Home / ಕವನ / ಕವಿತೆ / ಜೀವನದೀ ಮಧುಮಾಸಂ

ಜೀವನದೀ ಮಧುಮಾಸಂ

ಜೀವನದೀ ಮಧುಮಾಸಂ
ಬತ್ತುತ ಬಂತು,
ಮನಸಿನ ಮಧುರವಿಕಾಸಂ
ನನೆಯೊಳೆ ಸಂತು;
ಮುಸುರಿದ ಮಕರಂದಪಾನ
ಮೊದವದೆದೆಯ ಭ್ರಮರಗಾನ
ಮೆಚ್ಚರಲೆಂತು? ೭

ಮನೆಗೆಯ್ದಕ್ಕರೆಯ ಪಿಕಂ
ಪಾರಿದುದೆಲ್ಲಿ?
ಗೂಡುಗೊಂಡ ಹಿಂಡು ಶುಕಂ
ಕಾಣಿಸವಿಲ್ಲಿ!
ಅಳಲ ಕಣಜವಿನ್ನು ಸಾಗೆ,
ಹಗಲುದ್ದಕೆ ಮರುಗೆ ಗೂಗೆ,
ಚೀರ್ವುದು ಹಲ್ಲಿ ೧೪

ನಡುಚೈತ್ರದಿ ಮಸಗೆ ಗ್ರೀಷ್ಮ,
ಬೇಯದೆ ಮನಸು?
ಮಗಚದೆ ಮೃಗಜಲದೊಳೂಷ್ಮ
ಕಡಸಿದ ಕನಸು?
೧ಪಾತೆಯೆಲರ ೨ಪಾತಿಯಿಲ್ಲ,
ತರಗೆಲೆಗಳ ೩ಬಟ್ಟೆಯೊಲ್ಲ
ಡೇವುದೊ ನೆನಸು? ೨೧

ತೆರೆಯಿಲ್ಲದ ಕಡಲೊಳಿಲ್ಲಿ
ದಾವ ದಾವರಂ?
ಮರಳಿಲ್ಲದ ಮರುವೊಳಲ್ಲಿ೪
ಕಾವ ಕಾವರಂ!
ಮುಗಿಲಲಿ ರವಿಶಶಿಯ ಕೀಸೆ
ಸಿಡಿವ ಕಿಡಿಯೊ ಕೆಲಮೆ ಸೂಸೆ
ಸೀವ ಸೀವರಂ? ೨೮

ಬೇಗೆ ಮಸುಕಲಿಂತು ಶಾನೆ
ದೂರವೆ ವೃಷ್ಟಿ?
ತಂಬನಿಗಿಂಬಾಗೆ ತಾನೆ
ಮೊಳೆಯದೆ ಸೃಷ್ಟಿ ?
ಹಸುರು ಹಗಲು ಹೊರಳೆ, ಹೊಂಚು
ಹಾಕದೆ ನೂರಾರು ಮಿಂಚು
ಹುಳಗಳ ದೃಷ್ಟಿ? ೩೫

ಒಮ್ಮೆ ಮುಗಿಯಲದೆ ವಸಂತ
ವಿನ್ನಹುದಳವ?
ಒಮ್ಮೆ ಮುಗಿದ ತನುವನಂತ
ರಂ ನಮಗೊಳವೆ?
ಸುಗ್ಗಿ ಮುಗಿದೆ ಮಳೆಯಲ್ಲವೆ?
ತನು ಮುಗಿದಡೆ ಕೆಳೆಯಿಲ್ಲವೆ?-
ಕೆಳೆಗೇನಳಿನೆ? ೪೨
****
೧ ಪಾತರಗಿತ್ತಿ
೨ ಪಾತಿ=ದೋಣಿ
೩ ದಾರಿ
೪ ಅಲ್ಲಿ=ಆಕಾಶದಲ್ಲಿ

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...