Home / ಕವನ / ಕವಿತೆ / ಮಹಾತ್ಮರ ಉಪವಾಸ

ಮಹಾತ್ಮರ ಉಪವಾಸ

[ರಕ್ತಾಕ್ಷಿ ಸಂ| ದ ಭಾದ್ರಪದ ಬ|೫ (೧೪-೯-೧೯೨೪)ಯಿಂದ ಆಶ್ವೀಜ ಶು।೧೧ (೮—೧೦-೧೯೨೪) ಯ ವರೆಗೆ ಮಹಾತ್ಮಾ ಗಾಂಧಿಯವರು ಧಿಲ್ಲಿಯಲ್ಲಿ ಮಾಡಿದ ೨೧ ದಿನಗಳ ಉಪವಾಸ]

ಮಂಜಿನೇಕಾಂತದಲಿ ಶ್ರೀಹರಿಯ ಹಂಬಲಿಸಿ,
ಹೃದಯ ಕ್ಷುಧಯನ್ನೂಡುತೊಡಲ ಹಸಿವಿಂದಂ,
ಮನದ ರಂಭೆಯ ಗೆದ್ದು ೧ಶುಕನಾತನನ್ನೊಲಿಸಿ,
ಭಕ್ತಿಗಂಗೆಯ ಭಾರತದ ತೃಷೆಗೆ ತಂದಂ ೪

೨ಉರುವೇಲೆಯರಳಿಯಡಿಯಲಿ ಚಿರಂ ಹಸಿದರೆದು,
ಮಾರನಂ ಮುರಿದು ಸಂಬುದ್ಧನೆಮಗಗ್ಗಂ
ನಿಬ್ಬಾಣಮೊಂದೆ, ೩ತಣ್ಹೆರಣ್ಯಮಂ ತರಿದು,
ತೋರ್ದನರಿಯಟ್ಟಂಗಿಕದ ಧಮ್ಮಮಗ್ಗಂ೪ ೮

ಕಟ್ಟಳಯೆ ಕುರುಡಿನಲಿ ಬೆಳಕಿನೊಡೆಯನ ಸೋಸು
ವೆಮ್ಮೆದೆಯ ಪರೆಯ ಹೆರೆದೆಮ್ಮೊಳಗೆ ನಿಸದಂ
ನೆಲಸಿರುವ ೫ಸ್ವಾರಾಜ್ಯವೆಮಗೆ ತೋರಿಸೆ ಯೇಸು
೬ಯೋರ್ದನಿನ ಬನದಿ ನಲವತ್ತು ದಿನ ಹಸಿದಂ ೧೨

ಅರಬರೆದೆಯರಬಿಂದ೮ ನೊಂದು, ನವಜೀವನವ
ನುಪವಾಸದಿಂದರಸಿ ೯ಹಿರೆಯ ಕಂದರಿಯಿಂ
ದೇವರಲ್ಲದೆ ದೇವರಿಲ್ಲೆಮ್ಮ ಕಾವನವ
ನೆಂಬ ಸತ್ಯದಿ ಕಂಡನದನರಬರೆರೆಯಂ. ೧೬

ಗುರುವೆ ಇಪ್ಪತ್ತೊಂದು ದಿನದುಪೋಷ್ಯವ ನೋಂತು
ಧಿಲ್ಲಿಯಿಂ ನೀ ಚೆಲ್ಲಿದೀ ಪ್ರೇಮ ಬೀಜಂ
ಭಾರತದ ಭಾಗ್ಯಲತೆಯಾಗಿ ಮಡಲಿಡದೆಂತು?
ಬೆಳಸದೆಂತಮರ ಸೌದರ್ಯನಿದು ಸಾಜಂ? ೨೦
*****

೧ ಪರಿಕ್ಷಿದ್ರಾಯನಿಗೆ ಶ್ರೀಮದ್ಭಾಗವತವನ್ನು ಹೇಳುವ ದ್ವಾರಾ ಶುಕಯೋಗಿ ಭಕ್ತಿಮಾರ್ಗವನ್ನು
ಬೋಧಿಸಿದನು
೨ ಬುದ್ದಗಯೆಯ ಸಮೀಪದಲ್ಲಿರುವ ವನ
೩ ತೃಷ್ಣೆ, ವಿಷಯ ಲಾಲಸೆ
೪ ಅರಿಯೋ ಅಟ್ಟಿಂಗಿಕೋ ಧಮ್ಮ ಮಗ್ಗೊ – The noble eightfold path.
೫ ಸ್ವರ್ಗದ ರಾಜ್ಯ
೬ ಝರೋಸಲೇಮಿನ ಬಳಿಯ ಒಂದು ಹೊಳೆ
೮ ಅರಬು=ಶುಷ್ಕತೆ, ಅಜ್ಞಾನ
೯ ಮಕ್ಕದ ಸಮೀಪದಲ್ಲಿರುವ ‘ಹಿರಾ’ ಎಂಬ ಗುಡ್ಡದ ಗುಹೆಯಲ್ಲಿ ಮಹಮ್ಮದನು ಧ್ಯಾನಿಸುತ್ತಿದ್ದನು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...