Home / ಕವನ / ಕವಿತೆ / ಮಹಾತ್ಮರ ಉಪವಾಸ

ಮಹಾತ್ಮರ ಉಪವಾಸ

[ರಕ್ತಾಕ್ಷಿ ಸಂ| ದ ಭಾದ್ರಪದ ಬ|೫ (೧೪-೯-೧೯೨೪)ಯಿಂದ ಆಶ್ವೀಜ ಶು।೧೧ (೮—೧೦-೧೯೨೪) ಯ ವರೆಗೆ ಮಹಾತ್ಮಾ ಗಾಂಧಿಯವರು ಧಿಲ್ಲಿಯಲ್ಲಿ ಮಾಡಿದ ೨೧ ದಿನಗಳ ಉಪವಾಸ]

ಮಂಜಿನೇಕಾಂತದಲಿ ಶ್ರೀಹರಿಯ ಹಂಬಲಿಸಿ,
ಹೃದಯ ಕ್ಷುಧಯನ್ನೂಡುತೊಡಲ ಹಸಿವಿಂದಂ,
ಮನದ ರಂಭೆಯ ಗೆದ್ದು ೧ಶುಕನಾತನನ್ನೊಲಿಸಿ,
ಭಕ್ತಿಗಂಗೆಯ ಭಾರತದ ತೃಷೆಗೆ ತಂದಂ ೪

೨ಉರುವೇಲೆಯರಳಿಯಡಿಯಲಿ ಚಿರಂ ಹಸಿದರೆದು,
ಮಾರನಂ ಮುರಿದು ಸಂಬುದ್ಧನೆಮಗಗ್ಗಂ
ನಿಬ್ಬಾಣಮೊಂದೆ, ೩ತಣ್ಹೆರಣ್ಯಮಂ ತರಿದು,
ತೋರ್ದನರಿಯಟ್ಟಂಗಿಕದ ಧಮ್ಮಮಗ್ಗಂ೪ ೮

ಕಟ್ಟಳಯೆ ಕುರುಡಿನಲಿ ಬೆಳಕಿನೊಡೆಯನ ಸೋಸು
ವೆಮ್ಮೆದೆಯ ಪರೆಯ ಹೆರೆದೆಮ್ಮೊಳಗೆ ನಿಸದಂ
ನೆಲಸಿರುವ ೫ಸ್ವಾರಾಜ್ಯವೆಮಗೆ ತೋರಿಸೆ ಯೇಸು
೬ಯೋರ್ದನಿನ ಬನದಿ ನಲವತ್ತು ದಿನ ಹಸಿದಂ ೧೨

ಅರಬರೆದೆಯರಬಿಂದ೮ ನೊಂದು, ನವಜೀವನವ
ನುಪವಾಸದಿಂದರಸಿ ೯ಹಿರೆಯ ಕಂದರಿಯಿಂ
ದೇವರಲ್ಲದೆ ದೇವರಿಲ್ಲೆಮ್ಮ ಕಾವನವ
ನೆಂಬ ಸತ್ಯದಿ ಕಂಡನದನರಬರೆರೆಯಂ. ೧೬

ಗುರುವೆ ಇಪ್ಪತ್ತೊಂದು ದಿನದುಪೋಷ್ಯವ ನೋಂತು
ಧಿಲ್ಲಿಯಿಂ ನೀ ಚೆಲ್ಲಿದೀ ಪ್ರೇಮ ಬೀಜಂ
ಭಾರತದ ಭಾಗ್ಯಲತೆಯಾಗಿ ಮಡಲಿಡದೆಂತು?
ಬೆಳಸದೆಂತಮರ ಸೌದರ್ಯನಿದು ಸಾಜಂ? ೨೦
*****

೧ ಪರಿಕ್ಷಿದ್ರಾಯನಿಗೆ ಶ್ರೀಮದ್ಭಾಗವತವನ್ನು ಹೇಳುವ ದ್ವಾರಾ ಶುಕಯೋಗಿ ಭಕ್ತಿಮಾರ್ಗವನ್ನು
ಬೋಧಿಸಿದನು
೨ ಬುದ್ದಗಯೆಯ ಸಮೀಪದಲ್ಲಿರುವ ವನ
೩ ತೃಷ್ಣೆ, ವಿಷಯ ಲಾಲಸೆ
೪ ಅರಿಯೋ ಅಟ್ಟಿಂಗಿಕೋ ಧಮ್ಮ ಮಗ್ಗೊ – The noble eightfold path.
೫ ಸ್ವರ್ಗದ ರಾಜ್ಯ
೬ ಝರೋಸಲೇಮಿನ ಬಳಿಯ ಒಂದು ಹೊಳೆ
೮ ಅರಬು=ಶುಷ್ಕತೆ, ಅಜ್ಞಾನ
೯ ಮಕ್ಕದ ಸಮೀಪದಲ್ಲಿರುವ ‘ಹಿರಾ’ ಎಂಬ ಗುಡ್ಡದ ಗುಹೆಯಲ್ಲಿ ಮಹಮ್ಮದನು ಧ್ಯಾನಿಸುತ್ತಿದ್ದನು

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...