Home / ಕಥೆ / ಕಿರು ಕಥೆ / ಸ್ವಾರ್ಥಿ ಸಾಧಕ

ಸ್ವಾರ್ಥಿ ಸಾಧಕ

ಒಬ್ಬ ಸ್ವಾರ್ಥಿ ಸಾಧಕ, ಅನೇಕ ವರುಷ, ಬೆಟ್ಟತಪ್ಪಲು, ಕಾಡುಮೇಡುಗಳಲ್ಲಿ ತಪಸ್ಸು ಮಾಡಿದ. ಅವನಿಗೆ ಒಂದು ಉತ್ಕಟ ಆಸೆ ಇತ್ತು. ಅವನಲ್ಲಿ ಐದು ಬರಿದಾದ ಮಣ್ಣಿನ ಬಿಂದಿಗೆಗಳು ಇದ್ದವು. ಅವನು ಕಠಿಣ ತಪದಿಂದ ಒಂದು ಬಿಂದಿಗೆಯಲ್ಲಿ ಬೆಳಕನ್ನು, ಎರಡನೇಯದರಲ್ಲಿ ಬೆಳದಿಂಗಳನ್ನು, ಮೂರನೇಯದರಲ್ಲಿ ಗಾಳಿಯನ್ನು, ನಾಲ್ಕನೇಯದರಲ್ಲಿ ಮಳೆಯನ್ನು, ಐದನೇಯದರಲ್ಲಿ ಬಿಸಿಲನ್ನು ತುಂಬಿಟ್ಟ, ಸೂರ್ಯನಿಗೆ ಮೋಡಕವಿದಾಗ, ಬಿಸಿಲ ಬಿಂದಿಗೆ ಬಗ್ಗಿಸಿ, ತಾನು ಮಾತ್ರ ಬಿಸಿಲು ಪಡೆಯುತ್ತಿದ್ದ. ರಾತ್ರಿ ಹೊತ್ತು, ಗಾಢಾಂಧಕಾರವಾದಾಗ ಬೆಳಕಿನ ಬಿಂದಿಗೆ ಬಗ್ಗಿಸಿ ಪ್ರಕಾಶ ಪಡೆಯುತ್ತಿದ್ದ. ಬೇಸಿಗೆ ಸಮಯದಲ್ಲಿ ಗಾಳಿ ಬಿಂದಿಗೆ ಬಗ್ಗಿಸಿ ತಂಪನ್ನು ಪಡೆದು ಸುಖ ಪಡುತ್ತಿದ್ದ, ಇನ್ನು ಕ್ಷಾಮ ಬಂದಾಗ ನೆಲ ಬಿರುಕು ಬಿಟ್ಟಾಗ ಬಿಂದಿಗೆ ಉರುಳಿಸಿ ಮಳೆ ಸುರಿಸಿ ಬೆಳೆ ಬಿತ್ತಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಇವನ ಸ್ವಾರ್ಥಕ್ಕೆ ಪಾಠಕಲಿಸಲು ಒಮ್ಮ ದೇವರು ದೊಡ್ಡ ಆಲಿಕಲ್ಲು ಮಳೆ ಸುರಿಸಿದ. ಕೊಡಗಳೆಲ್ಲಾ ಒಡೆದು ಚೂರು ಚೂರಾಗಿ ಬೆಳಕು, ಬೆಳದಿಂಗಳು, ಗಾಳಿ, ಮಳೆ, ಬಿಸಿಲು ಎಲ್ಲಾ ಹರಿದು ಹೋಯಿತು. ಸ್ವಾರ್ಥಿ ಸಾಧಕ ಎಲ್ಲಾ ಬಿಂದಿಗೆಗಳಲ್ಲಿ ಬಗ್ಗಿ ನೋಡಿದ. ಅವನಿಗೆ ಬರಿ ಶೂನ್ಯ ಕಂಡು ಅವನ ಕಣ್ಣು ತೆರೆಯಿತು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...