Home / ಕವನ / ಕವಿತೆ / ಬೀಗರ ಹಾಡು

ಬೀಗರ ಹಾಡು

ಸರಕ್ಕ ಸರಿತಲ್ಲ ಬೀಗರ ಸುರಪ್ಪ ತಿಳಿತಲ್ಲ ||ಪ||

ಆನೀ ಬರತಾವಂತ ಆರಽ ಭಣವೀ ಕೊಂಡ|
ಆನೆಲ್ಲಿ ನಿನ್ಮು ದಳವೆಲ್ಲಿ | ಸರಕ್ಕ ||೧||

ಆನೆಲ್ಲಿ ನಿಮ್ಮ ದಳವೆಲ್ಲಿ ಬೀಗಾ|
ಬೋಳ್ಹೋರಿ ಮ್ಯಾಲ ಬರತಾರ | ಸರಕ್ಕ ||೨||

ಒಂಟೀ ಬರತಾವಂತ ಎಂಟಽ ಭಣವೀ ಕೊಂಡ|
ಒಂಟಿಲ್ಲಿ ನಿಮ್ಮ ದಳವೆಲ್ಲಿ | ಸರಕ್ಕ ||೩||

ಒಂಟಿಲ್ಲಿ ನಿಮ್ಮ ದಳವೆಲ್ಲಿ ಬೀಗಾ|
ಕುಂಟ್ಹೋರಿ ಮ್ಯಾಲ ಬರತಾರ | ಸರಕ್ಕ ||೪||

ಬೀಗೂತೊಳ್ಳೆವಳಂತ ದೇವರಮನಿ ಕೊಟ್ಟ|
ದೇವಽರ ಕದ್ದಾಳ ಬಗಲಾಗ | ಸರಕ್ಕ ||೫||

ಬೀಗೂತೊಳ್ಳೆವಳಂತ ಅಡಗೀಯ ಮನಿ ಕೊಟ್|ಟ
ಹೋಳೀಗಿ ಘಳಿಗಿ ಬಗಲಾಗ | ಸರಕ್ಕ ||೬||

ಹೋಳೀಗಿ ಘಳಿಗಿ ಬಗಲಾಗ ಅವರಣ್ಣ|
ನೀಡ್ಲಿಕ್ಕಿಲ್ಲಂದು ಕಸಗೊಂಡ | ಸರಕ್ಕ ||೭||

ಬೀಗೂತೊಳ್ಳೇಕಂತ ಅಡಗೀಯ ಮನಿ ಕೊಟ್ಟ|
ಬಾನಾದ ದುರುಡಿ ಬಗಲಾಗ | ಸರಕ್ಕ ||೮||

ಬಾನೂಅದಽ ದುರುಡಿ ಬಗಲಾಗ ಅವರಣ್ಣಾ|
ನೀಡ್ಲಿಕ್ಕಿಲ್ಲಂತ ಕಸಗೊಂಡ | ಸರಕ್ಕ ||೯||

ಎಲ್ಲಾರು ಕಟ್ಟ್ಯಾರ ಮಲ್ಲಿಗ್ಹೂವಿನ ದಂಡಿ|
ಬೀಗೂತಿ ಕಟ್ಟ್ಯಾಳ ಹುಲ್ಹೊರಿಯ |ಸರಕ್ಕ ||೧೦||

ಬೀಗೂತಿ ಕಟ್ಟ್ಯಾಳ ಹುಲ್ಹೊರಿ ಅವರಣ್ಣಾ|
ಕುದರೀಗಿಲ್ಲಂದು ಕಸಗೊಂಡ | ಸರಕ್ಕ ||೧೧||

ಎಲ್ಲಾರು ಕಟ್ಟ್ಯಾರ ಗುಳ್ಳಬ್ಯಾಳೀ ಮಣಿ|
ಬೀಗೂತಿ ಕಟ್ಟ್ಯಾಳ ಕೈಪಾಳಿ | ಸರಕ್ಕ ||೧೨||

ಬೀಗೂತಿ ಕಟ್ಟ್ಯಾಳ ಕೈವಾಳಿ ಅವರಣ್ಣಾ|
ಬಳಸಲಕಿಲ್ಲಂತ ಕಸಗೊಂಡ | ಸರಕ್ಕ ||೧೩||

ಒಂದ ಅಡಕೀ ಒಡೆದು ಒಂಬತ್ತು ಮದುವಿ ಮಾಡಿ|
ಇಂದೀನ ಖರ್ಚ ಬಲು ಖರ್ಚ | ಸರಕ್ಕ ||೧೪||

ಇಂದೀನ ಖರ್ಚ ಬಲು ಖರ್ಚ ಬೀಗಾ|
ಖಂಬಽದ ತೆಕ್ಕಿ ಬಿಡವಲ್ಲ | ಸರಕ್ಕ ||೧೫||

ಒಂದಽ ಎಲಿಽ ಹರಿದು ಒಂಬತ್ತು ಮದಿವಿಮಾಡಿ|
ನಿನ್ನೀನ ಖರ್ಚ ಬಲು ಖರ್ಚ | ಸರಕ್ಕ ||೧೬||

ನಿನ್ನೀನ ಖರ್ಚ ಬಲು ಖರ್ಚ ಬೀಗಾ|
ಹಂದಽರ ತೆಕ್ಕಿ ಬಿಡವಲ್ಲ| ಸರಕ್ಕ ||೧೭||

ಹಂದಾವೂರದಾಗ ಮಂದಿ ಬಂದು ಎಟ್ಟೊತ್ತಾಯ್ತು |
ಕಂಬಳಿಲ್ಲೇನ ಇವರಲ್ಲಿ| ಸರಕ್ಕ ||೧೮||

ಕಂಬಳಿಲ್ಲೇನ ಇವರಲಿ ಬೀಗುತಿ|
ಕಂಬ್ಳಿಗ್ಹೋಗ್ಯಾಳ ಮನಿ ಮನಿ | ಸರಕ್ಕ ||೧೯||

ಹಂದರಽದಾಗ ಮಂದಿ ಬಂದೆಟ್ಟೊತ್ತಾಯ್ತು|
ಕೂಕಂ ಇಲ್ಲೇನ ಇವರಲ್ಲಿ | ಸರಕ್ಕ ||೨೦||

ಕೂಕಂ ಇಲ್ಲೇನ ಇವರಲ್ಲಿ ಬೀಗುತಿ|
ಕೂಕಮ್ಮಿಗ್ಹೋಗ್ಯಾಳ ಅಂಗಡೀಗಿ | ಸರಕ್ಕ ||೨೧||

ಆಚ್ಛೀಕ ಹೊಲಗೇರಿ ಇಚ್ಚೀಕ ಮಾದರಗೇರಿ|
ನಟ್ಟನಡಬರಕ ಶಿನಪೂಜೆ | ಸರಕ್ಕ ||೨೨||

ನೆಟ್ಟಽನಡೆಬರಕ ಶಿನವೂಜೆ ಆಗಟಿಗೆ|
ನಾಲತ್ತ ನಾಯಿ ಬೊಗಳ್ಯಾವ | ಸರಕ್ಕ ||೨೩||
*****

“ಹೊಳೆ ದಾಟಿದ ಮೇಲೆ ಅಂಬಿಗರ ಮಿಂಡ” ಎನ್ನುವಂತೆ, ಲಗ್ನದ ಮುಖ್ಯ ವಿಧಾನಗಳೆಲ್ಲ ಮುಗಿದ ಮೇಲೆ, ಮದುಮಕ್ಕಳ ಮೆರವಣಿಗೆ ಹೊರಟ ಕಾಲಕ್ಕೆ ಬೀದಿಯಲ್ಲಿ ಎರಡೂ ಕಡೆಯ ಬೀಗರ ಪಕ್ಷದಿಂದ ಹೆಣ್ಣುಮಕ್ಕಳು ಎರಡು ತಂಡಗಳಾಗಿ ಒಬ್ಬರನ್ನೊಬ್ಬರು ಅಪಹಾಸ್ಯಮಾಡುತ್ತಾರೆ. ಅದರ ಮೂಲಕ ಆಗಿನ ಮಟ್ಟಿಗೆ ಕದನಗಳೂ ಆಗುತ್ತವೆ. ನಮಗೇನೋ ಇಂತಹ ಮಾತು ಅಸಹ್ಯಕರವಾಗಿ ಕಾಣುವುದು ಸಹಜ. ಆದರೆ ಜೀವನದ ಸರ್ವ ಅಂಗಗಳನ್ನೂ ಒಳಗೊಂಡ `ಭೂಮಾ’ಪೂಜಕರಾದ ಪ್ರಾಚೀನರು ಈ ತರಹದ ನಗೆಚಾಟಿಕೆಗೂ ತಕ್ಕ ಸ್ಥಾನವನ್ನೇ ಕೊಟ್ಟದ್ದಾರೆಂದು ತೋರುತ್ತದೆ.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಸರಕ್ಕ ಸರಿತಲ್ಲ=ಕಾರ್ಯವೆಲ್ಲ ಸರಕ್ಕನೆ ಮುಗಿಯಿತಲ್ಲ. ಸುರಪ್ಪ=ಸ್ವರೂಪ. ಭಣವಿ=ಮೇವಿನ ಒಟ್ಟಲು. ಬೋಳ್ಹೋರಿ=ಕೊಂಬು ಮುರಿದ ಹೋರಿ. ಹೊರಿಹುಲ್ಲು=ಬಾಚಿಕೊಳ್ಳದ ಮುಂಗುರುಳು. ಗುಳ್ಳ=ಮಂಗಲಸೂತ್ರ. ಕೈಪಾಳಿ=ಹಿಡಿಕೆಯ ಬಟ್ಟಲು. ಎಟ್ಟೊತ್ತಾಯ್ತು=ಎಷ್ಟೋ ಹೊತ್ತಾಯ್ತು. ಕೂಕಂ-ಕುಂಕುಮ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...