Home / ಲೇಖನ / ಇತರೆ / ಲಡ್ಡಿನ ಮಹಿಮೆ

ಲಡ್ಡಿನ ಮಹಿಮೆ

ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಲಡ್ಡಿನ ಮಹಿಮೆ ಅಪಾರ. ನಾನು ೧೯೯೧ರಿಂದ ಈತನಕ ಹತ್ತಾರು ಸಲ ಹೋಗಿ ಬಂದಿದ್ದೇನೆ.

ಒಮ್ಮೆ- ಬರಿಗಾಲಲ್ಲಿ ಬೆಟ್ಟ ಹತ್ತಿ ಇಳಿದಿದ್ದುಂಟು. ಪ್ರಕೃತಿ ಸೌಂದರ್ಯ ಆಸ್ವಾದಿಸಿದ್ದುಂಟು.

ನನ್ನ ಕಣ್ಣ ಮುಂದೆ ನಿತ್ಯ ಸುತ್ತ ಸುಳಿಯುವುದೆಂದರೆ… ಇಲ್ಲಿನ ಲಡ್ಡು, ಈ ಲಡ್ಡಿನ ಮಹಿಮೆ ಅಪಾರ. ಒಮ್ಮೆ ತಿಂದರೆ ಇನ್ನೊಮ್ಮೆ, ಮತ್ತೊಮ್ಮೆ, ತಿನ್ನಬೇಕೆನಿಸುವುದು!

ವಿದೇಶಿಯರೂ ಇಲ್ಲಿಗೆ ಬಂದು ಹೋಗುವರು…

ನಾನು ಈ ಐದು ದಶಕಗಳಲ್ಲಿ ನೂರಾರು ಕಡೆಗಳಲ್ಲಿ ಲಡ್ಡು ಸವಿದಿದ್ದೇನೆ. ಆದರೆ ತಿರುಪತಿಯ ಲಡ್ಡು ಇದ್ದಂತೇ ಇಲ್ಲವೇ ಇಲ್ಲ! “ಇದೇಕೆ ಇಷ್ಟು ರುಚಿ ಶುಚಿ? ಈ ಲಡ್ಡಿನ ಮಹಿಮೆಯಾದರೂ ಏನು? ಇದರ ಹಿಂದಿರುವ ರಹಸ್ಯವಾದರೂ ಏನು? ಸ್ಥಳ ಮಹಿಮೆಯೇ? ಪಾಕ ಶಾಸ್ತ್ರವೇ?” ಅಧ್ಯಯನ ಯೋಗ್ಯವಾದ ವಸ್ತು ವಿಶೇಷವಾಗಿದೆ.

ಇಲ್ಲಿನ ಲಡ್ಡು ಆಕರ್‍ಷಣೆಯೇ ಸೋಜಿಗವೆನಿಸುವುದು. ಒಂದು ಲಡ್ಡು ಕೈಯಲ್ಲಿಡಿದರೆ ಕೈತುಂಬಾ ೩೦೦ ಗ್ರಾಂ ತೂಕದ್ದು! ಒಂದು ತಿನ್ನಲು ಮುಖ ಉಜ್ಜಿ… ಆಹಾ.. ಸಾಕುಸಾಕಾಗಿ ಬಿಡುವುದು. ಕೈಬಾಯೆಲ್ಲ ಸುವಾಸನೆ ಘಮ-ಘಮ ಪರಿಮಳ ಬೀರುವುದು! ಒಂದೇ ಸಾರಿ ಎರಡು ಲಡ್ಡುಗಳನ್ನು ಬಿಡದೆ ಪ್ರತಿ ಸಾರಿ ಸವಿದಿದ್ದೇನೆ. ಯಾವುದೇ ರೀತಿಯ ಅಡ್ಡ ಪರಿಣಾಮ ಕಂಡು ಬಂದಿಲ್ಲ! ಸಕ್ಕರೆ ರೋಗವನ್ನು ಹತೋಟಿಗೆ ತಂದಿದೆ. ರಕ್ತದೊತ್ತಡವನ್ನು ಸರಿದೂಗಿಸಿದೆ. ಹಸಿವು ಹೆಚ್ಚಿಸಿದೆ. ಉಲ್ಲಾಸ ಉತ್ಸಾಹ ಹೆಚ್ಚಿಸಿದೆ. ಇನ್ನೊಂದು ಲಡ್ಡು ತಿನ್ನಬೇಕೆಂಬಾಸೆ ಮೂಡಿದೆ.

ಲಡ್ಡಿನ ವಾಸನೆ ಕಿಲೋಮೀಟರ್‌ವರೆಗೂ ವ್ಯಾಪಿಸಿದೆ. ಅದರಲ್ಲಿ ರಾಶಿರಾಶಿ ಕಲ್ಲುಸಕ್ಕರೆ, ಬಾದಾಮಿ, ಉತ್ತೂತ್ತಿ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಬೆಲ್ಲ, ತುಪ್ಪ, ಲವಂಗ ಒಣಕೊಬ್ಬರಿ.. ಗುಲ್ಕನ್… ಅಬ್ಬಾಬ್ಬಾ… ಏನೆಲ್ಲ ಹಾಕಿ ತಯಾರಿಸಿದ ಲಡ್ಡು ವಾರವಿಟ್ಟರೂ ಕೆಡದಂತೆ ಉಳಿಯುವ ಮಹಿಮೆ ಬಣ್ಣಿಸಲು ಅಸಾಧ್ಯ! ತಿನ್ನಬೇಕು ತಿಂದು ಅದರ ಸವಿ ಸವಿಯಬೇಕು. ಒಮ್ಮೆ ಶ್ರೀಮಹಾವಿಷ್ಣುವೇ ಭಕ್ತನ ವೇಷದಲ್ಲಿ ಬಂದು ಲಡ್ಡು ಸವಿದನೆಂಬ ಕಥೆಯೇ ಉಂಟು! ಅಷ್ಟು ವಿಶ್ವವಿಖ್ಯಾತಿ….

ಈ ಲಡ್ಡಿಗೊಂದು ಇತಿಹಾಸವಿದೆ. ಇದನ್ನು ಜನರಿಗೆ ಪ್ರಸಾದವಾಗಿ ದಿನಾಂಕ ೦೨-೦೮-೧೭೧೫ರಂದು ಆರಂಭಿಸಿದ್ದು ಈಗ ೩೦೦ ವರ್ಷಗಳ ಇತಿಹಾಸವನ್ನು ಸಾರುವುದು.

ಪ್ರತಿನಿತ್ಯ ೬೫೦ ಜನರು ೩೦೦ ಜನ ಪರಿಣಿತ ಅಡಿಗೆ ಭಟ್ಟರೂ ಸೇರಿ ಸುಮಾರು ೩ ಲಕ್ಷ ಲಡ್ಡುಗಳನ್ನು ತಯಾರಿಸುವರು. ೨೦೧೪ನೇ ಸಾಲಿನಲ್ಲಿ ೯೦ ದಶಲಕ್ಷ ಲಡ್ಡು ಖರ್‍ಚಾಗಿದೆ.

ಬ್ರಹೋತ್ಸವದ ಕಾಲದಲ್ಲಿ ೧.೮ ದಶಲಕ್ಷ ಲಡ್ಡುಗಳು ಖರ್‍ಚಾಗುತ್ತವೆ.

ಒಂದು ಲಡ್ಡುವಿಗೆ ೨೫ ರೂಪಾಯಿಗಳಷ್ಟು ಖರ್‍ಚು ಬರಬರುವುದು. ಆದರೆ ದೇವಸ್ಥಾನದ ಕಮಿಟಿಯವರು ಭಕ್ತ ಜನರಿಗೆ ರೂಪಾಯಿ ೧೦ರಂತೇ ಎರಡು ಲಡ್ಡು ನೀಡುತ್ತಿರುವರು.

೨೦೧೫-೧೬ನೆಯ ಸಾಲಿನಲ್ಲಿ ಬರೀ ಲಡ್ಡು ಮಾರಾಟದಿಂದಲೇ ೨೦೦ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...