Home / ಕವನ / ಅನುವಾದ / ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ದಾರಿಯಲ್ಲಿ ಎದುರಾದರು ಪಾದ್ರಿ
ಮಾತ ಮಧ್ಯೆ ಎಚ್ಚರಿಸಿದರು.
‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ,
ಬತ್ತಿ ಹೋಗುತಿವೆ ನಾಳಗಳು;
ವಾಸಿಸು ಹೆಣ್ಣೆ ದೇವಸೌಧದಲಿ,
ತಕ್ಕುವಲ್ಲ ಕೊಳೆರೊಪ್ಪಗಳು’.

ಕೂಗಿ ಹೇಳಿದೆನು ಪಾದ್ರಿಗೆ ನಾನು
‘ಸೊಗಸಿಗು ಹೊಲಸಿಗು ನಂಟು ಇದೆ
ಬೇಕೇ ಬೇಕು ಸೊಗಸಿಗೆ ಹೊಲಸು.
ಗೆಳೆಯರಿಲ್ಲ ನಿಜ, ಆದರದು
ದೇಹದ ದೈನ್ಯದ, ಹೃದಯದ ಹೆಮ್ಮೆಯ ಗರಡಿಯಲ್ಲಿ ಕಲಿತಂಥದ್ದು
ಗೋರಿಯಂತೆಯೇ ಹಾಸಿಗೆ ಕೂಡ ಅಲ್ಲಗಳೆಯದ ಸತ್ಯವದು.

ಎಷ್ಟೆ ಹಮ್ಮಿರಲಿ ಒಲಿದ ಹೆಣ್ಣಿಗೆ
ಎಷ್ಟೇ ಸೆಟೆದಿರಲಿ;
ಪ್ರೇಮ ನಿಲ್ಲಿಸಿದೆ ತನ್ನ ಮಹಲನ್ನ
ಉಚ್ಚೆಯ ಬಚ್ಚಲಲಿ;
ಹರಿಯದೆ ಯಾವುದು ಹೇಗಾದೀತು ತನಗೆ ತಾನೆ ಪೂರ್‍ಣ?
ಹರಿಯದೆ ಹೇಗೆ ಇಡಿಯಾದೀತು ಕರೆಯದೆ ಇನ್ನೊಂದನ್ನ?
*****
ಭೋಗ ಮತ್ತು ವಿರಾಗಪರವಾದ ಎರಡೂ ನಿಲುವುಗಳ ಢಿಕ್ಕಿಯನ್ನು ಕವಿ ಈ ಪದ್ಯದಲ್ಲಿ ಚಿತ್ರಿಸುತ್ತಾನೆ. ತಾನು ಕಂಡಿದ್ದ ಮೇರಿ ಎಂಬ ಹುಚ್ಚಿ ಹೆಣ್ಣೊಬ್ಬಳನ್ನು ಒಂದು ಪಾತ್ರವಾಗಿ ಹೊರಳಿಸಿಕೊಂಡು ಏಟ್ಸ್ ಎಂಟು ಪದ್ಯಗಳನ್ನು ಬರೆದಿದ್ದಾನೆ. ಇದು ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ‘ಜ್ಞಾನಿ’ಯಾದ ಬಿಷಪ್ಪನಿಗೆ ‘ಹುಚ್ಚಿ’ಯಾದ ಜೇನ್ ಕೊಡುವ ಉತ್ತರ ಮಾರ್‍ಮಿಕವಾಗಿದೆ.

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...