Home / ಕಥೆ / ಕಿರು ಕಥೆ / ಸ್ವಾರ್ಥಿ ಸಾಧಕ

ಸ್ವಾರ್ಥಿ ಸಾಧಕ

ಒಬ್ಬ ಸ್ವಾರ್ಥಿ ಸಾಧಕ, ಅನೇಕ ವರುಷ, ಬೆಟ್ಟತಪ್ಪಲು, ಕಾಡುಮೇಡುಗಳಲ್ಲಿ ತಪಸ್ಸು ಮಾಡಿದ. ಅವನಿಗೆ ಒಂದು ಉತ್ಕಟ ಆಸೆ ಇತ್ತು. ಅವನಲ್ಲಿ ಐದು ಬರಿದಾದ ಮಣ್ಣಿನ ಬಿಂದಿಗೆಗಳು ಇದ್ದವು. ಅವನು ಕಠಿಣ ತಪದಿಂದ ಒಂದು ಬಿಂದಿಗೆಯಲ್ಲಿ ಬೆಳಕನ್ನು, ಎರಡನೇಯದರಲ್ಲಿ ಬೆಳದಿಂಗಳನ್ನು, ಮೂರನೇಯದರಲ್ಲಿ ಗಾಳಿಯನ್ನು, ನಾಲ್ಕನೇಯದರಲ್ಲಿ ಮಳೆಯನ್ನು, ಐದನೇಯದರಲ್ಲಿ ಬಿಸಿಲನ್ನು ತುಂಬಿಟ್ಟ, ಸೂರ್ಯನಿಗೆ ಮೋಡಕವಿದಾಗ, ಬಿಸಿಲ ಬಿಂದಿಗೆ ಬಗ್ಗಿಸಿ, ತಾನು ಮಾತ್ರ ಬಿಸಿಲು ಪಡೆಯುತ್ತಿದ್ದ. ರಾತ್ರಿ ಹೊತ್ತು, ಗಾಢಾಂಧಕಾರವಾದಾಗ ಬೆಳಕಿನ ಬಿಂದಿಗೆ ಬಗ್ಗಿಸಿ ಪ್ರಕಾಶ ಪಡೆಯುತ್ತಿದ್ದ. ಬೇಸಿಗೆ ಸಮಯದಲ್ಲಿ ಗಾಳಿ ಬಿಂದಿಗೆ ಬಗ್ಗಿಸಿ ತಂಪನ್ನು ಪಡೆದು ಸುಖ ಪಡುತ್ತಿದ್ದ, ಇನ್ನು ಕ್ಷಾಮ ಬಂದಾಗ ನೆಲ ಬಿರುಕು ಬಿಟ್ಟಾಗ ಬಿಂದಿಗೆ ಉರುಳಿಸಿ ಮಳೆ ಸುರಿಸಿ ಬೆಳೆ ಬಿತ್ತಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಇವನ ಸ್ವಾರ್ಥಕ್ಕೆ ಪಾಠಕಲಿಸಲು ಒಮ್ಮ ದೇವರು ದೊಡ್ಡ ಆಲಿಕಲ್ಲು ಮಳೆ ಸುರಿಸಿದ. ಕೊಡಗಳೆಲ್ಲಾ ಒಡೆದು ಚೂರು ಚೂರಾಗಿ ಬೆಳಕು, ಬೆಳದಿಂಗಳು, ಗಾಳಿ, ಮಳೆ, ಬಿಸಿಲು ಎಲ್ಲಾ ಹರಿದು ಹೋಯಿತು. ಸ್ವಾರ್ಥಿ ಸಾಧಕ ಎಲ್ಲಾ ಬಿಂದಿಗೆಗಳಲ್ಲಿ ಬಗ್ಗಿ ನೋಡಿದ. ಅವನಿಗೆ ಬರಿ ಶೂನ್ಯ ಕಂಡು ಅವನ ಕಣ್ಣು ತೆರೆಯಿತು.
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...