Home / ಕಥೆ / ಕಿರು ಕಥೆ / ವಸಂತ ಬಾರದಿರುವನೇ?

ವಸಂತ ಬಾರದಿರುವನೇ?

ಒಂದು ಮಾವಿನ ತೋಪು, ಮಾವಿನ ಮರದಲ್ಲಿ ಚೂತ ಚಿಗುರಿನೊಂದಿಗೆ ಅನೇಕ ಕೋಗಿಲೆಗಳು ವಾಸವಾಗಿದ್ದವು. ಒಮ್ಮೆ ತೊಪಿನ ಕೋಗಿಲೆಗಳೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದವು. ವಸಂತ ಆಗಮನವನ್ನು ಸಾರಿ ನಾವು ಕುಹೂ ಕುಹೂ ಎಂದು ಕೂಗಿ ವಸಂತಮಾಸ ಪೂರ ನಾವು ಹಾಡುತ್ತಿರುತ್ತೇವೆ. ನಮ್ಮ ಕೊರಳು ಒಣಗಿದರು ಯಾರೂ ಕೇಳುವವರಿಲ್ಲ. ನಮ್ಮ ಹಾಡನ್ನು ಕೇಳಿ ಆನಂದಿಸುವವರಾರೂ ನಮ್ಮನ್ನು ಸನ್ಮಾನಿಸಿಲ್ಲ. ಅಲ್ಲದೆ ಒಮ್ಮೊಮ್ಮೆ ಕೋಗಿಲೆ ಕಪ್ಪು ಎಂದು ವಿಮರ್ಶ ಬೇರೆಮಾಡುತ್ತಾರೆ.

ನಮ್ಮ ಸಿರಿ ಕಂಠ ಒಮ್ಮೆ ಹಾಡುವುದಕ್ಕೆ ಮುಷ್ಕರ ಹೂಡಿದರೆ ಆಗ ರಾಜ ವಸಂತನ ಆಗಮನ ತಿಳಿಯದೆ ಈ ಜನಗಳು ಪರಿತಪಿಸುತ್ತಾರೆ. ಆಗ ತಿಳಿಯುತ್ತದೆ ಅವರಿಗೆ ನಮ್ಮ ಬೆಲೆ, ಎಂದು ಕೋಗಿಲೆಗಳೆಲ್ಲವೂ ಮೌನ ತಾಳಿದವು. ಎಂದಿನಂತೆ ಚೈತ್ರ ಮಾಸ ಹುಟ್ಟಿತು. ಚಿಗುರು ಚೂತ, ಹಕ್ಕಿ ಚಿಲಿಪಿಲಿ, ಹೂವಿನ ಪರಿಮಳ ಎಲ್ಲೆಲ್ಲೂ ತುಂಬಿತು. ಆದರೆ ವಸಂತನ ಆಗಮನದ ಕೋಗಿಲೆ ಹಾಡು ಮಾತ್ರ ಯಾರಿಗೂ ಕೇಳಿಸಲಿಲ್ಲ. ಎಲ್ಲರೂ ಪೆಚ್ಚು ಮೋರೆಯೊಡನೆ ಚೈತ್ರ ಕಳೆದು ತಮ್ಮ ಕೆಲಸದಲ್ಲಿ ತೊಡಗಿದರು. ಚೈತ್ರ ವೈಶಾಖ ಮುಗಿದೊಡನೆ ಕೋಗಿಲೆಗಳೆಲ್ಲವೂ ಹಾಡಲು ತೊಡಗಿದವು. ಯಾರೂ ಹಾಡಿಗೆ ಗಮನ ಕೊಡಲಿಲ್ಲ. ವಸಂತ ಮುಗಿದ ಮೇಲೆ ಅದೆಲ್ಲಿಯ ಕೋಗಿಲೆಯ ಹಾಡು? ಎಂದು ನಿರ್ಲಕ್ಷ್ಯ ತೋರಿದರು. ಕೋಗಿಲೆಗಳು ಅಕಾಲದಲ್ಲಿ ಹಾಡಿಹಾಡಿ ಕೊರಲು ಮಾತ್ರ ಒಣಗಿತು.

“ಕೊರಳಲ್ಲಿ ಕಾಲವನ್ನು ಕಟ್ಟಿಹಾಕಲು ಉಂಟೇ? ಕಾಲಕ್ಕೆ ಬೆಲೆ ಕೊರಳಿಗಲ್ಲ” ಎಂದು ಮನಗಂಡವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...