Home / ಕವನ / ಕವಿತೆ / ಕಾಯುತ್ತೇನೆ ನಿನಗಾಗಿ

ಕಾಯುತ್ತೇನೆ ನಿನಗಾಗಿ

ಅರ್ಥವಾಗದ ಭಾಷೆಯ
ದಪ್ಪದಪ್ಪ ಧರ್ಮಗ್ರಂಥಗಳ
ಸುಮ್ಮನೆ ಒಟಗುಟ್ಟುವ ಅವನು
ಏನೋ ಸಾಧಿಸಿದಂತೆ ಬೀಗುತ್ತಾನೆ
ಸುಳ್ಳು ತೃಪ್ತಿಯ ಅಹಂಕಾರದ
ಮೂಟೆಯ ಅಂತ್ಯ ಅದರಲ್ಲೇ
ರೇಷ್ಮೆ ಹುಳುಕಟ್ಟಿದ ಗೂಡಿನಲ್ಲೇ
ದೊಡ್ಡ ದೊಡ್ಡ ಮಣ್ಣಹೆಂಟೆಗಳ
ದೂರ ದೂರಕೆ ಉರುಳಿಸಿ
ಸುಸ್ತಾಗುವುದು ಸುಮ್ಮನೆ
ಗುದ್ದಾಡಿ ಗಾಳಿಯೊಂದಿಗೆ
ಮೈ ನೋಯಿಸಿಕೊಳ್ಳುವ
ಸೆಗಣಿ ಹುಳುವಿನ ಸಾವು ನಿಶ್ಚಿತ.

ಬಳಿದು ವೈರಾಗ್ಯದ ಬೂದಿ
ಮೋಕ್ಷದ ಹಂಬಲದಲಿ
ಸಾಗಿ ಹೋದನು ಬಹುದೂರ

ಧರ್ಮ ಸನ್ನಿ ಹಿಡಿದ ಅಫೀಮು
ಏರಿದಂತೆ ವಾದಕ್ಕೆ ನಿಲ್ಲುವ
ಅವನ ಬರೀ ಮಾತು
ಪ್ರೀಯವಾಗುವುದಿಲ್ಲ ನನಗೆ
ಜಂಭದ ಕತ್ತಿಯಿಂದ
ತೊಟ್ಟಿಕ್ಕಿ ಹರಿದುಸೋರಿದ
ಮುಗ್ಧರ ಕೊರಳ ರಕ್ತ
ಸರಿಕಾಣುವುದಿಲ್ಲ ನನಗೆ
ಅವನ ಅರ್ಥವಾಗದ ನಡೆವಳಿಕೆ
ಕಠಿಣ ಬಂಡೆಯ ಹೃದಯ
ಕರಗಿ ನೀರಾಗಿ ಹರಿಯುವ ತನಕ
ತೊಟ್ಟಿರುವ ಅಹಂಕಾರದ ಪೊರೆ
ಕಳಚಿಟ್ಟು ಬರುವ ತನಕ
ಕಾಯುತ್ತೇನೆ ನಿನಗಾಗಿ
ಶುದ್ಧ ಮಾನವನಾಗುವ ತನಕ.
ಅಂಹಕಾರದ ಪೊರೆ
ಕಳಿಸುವ ತನಕ
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...