Home / ಕಥೆ / ಕಿರು ಕಥೆ / ಗುರುಗಳ ಹಿರಿಮೆ

ಗುರುಗಳ ಹಿರಿಮೆ

ಅದು ಒಂದು ದೊಡ್ಡ ಊರು. ಅಲ್ಲಿ ಹತ್ತು ಹಲವು ಗುರುಗಳ ಮಠಗಳು ಮತ್ತು ಅವರ ಶಿಷ್ಯರುಗಳು ಸೇರಿ ಇದ್ದರು. ಮಠಗಳ ಗುರುಗಳಲ್ಲಿ ಬಹಳ ಪೈಪೋಟಿ ಇತ್ತು. ಶಿಷ್ಯರು ಬಾಜಾ ಬಜಂತ್ರಿ ಹೊಡೆದು ತಮ್ಮ ಗುರುಗಳ ಮಹಿಮೆ ಪವಾಡಗಳ ಬಗ್ಗೆ ಗುಣಗಾನ ಮಾಡಿ ಇತರ ಮಠಗಳ ಅವಹೇಳನ ಮಾಡುತ್ತಿದ್ದರು.

ಆ ಊರಿಗೆ ಒಬ್ಬ ಸಾಧು ಬಂದರು. ಮಠಗಳ ನಡುವೆ, ಗುರುಗಳ ನಡುವೆ, ಶಿಷ್ಯರ ನಡುವೆ ಇರುವ ಈರ್ಷೆ ವೈಷಮ್ಯ, ಅಹಂಭಾವ, ಹೆಮ್ಮೆ ನೋಡಿ ಮರುಗುತಿದ್ದರು.

ಒಮ್ಮೆ ಅಲ್ಲಿ ಸಾಧು ಸಂತರ, ಗುರುಗಳ ಸಮ್ಮೇಳನ ನಡೆಯಿತು. ಎಲ್ಲಾ ಮಠಾಧೀಶರು ತಮಗಾಗಿ ಅಲಂಕರಿಸಿದ ಪೀಠಗಳಲ್ಲಿ ಆಸೀನರಾದರು. ಅವರವರ ಶಿಷ್ಯರು ವಂದಿಮಾಗದಿಗರಂತ ಅವರ ಬಗ್ಗೆ ಹಿರಿಮೆಯಿಂದ ಹೇಳುತಿದ್ದರು.

“ನಮ್ಮ ಮಠಾಧೀಶರು, ಸಾರ್ವಭೌಮ, ಬೆಟ್ಟವನ್ನು ಭುಜದಲ್ಲಿ ಹೊತ್ತವರು.” ಎಂದ ಓರ್ವ ಮಠದ ಶಿಷ್ಯ.

“ನಮ್ಮ ಮಠಾಧೀಶರು ಆಕಾಶವನ್ನೇ ತಲೆಯಲ್ಲಿ ಹೊತ್ತವರು” ಎಂದ.

ಮತ್ತೊರ್ವ ಶಿಷ್ಯ ಅತಿ ಹೆಮ್ಮೆಯಿಂದ ಇದೆಲ್ಲಾ, ಏನು ಮಹಾ? ”ನಮ್ಮ ಮಠಾಧೀಶರು ನದಿಯ ಒಂದು ದಡದಲ್ಲಿ ಕುಳಿತು ಇನ್ನೊಂದು ದಡದಲ್ಲಿ ಇರುವವರಿಗೆ ಉಪದೇಶಮಾಡುತ್ತಾರೆ” ಎಂದ.

“ನಿಮ್ಮ ಮಠಾಧೀಶರು ಏನು? ನಮ್ಮ ಗುರುಗಳು ನಕ್ಷತ್ರಗಳಿಂದ ದೇವರನ್ನು ಪೂಜಿಸುತ್ತಾರೆ” ಎಂದ ಮತ್ತೋರ್ವ.

ಅಲ್ಲಿ ನೆರದಿದ್ದ ಅತಿ ಸಾಮಾನ್ಯ ಸಾಧುವಿನ ಶಿಷ್ಯನೊಬ್ಬ ಎದ್ದು ನಿಂತು ಹೇಳಿದ- ”ನಮ್ಮ ಸಾಧು ಗುರುಗಳು ಮುಚ್ಚಿದ ಕಣ್ಣನ್ನು ತೆರೆಯಲು ಕಲಿಸಿದ್ದಾರೆ. ಮುಚ್ಚಿದ ಎದೆಯ ಬಾಗಿಲನ್ನು ತೆರೆಯಲು ಕಲಿಸಿದ್ದಾರೆ. ನಿರ್ಭಯ ಸತ್ಯ ಆಡುವದನ್ನು ಕಲಿಸಿದ್ದಾರೆ. ಹೆಚ್ಚೇಕೆ ಶಾಂತಿ ಬಾಳ್ವೆ ಮಾಡಿ ಬದುಕುವುದನ್ನು ಕಲಿಸಿದ್ದಾರೆ. ಈ ಸಾಮಾನ್ಯ ಪವಾಡಗಳು ನಮ್ಮ ಬಾಳಿಗೆ ಅಸಾಮಾನ್ಯ ಹಿರಿಮೆ ತಂದಿದೆ.” ಎಂದರು. – ಬೇರೆ ಮಠಾಧೀಶರು ತಲೆಗೆ ಮುಸುಕನ್ನು ಎಳೆದುಕೊಂಡು ತಮ್ಮ ತಮ್ಮ ಮಠಗಳಿಗೆ ತೆರಳಿದರು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...