Home / ಲೇಖನ / ಇತರೆ / ಇದು ಸಿನಿಮಾ ಅಲ್ಲ

ಇದು ಸಿನಿಮಾ ಅಲ್ಲ

ನೀವೆಲ್ಲ ಜುಲೈ ೨೦೧೫ರಲ್ಲಿ ನಟ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯಿಸಿರುವ ‘ಭಜರಂಗಿ ಭಾಯಿಜಾನ್’ ಚಲನಚಿತ್ರವನ್ನು ನೋಡಿ ಐದಾರು ಸಾರು ಕಣ್ಣೀರು ಸುರಿಸಿರಬಹುದು!

ಭವ್ಯ ಭಾರತದಲ್ಲಿ ಕಳೆದು ಹೋಗುವ ಪಾಕ್‌ನ ಹರ್‍ಷಾಲಿ ಮುನ್ನಿ ಮೂಕ ಬಾಲಕಿಯನ್ನು ನಾಯಕ ಪಾಸ್‌ಪೋರ್ಟ್ ಗೊಡವೆ ಇಲ್ಲದೇ ಸಾಹಸದ ಮೂಲಕವಾಗಿ ಪಾಕಿಸ್ತಾನಕ್ಕೆ ಬಿಟ್ಟು ಬರುವ ಸಾಹಸಮಯದ ಕಥೆ ವ್ಯಥೆ ತೆರೆಯ ಮೇಲೆ ನೋಡಿ ಮನಃ ಕರಗಿ ಹಲ್ಲಿ ಲೋಚಗುಟ್ಟಿದಂತೆ ಎಲ್ಲರೂ ಲೊಚಗುಟ್ಟುವವರೇ….

ಆದರೆ ಪಾಕಿಸ್ಥಾನದಲ್ಲಿ ಸಿಲುಕಿರುವ ಮೂಕ ಬಾಲಕಿಗೆ ತನ್ನ ತವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಈಕೆ ಪಾಕ್‌ನ ಸೇವಾ-ಸಂಸ್ಥೆಯೊಂದರಲ್ಲಿದ್ದಾಳೆ! ಇದು ಕರಾಚಿಯ ‘ಈದಿ ಚಾರಿಟಿ’ಯ ಮುಖ್ಯಸ್ಥ ‘ಬಿಲ್ಕೀ ಈದಿ’ ಈಕೆಗೆ ಪ್ರೀತಿಯಿಂದ ‘ಗೀತಾ’ ಎಂದು ಕರೆಯುತ್ತಿರುವರು.

ಕಳೆದ ೧೫ ವರ್ಷಗಳಿಂದ ಪಾಕಿಸ್ತಾನದಲ್ಲೇ ಇರುವ ೨೨ ಹರೆಯದ ಗೀತಾಳಿಗೆ ಮಾತು ಬಾರದ ಕಾರಣ ತನ್ನ ಹೆಸರನ್ನಾಗಲಿ ವಿಳಾಸವನ್ನಾಗಲಿ ಇತರೆ ಯಾವುದೇ ಮಾಹಿತಿ ನೀಡಿರುವುದಿಲ್ಲ!

ಆದರೆ ೨೦೧೨ರಲ್ಲಿ ಈಕೆಯನ್ನು ಭವ್ಯ ಭಾರತಕ್ಕೆ ತಲುಪಿಸುವ ಸಲುವಾಗಿ ಬಿಲ್ಕಿ ಈದಿ ಭವ್ಯಭಾರತಕ್ಕೆ ಬಂದು ಈಕೆಯ ಫೋಟೊ ಸಿಕ್ಕಿದ ಸ್ಥಳ ಇತ್ಯಾದಿ ವಿವರಗಳನ್ನು ಪೊಲೀಸ್ಸಿನವರಿಗೆ ತಲುಪಿಸಿ ಬಂದಿದ್ದರು. ಆದರೂ ಈ ಕೆಲಸ ಇನ್ನೂ ಆಗಿಲ್ಲ.

ಈಗ್ಗೆ ೧೫ ವರ್ಷಗಳ ಹಿಂದೆ ರೈಲಿನಲ್ಲಿ ಲಾಹೋರ್‌ಗೆ ಬಂದಿದ್ದ ಈಕೆಯನ್ನು ಪೊಲೀಸ್ಸಿನವರು ವಶಕ್ಕೆ ಪಡೆದಿದ್ದರು. ಮೂಕಿಯಾಗಿದ್ದರಿಂದ ಬಾಲ ಮಂದಿರಕ್ಕೆ ಸೇರಿಸಿದ್ದರು. ಅಲ್ಲಿ ಈಕೆ ಬಹಳ ಸಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಈದಿ ಚಾರಿಟಿಗೆ ಸೇರಿಸಿದ್ದರು. ಅಲ್ಲಿ ಹೊಂದಿಕೊಳ್ಳದ ಕಾರಣ ಬಿಲ್ಕೀ ಈದಿಯವರು ತಮ್ಮ ಮನೆಯಲ್ಲಿ ಈ ಹುಡುಗಿನ ಸಾಕುತ್ತಿರುವರು!

“ಈಕೆ ಹಿಂದಿಲಿ ಏನೇನೋ ಬರೆದು ತೋರಿಸುವಳು ಇಲ್ಲಿನವರಿಗೆ ಅರ್‍ಥವಾಗುತ್ತಿಲ್ಲ. ಕೈಸನ್ನೆ ಬಾಯಿ ಸನ್ನೆಯಲ್ಲಿ ಭಾರತಕ್ಕೆ ಹೋಗಬೇಕೆಂದು ಕಣ್ಣೀರಿಡುತ್ತಾಳೆ! ಇವಳ ವೇಷಭೂಷಣ ಸಂಪ್ರದಾಯವನ್ನು ಗಮನಿಸಿದರೆ ಪಂಜಾಬಿನ ಹಳ್ಳಿ ಹುಡುಗಿಯಿರಬೇಕೆಂದು ಅನಿಸುವುದು ಹಿಂದೂ ದೇವರುಗಳ ಜತೆಯಲ್ಲಿ ಅಲ್ಲಾನನ್ನೂ ಪ್ರಾರ್‍ಥಿಸುವಳು. ಭಾರತಕ್ಕೆ ಮರಳಬೇಕೆಂಬ ಬಲವಾದ ಕೋರಿಕೆ ಎಂದಿಗೆ ಈಡೇರುವುದೋ…” ಎಂದು ಬಿಲ್ಕೀ ಈದಿಯವರು ತಮ್ಮ ಅಳಲನ್ನು ಇತ್ತೀಚೆಗೆ ಸುದ್ದಿ ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ!

ಹಳ್ಳಿ-ತಾಲ್ಲೂಕು-ಜಿಲ್ಲೆ-ರಾಜ್ಯ-ದೇಶ-ವಿದೇಶದ ಗಡಿಭದ್ರತೆಯ ಮುಂದೆ ಸಂಪರ್‍ಕ ಜಾಲತಾಣ ಕೆಲಸ ಮಾಡುವುದು ಎಷ್ಟೊಂದು ಕಷ್ಟವೆಂದು ನಿಜ ಜೀವನದ ಸಿನಿಮಾದಿಂದ ವ್ಯಕ್ತವಾಗುವುದು.

ಬಹುಶಃ ಪುಟ್ಟ ಬಾಲೆಯನ್ನು ಕಳೆದುಕೊಂಡವರು ಇನ್ನು ನಮ್ಮ ಮಗಳು ಸಿಗಲಾರಳು! ಎಂದು ಕೈಚೆಲ್ಲಿ ಮರೆತಿರಬಹುದೆಂದು ಮೇಲುನೋಟಕ್ಕೆ ಕಂಡುಬರುವುದು. ಈ ಘಟನೆ ಸುಖಾಂತ ಕಾಣಬಹುದೆಂದು ಎದುರು ನೋಡುವ…
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...