ಒಮ್ಮೆ ಗುರುಗಳು ಶಿಷ್ಯರಲ್ಲಿ ಒಂದೆರಡು ಪ್ರಶ್ನೆ ಕೇಳಿದರು. “ನಾವು ನಡೆಯದೆ, ಯಾವ ವಾಹನವೂ ಇಲ್ಲದೆ ಯಾನದಲ್ಲಿ ತೊಡಗುವುದು ಹೇಗೆ?”

ಎರಡನೇಯ ಪ್ರಶ್ನೆ ”ಹಿಡಿಯಲಾಗದ ಪಕ್ಷಿಗಳಾವುವು?”

“ಇದಕ್ಕೆ ಉತ್ತರ ಹುಡುಕಿ ಬನ್ನಿ” ಎಂದು ಗುರುಗಳು ಶಿಷ್ಯಂದಿರನ್ನು ಅನ್ವೇಷಣೆಗೆ ಕಳುಹಿದರು.

ಶಿಷ್ಯಂದಿರು, ಗುಡ್ಡ, ಬೆಟ್ಟ, ನದಿ, ನಾಲೆ ಸಮುದ್ರಗಳನ್ನು ದಾಟಿ ಬಂದರು.

ಒಬ್ಬ ಶಿಷ್ಯ ಹೇಳಿದ- “ನಾವು ನಡೆಯದೆ ಮಾಡುವ ಯಾನ ಸಮುದ್ರಯಾನ” ಎಂದ.

ಸರಿ ಉತ್ತರ “ಅಂತರಂಗಯಾನ” – ಎಂದರು ಗುರುಗಳು.

ಮತ್ತೊರ್ವ ಶಿಷ್ಯ ಎರಡನೇಯ ಪ್ರಶ್ನೆ ಬಹು ಸುಲಭ. ನಾನು ಉತ್ತರಿಸುವೆ ಎಂದ-

“ಹಿಡಿಯಲಾಗದ ಹಕ್ಕಿಗಳು – ಗಿಡುಗ, ಹದ್ದು” ಎಂದು ಒಂದು ದೊಡ್ಡ ಪಟ್ಟಿ ಮಾಡಿ ಹೇಳಿದ, ಇನ್ನೊಬ್ಬ ಶಿಷ್ಯ.

ಸರಿಯಾದ ಉತ್ತರ- “ಆತ್ಮರೂಪಿ ಹಂಸ, ಪ್ರಾಣಪಕ್ಷಿ, ಹೃದಯ ಪಕ್ಷಿ” ಎಂದರು ಗುರುಗಳು. “ಶಿಷ್ಯಂದಿರು ಆಳ ಚಿಂತನೆ ಮಾಡಲಿಲ್ಲ ನಾವು” ಎಂದು ಅರಿತು ಕೊಂಡರು.
*****