಥ ಗಂಧವಹನು.
ಅರಳಲಿಲ್ಲವಿನ್ನೆಲ್ಲಿಯೂ ನಿನ್ನ ನರುಗಂಪನಜರಾಮರವಾಗಿ ಕಾಯ್ವ
ವನಸುಮವು.
ನೀರಮೇಲೆ ತೇಲಿಬಿಟ್ಟ ಸೂರ್ಯಪುತ್ರನಂತೆ-ಕರ್ಣನಂತೆ-
ಕರ್ಣಪೂರವಾದನು ನಿನಗೆ ನೆವೋಲಿಯನ್ನನು-ಬೆಳಗಿದನು ಪ್ರಖರವಾಗಿ,
ಚಂದ್ರನಂತೆ ಸಮುದ್ರಕುವರನಾಗಿ ಮೂಡಿಸಿದನೀರೇಳು ಲೋಕದಿ
ನಿನ್ನ ಧವಳಗಿರಿಗಳಂತತಿ ಧವಳವಾದ ವಿಮಲ ಕೀರ್ತಿಯನ್ನು!
ಅತ್ಯಾಸೆಯಲ್ಲವದು,-ಅವತಾರಿಯಾಗಲಿವ ಪಟ್ಟ ಸಾಹಸವು.
ವಿಶ್ನವೇ ತನಗೆ ಕೊಡೆಯಾಗಬೇಕೆಂದ,
ದೇವತ್ವವನು ತನ್ನಲಿಳಿಸಬೇಕೆಂದ.
ಪೌರುಷದ ಶಿಖರವನೇರಿ-ದೈವತವದೇ ಅದೇ ಎಂದು ಕುಣಿಯಬೇಕೆಂದ.
ಅಲ್ಲದೆ ಬರಿ ಪದವಿಗಾಗಿ-ಸಂಪದಕಾಗಿ-ಶಕ್ತಿಗಾಗಿ ಹಾತೊರೆದವನಲ್ಲ.
ಅರ್ಧ ಸಾಧಿಸಿತು; ಅರ್ಧ ಸಾಧಿಸಲಿಲ್ಲ; ಅದು ಅವನ ತಪ್ಪಲ್ಲ.
ಬೇರೆಯಿತ್ತು ದೈವದಾಟ:
ಕಾಲಕ್ಕೆ ಸರಿಯಾಗಿ ಸಿಕ್ಕ ಸಾಮಗ್ರಿಗಳನಣಿಗೊಳಿಸಿ
ತನ್ನ ಕನಸನೊಂದ ಕಟ್ಟಬೇಕೆಂದು ಇದಕಿಂತ ಹಿರಿಮಾತಾವುದು?
ಒ೦ದು ದ್ವೀಪದಲ್ಲಿ ಹುಟ್ಟಿ ಇನೊಂದು ದ್ವೀಪದಲ್ಲಿ ಮಡಿದ.
ಇವನ ಜೀವನದ ತುದಿಮೊದಲು ಸಂಜೆಮುಂಜಾವಂತೆ: ಒಂದೇ ಬಣ್ಣದವು.
ಹರೆಯದ ಹಗಲಿನಲ್ಲಿ ಮಾತ್ರ ನವಖ೦ಡಗಳನ್ನು ಬೆಳೆಗಿದನು-ಸೂರ್ಯನಂತೆ.
ಸಮುದ್ರದಲ್ಲಿಯೇ ಹುಟ್ಟಿ ಸಮುದ್ರದಲ್ಲಯೇ ಗುಪ್ತನಾದನಿವನು
ಪಶ್ಚಿಮದ ಸಮುದ್ರಗುಪ್ತನು ನೋಡಾ!
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...