Home / ಕವನ / ಅನುವಾದ / ಪುನರಾವತಾರ

ಪುನರಾವತಾರ

ಹಿಗ್ಗುತ್ತಿರುವ ವೃತ್ತದಾಕಾರದಲ್ಲಿ, ಸುತ್ತುತ್ತ ಸುತ್ತುತ್ತ,
ಕೇಳಿಸದು ಡೇಗೆಗೆ ಡೇಗೆಗಾರನ ಕೂಗು;
ಕಳಚಿಕೊಳ್ಳುತ್ತಲಿದೆ ಅಂಗಾಂಗ, ಒಟ್ಟಾಗಿ ಹಿಡಿಯಲಾರದ ಕೇಂದ್ರ,
ಛೂಬಿಟ್ಟ ಹಾಗಿದೆ ಅನಾಯಕತೆಯನ್ನೇ ಇಡಿಯ ಲೋಕದ ತುಂಬ;
ರಕ್ತಮಂದ ಪ್ರವಾಹ ಕಟ್ಟೊಡೆದು ನುಗ್ಗಿದೆ
ಮುಗ್ಧತೆಯ ಉತ್ಸವ ಮುಳುಗಿ ತಳ ಸೇರಿದೆ,
ಉತ್ತಮರಿಗಿಲ್ಲ ದೃಢನಂಬಿಕೆ, ನಿಕೃಷ್ಟರಿಗೆ
ತೀವ್ರ ಭಾವೋನ್ಮಾದಪರತೆ.

ಯಾವುದೋ ದರ್‍ಶನಕ್ಕಿದು ಕಾಲ ಖಂಡಿತ,
ಪುನರಾವತಾರಕ್ಕೆ ಕಾಲ ಇದು ಖಂಡಿತ.
ಪುನರಾವತಾರ! ಪದದುಚ್ಚಾರ ಆಯಿತೋ
ಕಣ್ಣಕುಕ್ಕುತ್ತಿದೆ ಪುರಾಣಸ್ಮೃತಿಯಿಂದೆದ್ದ ಘೋರ ಬೃಹದಾಕಾರ,
ದೂರ ಮರುಭೂಮಿಯಲ್ಲೆಲ್ಲೊ ನರಶಿರವನ್ನು ಹೊತ್ತ ಸಿಂಹಶರೀರ;
ಶೂನ್ಯಕಾರುವ ನೋಟ, ಸೂರ್‍ಯನಂತೇ, ಕ್ರೂರ,
ಭಾರ ತೊಡೆಯೆತ್ತೆತ್ತಿ ನಿಧಾನ ಚಲಿಸುತ್ತಿದೆ,
ಕೆರಳಿರುವ ಮರುಭೂಮಿಹಕ್ಕಿಗಳ ನೆರಳುಗಳು ಅದರ ಸುತ್ತ.
ಕತ್ತಲಿಳಿಯುತ್ತಿದೆ ಮತ್ತೆ ಕೆಳಗೆ. ಈಗ
ಗೊತ್ತಾಗುತ್ತಿದೆ ನನಗೆ ತೂಗುತೊಟ್ಟಿಲದೊಂದು
ಇಪ್ಪತ್ತು ಶತಕಗಳ ಗಾಢನಿದ್ದೆಯ ಕಾಡಿ ದುಃಸಪ್ನ ಬಡಿಸಿದ್ದು.
ತನ್ನ ಜನನದ ಗಳಿಗೆ ಇನ್ನೇನು ಬಂತೆಂದು
ತೂಗಿ ಚಲಿಸುತ್ತಿದೆಯೊ ಹೇಗೆ ಈ ಘೋರಮೃಗ
ಬೆತ್ಲಹಮ್ಮಿನ ಕಡೆಗೆ?
*****
ಎರಡು ಸಾವಿರ ವರ್‍ಷಗಳಿಗೊಮ್ಮೆ ಯುಗ ಬದಲುತ್ತದೆ; ಹೊಸ ಅವತಾರದಿಂದ ಅದರ ಆರಂಭವಾಗುತ್ತದೆ ಎಂದು ಏಟ್ಸ್ ನಂಬಿದ್ದ. ಕ್ರಿಸ್ತ ಜನಿಸಿ ಎರಡು ಸಹಸ್ರ ವರ್‍ಷಗಳಾಗುತ್ತಿವೆ. ಯುಗಜೀವನ ತುಂಬ ಕಲುಷಿತವಾಗಿದೆ. ಆಗಲಿರುವ ಅವತಾರದ ಕಲ್ಪನೆ ಕವನದಲ್ಲಿ ಮೂಡಿದೆ.

ಪುರಾಣ ಸ್ಮೃತಿ: ಮನುಷ್ಯ ಜನಾಂಗಕ್ಕೆಲ್ಲ ಸಾಮಾನ್ಯವಾದ ಸ್ಮೃತಿ, ಪುರಾಣ ಐತಿಹ್ಯಗಳಲ್ಲಿ ಮತ್ತೆಮತ್ತೆ ಪುನರಾವರ್‍ತಿಸುವ ಪ್ರತಿಮೆಗಳ ಸಂಗ್ರಹ. ಇಲ್ಲಿ ಬರುವ ‘ನರಶಿರವನ್ನು ಹೊತ್ತ ಸಿಂಹಶರೀರ’ ಅಂಥ ಒಂದು ಪ್ರತಿಮೆ.

ಬೆತ್ಲೆಹೆಮ್ : ಕ್ರಿಸ್ತನ ಜನ್ಮಸ್ಥಳ.

ಮೂಲ: ವಿಲಿಯಂ ಬಟ್ಲರ್ ಏಟ್ಸ್

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...