Home / ಲೇಖನ / ಇತರೆ / ಲಡ್ಡಿನ ಮಹಿಮೆ

ಲಡ್ಡಿನ ಮಹಿಮೆ

ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಲಡ್ಡಿನ ಮಹಿಮೆ ಅಪಾರ. ನಾನು ೧೯೯೧ರಿಂದ ಈತನಕ ಹತ್ತಾರು ಸಲ ಹೋಗಿ ಬಂದಿದ್ದೇನೆ.

ಒಮ್ಮೆ- ಬರಿಗಾಲಲ್ಲಿ ಬೆಟ್ಟ ಹತ್ತಿ ಇಳಿದಿದ್ದುಂಟು. ಪ್ರಕೃತಿ ಸೌಂದರ್ಯ ಆಸ್ವಾದಿಸಿದ್ದುಂಟು.

ನನ್ನ ಕಣ್ಣ ಮುಂದೆ ನಿತ್ಯ ಸುತ್ತ ಸುಳಿಯುವುದೆಂದರೆ… ಇಲ್ಲಿನ ಲಡ್ಡು, ಈ ಲಡ್ಡಿನ ಮಹಿಮೆ ಅಪಾರ. ಒಮ್ಮೆ ತಿಂದರೆ ಇನ್ನೊಮ್ಮೆ, ಮತ್ತೊಮ್ಮೆ, ತಿನ್ನಬೇಕೆನಿಸುವುದು!

ವಿದೇಶಿಯರೂ ಇಲ್ಲಿಗೆ ಬಂದು ಹೋಗುವರು…

ನಾನು ಈ ಐದು ದಶಕಗಳಲ್ಲಿ ನೂರಾರು ಕಡೆಗಳಲ್ಲಿ ಲಡ್ಡು ಸವಿದಿದ್ದೇನೆ. ಆದರೆ ತಿರುಪತಿಯ ಲಡ್ಡು ಇದ್ದಂತೇ ಇಲ್ಲವೇ ಇಲ್ಲ! “ಇದೇಕೆ ಇಷ್ಟು ರುಚಿ ಶುಚಿ? ಈ ಲಡ್ಡಿನ ಮಹಿಮೆಯಾದರೂ ಏನು? ಇದರ ಹಿಂದಿರುವ ರಹಸ್ಯವಾದರೂ ಏನು? ಸ್ಥಳ ಮಹಿಮೆಯೇ? ಪಾಕ ಶಾಸ್ತ್ರವೇ?” ಅಧ್ಯಯನ ಯೋಗ್ಯವಾದ ವಸ್ತು ವಿಶೇಷವಾಗಿದೆ.

ಇಲ್ಲಿನ ಲಡ್ಡು ಆಕರ್‍ಷಣೆಯೇ ಸೋಜಿಗವೆನಿಸುವುದು. ಒಂದು ಲಡ್ಡು ಕೈಯಲ್ಲಿಡಿದರೆ ಕೈತುಂಬಾ ೩೦೦ ಗ್ರಾಂ ತೂಕದ್ದು! ಒಂದು ತಿನ್ನಲು ಮುಖ ಉಜ್ಜಿ… ಆಹಾ.. ಸಾಕುಸಾಕಾಗಿ ಬಿಡುವುದು. ಕೈಬಾಯೆಲ್ಲ ಸುವಾಸನೆ ಘಮ-ಘಮ ಪರಿಮಳ ಬೀರುವುದು! ಒಂದೇ ಸಾರಿ ಎರಡು ಲಡ್ಡುಗಳನ್ನು ಬಿಡದೆ ಪ್ರತಿ ಸಾರಿ ಸವಿದಿದ್ದೇನೆ. ಯಾವುದೇ ರೀತಿಯ ಅಡ್ಡ ಪರಿಣಾಮ ಕಂಡು ಬಂದಿಲ್ಲ! ಸಕ್ಕರೆ ರೋಗವನ್ನು ಹತೋಟಿಗೆ ತಂದಿದೆ. ರಕ್ತದೊತ್ತಡವನ್ನು ಸರಿದೂಗಿಸಿದೆ. ಹಸಿವು ಹೆಚ್ಚಿಸಿದೆ. ಉಲ್ಲಾಸ ಉತ್ಸಾಹ ಹೆಚ್ಚಿಸಿದೆ. ಇನ್ನೊಂದು ಲಡ್ಡು ತಿನ್ನಬೇಕೆಂಬಾಸೆ ಮೂಡಿದೆ.

ಲಡ್ಡಿನ ವಾಸನೆ ಕಿಲೋಮೀಟರ್‌ವರೆಗೂ ವ್ಯಾಪಿಸಿದೆ. ಅದರಲ್ಲಿ ರಾಶಿರಾಶಿ ಕಲ್ಲುಸಕ್ಕರೆ, ಬಾದಾಮಿ, ಉತ್ತೂತ್ತಿ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಬೆಲ್ಲ, ತುಪ್ಪ, ಲವಂಗ ಒಣಕೊಬ್ಬರಿ.. ಗುಲ್ಕನ್… ಅಬ್ಬಾಬ್ಬಾ… ಏನೆಲ್ಲ ಹಾಕಿ ತಯಾರಿಸಿದ ಲಡ್ಡು ವಾರವಿಟ್ಟರೂ ಕೆಡದಂತೆ ಉಳಿಯುವ ಮಹಿಮೆ ಬಣ್ಣಿಸಲು ಅಸಾಧ್ಯ! ತಿನ್ನಬೇಕು ತಿಂದು ಅದರ ಸವಿ ಸವಿಯಬೇಕು. ಒಮ್ಮೆ ಶ್ರೀಮಹಾವಿಷ್ಣುವೇ ಭಕ್ತನ ವೇಷದಲ್ಲಿ ಬಂದು ಲಡ್ಡು ಸವಿದನೆಂಬ ಕಥೆಯೇ ಉಂಟು! ಅಷ್ಟು ವಿಶ್ವವಿಖ್ಯಾತಿ….

ಈ ಲಡ್ಡಿಗೊಂದು ಇತಿಹಾಸವಿದೆ. ಇದನ್ನು ಜನರಿಗೆ ಪ್ರಸಾದವಾಗಿ ದಿನಾಂಕ ೦೨-೦೮-೧೭೧೫ರಂದು ಆರಂಭಿಸಿದ್ದು ಈಗ ೩೦೦ ವರ್ಷಗಳ ಇತಿಹಾಸವನ್ನು ಸಾರುವುದು.

ಪ್ರತಿನಿತ್ಯ ೬೫೦ ಜನರು ೩೦೦ ಜನ ಪರಿಣಿತ ಅಡಿಗೆ ಭಟ್ಟರೂ ಸೇರಿ ಸುಮಾರು ೩ ಲಕ್ಷ ಲಡ್ಡುಗಳನ್ನು ತಯಾರಿಸುವರು. ೨೦೧೪ನೇ ಸಾಲಿನಲ್ಲಿ ೯೦ ದಶಲಕ್ಷ ಲಡ್ಡು ಖರ್‍ಚಾಗಿದೆ.

ಬ್ರಹೋತ್ಸವದ ಕಾಲದಲ್ಲಿ ೧.೮ ದಶಲಕ್ಷ ಲಡ್ಡುಗಳು ಖರ್‍ಚಾಗುತ್ತವೆ.

ಒಂದು ಲಡ್ಡುವಿಗೆ ೨೫ ರೂಪಾಯಿಗಳಷ್ಟು ಖರ್‍ಚು ಬರಬರುವುದು. ಆದರೆ ದೇವಸ್ಥಾನದ ಕಮಿಟಿಯವರು ಭಕ್ತ ಜನರಿಗೆ ರೂಪಾಯಿ ೧೦ರಂತೇ ಎರಡು ಲಡ್ಡು ನೀಡುತ್ತಿರುವರು.

೨೦೧೫-೧೬ನೆಯ ಸಾಲಿನಲ್ಲಿ ಬರೀ ಲಡ್ಡು ಮಾರಾಟದಿಂದಲೇ ೨೦೦ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...