Home / ಲೇಖನ / ಇತರೆ / ಚಿಪ್ಪು ಹಂದಿ ಕತೆ

ಚಿಪ್ಪು ಹಂದಿ ಕತೆ

ದಿನಾಂಕ ೦೩-೦೮-೨೦೧೫ ರಂದು ಕರ್ನಾಟಕದ ಭಾರತೀನಗರದ ಹತ್ತಿರ ತೊರೆಚಾಕನ ಹಳ್ಳಿಯಲ್ಲಿ ಜನಜಂಗುಳಿ ಸೇರಿತ್ತು! ಜನಾನೇ ಹಾಗೆ ದನಗಳ ಹಾಗೆ…

ಬೆಳ್ಳಂಬೆಳಿಗ್ಗೆ ಎಷ್ಟೊಂದು ಜನವೋ ಜನ! ಕಾರಣ ಹಂದಿಯೊಂದು ಕಾಡಿನಿಂದ ನಾಡಿಗೆ ಬಂದು ಬಿಟ್ಟಿದೆ. ಜನ ಮುಗಿಬಿದ್ದು ನೋಡತೊಡಗಿದ್ದರು!

ಹೌದು! ಎಲ್ಲರೂ ಊರ ಹಂದಿ ನೋಡಿದ್ದರು. ಅಪರೂಪಕ್ಕೆ ಕಾಡು ಹಂದಿ ನೋಡಿದವರುಂಟು. ಇನ್ನು ಮುಳ್ಳು ಹಂದಿಯಂತೂ ಕಂಡಿರುವ ಜನರೂ ಕಡಿಮೆ. ಅದರಲ್ಲಿಯೂ ಚಿಪ್ಪು ಹಂದಿಯನ್ನು ಕಂಡವರು ವಿರಳ.

ಅಂದು- ಮಹದೇವು ಎಂಬುವರ ಮನೆಗೆ ಚಿಪ್ಪು ಹಂದಿ ನುಗ್ಗಿತ್ತು ಹಜಾರದಲ್ಲಿ ಬಂದಿತ್ತು. ಮನೆಯವರೇನು… ಎಲ್ಲರೂ ಗಾಬರಿ ಬಿದ್ದು ಓಡಿದರು!

ಅಲ್ಲೇ ಒಬ್ಬ ವ್ಯಕ್ತಿ ಪಂಜರ ತಂದು ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಬಂಧಿಸಿದ. ಎಲ್ಲರೂ ಶಹಭಾಶ್‌ ಎಂದರು. ನಿಟ್ಟೂಸಿರು ಬಿಟ್ಟರು. ಅರಣ್ಯ ಇಲಾಖೆಗೆ ಮಾಹಿತಿ ಹೋಯಿತು. ಮೊಬೈಲ್ ಇರುವುದು ಅನುಕೂಲವಾಯಿತು!

ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿತು. ಜನರಿಗೆ ಧೈರ್ಯ ಹೇಳಿದರು. “ಚಿಪ್ಪು ಹಂದಿ ಈ ಭಾಗದಲ್ಲಿ ಇದೇ ಮೊದಲ ಭಾರಿಗೆ ಕಾಣಿಸಿಕೊಂಡಿದೆ. ಇದು ಮನುಷ್ಯರಿಗೆ ತೊಂದರೆ ಮಾಡದ ಪ್ರಾಣಿ. ಇದು ಇರುವೆ, ಕೀಟಗಳು, ಶೇಂಗಾ, ಗಡ್ಡೆಗೆಣಸು, ಕಂದ ಮೂಲಗಳ ತಿಂದು ನೀರು ಕುಡಿಯುವುದು, ಆಹಾರ ನೀರು ಅರಿಸಿ ನಾಡಿಗೆ ಆಕಸ್ಮಿಕವಾಗಿ ಹಾದಿ ತಪ್ಪಿ ಬಂದಿದೆಯೆಂದು ಹೇಳಿದರಲ್ಲದೆ, ಅಲ್ಲೇ ಪಕ್ಕದೂರಾದ ಅಂತರ ಹಳ್ಳಿಯ ಗುಡ್ಡಕ್ಕೆ ಅದನ್ನು ಸುರಕ್ಷಿತವಾಗಿ ಬಿಟ್ಟು ಬಂದರು.

ಶಾಲಾ ಮಕ್ಕಳಿಗೆ, ಊರು ಕೇರಿ ಜನರಿಗೆ ಚಿಪ್ಪು ಹಂದಿ ಗಾತ್ರ ಅದರ ಕಣ್ಣು ಬಣ್ಣ ಆಕಾರ ವಿಶೇಷವಾಗಿ ಚಿಪ್ಪಿನಿಂದ ಕೂಡಿದ ಶರೀರ ಕಂಡು ವಿಸ್ಮಯಗೊಂಡರು. ಜನರೇ ಹಾಗೆ ಎಂದೂ ನೋಡದವರ ಹಾಗೆ…

ಹೌದು! ಶತ್ರುಗಳಿಂದ ರಕ್ಷಿಸಿಕೊಳ್ಳಲು ಅದಕ್ಕೆ ಚಿಪ್ಪು ವರವಾಗಿದೆ. ಏಕೆಂದರೆ ಚಿಪ್ಪು ಮಿರಮಿರ ಮಿಂಚುತ್ತಿದ್ದು ನೋಡಲು ಸೋಜಿಗವೆನಿಸುವುದು. ಇಲ್ಲಿನ ಜನರ ನಾಲಿಗೆ ಮೇಲೆ ಎರಡು ಮೂರು ದಿನ ಚಿಪ್ಪು ಹಂದಿ ನಲಿನಲಿದು ಹೋಯಿತು! ಚಿಪ್ಪು ಹಂದಿಯ ಅದೃಷ್ಟವೋ… ಜನರ ಅದೃಷ್ಟವೋ… ಅಂತೂ ಇಂತೂ ಕಾಲ ಜಿಗಿಯಿತು!
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...