ಭಾಗ್ಯ

ಓ ನನ್ನ ಪ್ರಿಯ ರಾಧೆ ಕಾಂತ
ನಿನಗಾಗಿ ನಿತ್ಯ ರೋದಿಸುತ್ತಿರುವೆ
ನಿನ್ನಲ್ಲದ ಪ್ರಪಂಚ ಸುಖಗಳೆಲ್ಲ
ಬೇಡವೆಂದು ನಾ ವಿರೋಧಿಸುತ್ತಿರುವೆ

ಕೃಷ್ಣ ನನ್ನಲೇನು ದೋಷ ಕಂಡೆಯೆ
ಮತ್ತೇಕೆ ನಿನ್ನ ರೂಪ ದರ್‍ಶಿಸಲಾರೆ
ನಾನೇನು ಮಾಡಲಾಗದ ಪಾಪಿಯೇ
ಮತ್ತೇಕೆ ನಿನ್ನರೂಪ ತೋರಲಾರೆ

ನನ್ನ ಕಂಗಳ ನೀರು ಧಾರೆಯಾಗಿದೆ
ನನ್ನ ಅಂತಃಕರಣಗಳು ಕರಗಿದೆ
ನನ್ನ ಮನವು ನಿರಾಶವಾದಿಯಾಗಿದೆ
ನನ್ನ ಕಣ್ಣ ನಿನ್ನ ಕಾಣಲು ಸೊರಗಿವೆ

ಕನಸಲ್ಲೂ ಎಲ್ಲ ಸಾಕ್ಷಾತ ನೀ ನಿಲ್ಲವೆ
ಅಂದರೆ ಈ ಜನ್ಮದಲ್ಲಿ ನಾ ನೋಡೆನೇನು
ನಿನ್ನ ಕಾಣದ ಮೇಲೆ ಈ ಜನ್ಮವು
ವ್ಯರ್ಥವಲ್ಲದೆ ಇನ್ನೇನು ಬೇಡನೇನು

ಕೃಷ್ಣ ಇನ್ನು ಎನ್ನ ಕಾಡಿಸದಿರು
ಎಲ್ಲಿದ್ದರೂ ನೀ ನನ್ನಲೆಂದು ಭಾವಿಸುವೆ
ನಿನ್ನ ಕಾಣುವ ಭಾಗ್ಯ ನನ್ನದಾಗಿರಲಿ
ಮಾಣಿಕ್ಯ ವಿಠಲಗೆ ನಮಿಸಿ ಜೀವಿಸುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೬
Next post ಮಲ್ಲಿ – ೨೪

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…