Home / ಕಥೆ / ಕಿರು ಕಥೆ / ಗುರುಗಳ ಹಿರಿಮೆ

ಗುರುಗಳ ಹಿರಿಮೆ

ಅದು ಒಂದು ದೊಡ್ಡ ಊರು. ಅಲ್ಲಿ ಹತ್ತು ಹಲವು ಗುರುಗಳ ಮಠಗಳು ಮತ್ತು ಅವರ ಶಿಷ್ಯರುಗಳು ಸೇರಿ ಇದ್ದರು. ಮಠಗಳ ಗುರುಗಳಲ್ಲಿ ಬಹಳ ಪೈಪೋಟಿ ಇತ್ತು. ಶಿಷ್ಯರು ಬಾಜಾ ಬಜಂತ್ರಿ ಹೊಡೆದು ತಮ್ಮ ಗುರುಗಳ ಮಹಿಮೆ ಪವಾಡಗಳ ಬಗ್ಗೆ ಗುಣಗಾನ ಮಾಡಿ ಇತರ ಮಠಗಳ ಅವಹೇಳನ ಮಾಡುತ್ತಿದ್ದರು.

ಆ ಊರಿಗೆ ಒಬ್ಬ ಸಾಧು ಬಂದರು. ಮಠಗಳ ನಡುವೆ, ಗುರುಗಳ ನಡುವೆ, ಶಿಷ್ಯರ ನಡುವೆ ಇರುವ ಈರ್ಷೆ ವೈಷಮ್ಯ, ಅಹಂಭಾವ, ಹೆಮ್ಮೆ ನೋಡಿ ಮರುಗುತಿದ್ದರು.

ಒಮ್ಮೆ ಅಲ್ಲಿ ಸಾಧು ಸಂತರ, ಗುರುಗಳ ಸಮ್ಮೇಳನ ನಡೆಯಿತು. ಎಲ್ಲಾ ಮಠಾಧೀಶರು ತಮಗಾಗಿ ಅಲಂಕರಿಸಿದ ಪೀಠಗಳಲ್ಲಿ ಆಸೀನರಾದರು. ಅವರವರ ಶಿಷ್ಯರು ವಂದಿಮಾಗದಿಗರಂತ ಅವರ ಬಗ್ಗೆ ಹಿರಿಮೆಯಿಂದ ಹೇಳುತಿದ್ದರು.

“ನಮ್ಮ ಮಠಾಧೀಶರು, ಸಾರ್ವಭೌಮ, ಬೆಟ್ಟವನ್ನು ಭುಜದಲ್ಲಿ ಹೊತ್ತವರು.” ಎಂದ ಓರ್ವ ಮಠದ ಶಿಷ್ಯ.

“ನಮ್ಮ ಮಠಾಧೀಶರು ಆಕಾಶವನ್ನೇ ತಲೆಯಲ್ಲಿ ಹೊತ್ತವರು” ಎಂದ.

ಮತ್ತೊರ್ವ ಶಿಷ್ಯ ಅತಿ ಹೆಮ್ಮೆಯಿಂದ ಇದೆಲ್ಲಾ, ಏನು ಮಹಾ? ”ನಮ್ಮ ಮಠಾಧೀಶರು ನದಿಯ ಒಂದು ದಡದಲ್ಲಿ ಕುಳಿತು ಇನ್ನೊಂದು ದಡದಲ್ಲಿ ಇರುವವರಿಗೆ ಉಪದೇಶಮಾಡುತ್ತಾರೆ” ಎಂದ.

“ನಿಮ್ಮ ಮಠಾಧೀಶರು ಏನು? ನಮ್ಮ ಗುರುಗಳು ನಕ್ಷತ್ರಗಳಿಂದ ದೇವರನ್ನು ಪೂಜಿಸುತ್ತಾರೆ” ಎಂದ ಮತ್ತೋರ್ವ.

ಅಲ್ಲಿ ನೆರದಿದ್ದ ಅತಿ ಸಾಮಾನ್ಯ ಸಾಧುವಿನ ಶಿಷ್ಯನೊಬ್ಬ ಎದ್ದು ನಿಂತು ಹೇಳಿದ- ”ನಮ್ಮ ಸಾಧು ಗುರುಗಳು ಮುಚ್ಚಿದ ಕಣ್ಣನ್ನು ತೆರೆಯಲು ಕಲಿಸಿದ್ದಾರೆ. ಮುಚ್ಚಿದ ಎದೆಯ ಬಾಗಿಲನ್ನು ತೆರೆಯಲು ಕಲಿಸಿದ್ದಾರೆ. ನಿರ್ಭಯ ಸತ್ಯ ಆಡುವದನ್ನು ಕಲಿಸಿದ್ದಾರೆ. ಹೆಚ್ಚೇಕೆ ಶಾಂತಿ ಬಾಳ್ವೆ ಮಾಡಿ ಬದುಕುವುದನ್ನು ಕಲಿಸಿದ್ದಾರೆ. ಈ ಸಾಮಾನ್ಯ ಪವಾಡಗಳು ನಮ್ಮ ಬಾಳಿಗೆ ಅಸಾಮಾನ್ಯ ಹಿರಿಮೆ ತಂದಿದೆ.” ಎಂದರು. – ಬೇರೆ ಮಠಾಧೀಶರು ತಲೆಗೆ ಮುಸುಕನ್ನು ಎಳೆದುಕೊಂಡು ತಮ್ಮ ತಮ್ಮ ಮಠಗಳಿಗೆ ತೆರಳಿದರು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...