Home / ಕಥೆ / ಕಾದಂಬರಿ / ಪಾಪಿಯ ಪಾಡು – ೫

ಪಾಪಿಯ ಪಾಡು – ೫

ಜೀನ್ ವಾಲ್ಜೀನನು ತನ್ನ ಊರಿಗೆ ಬಂದಕೂಡಲೇ ನೆಟ್ಟನೆ ಫಾಂಟೈನಳು ಮರಣಾವಸ್ಥೆಯಲ್ಲಿ ಮಲಗಿದ್ದ ಕೊಠಡಿಗೆ ಹೋದನು. ಜೇವರ್ಟನೂ ಹಿಂಬಾಲಿಸಿ ಬಂದಿದ್ದನು ; ಅವನನ್ನು ದಸ್ತಗಿರಿ ಮಾಡಿ ದನು, ಜೀನ್ ವಾಲ್ಜೀನನು, ತಾನು ಕೋಸೆಟ್ಟಳನ್ನು ಕರೆತರು ವುದಕ್ಕಾಗಿ ಹೋಗಿರುವುದಕ್ಕೂ ಮತ್ತು ತನ್ನ ಇತರ ಆಡಳಿತ ಗಳನು, ಕ್ರಮ ಪಡಿಸಿಕೊಳುವದಕ್ಕೂ ಸಹ ಮೂರು ದಿನಗಳ ಅವಧಿಯನ್ನು ಕೊಡಬೇಕೆಂದು ಜೇವರ್ಟನನ್ನು ಬಹಳವಾಗಿ ಬೇಡಿ ಕೊಂಡನು. ಆದರೆ ಜೇವರ್ಟನು ಮಹಾ ಕಠಿಣನಾಗಿ, ಆಗು ವುದೇ ಇಲ್ಲವೆಂದು ತಿರಸ್ಕರಿಸಿದನು. ಇವರಿಬ್ಬರಿಗೂ ನಡೆಯು ತಿದ್ದ ಈ ಚರ್ಚೆಯಿಂದ ಎದೆಯೊಡೆದು ಫಾಲಟೈನಳು ಇವರೆದು ರಲ್ಲಿಯೇ ಪ್ರಾಣವನ್ನು ಬಿಟ್ಟಳು. ಜೇವರ್ಟನು ಜೇನ್ ವಾಲ್ಜೀನ ನನ್ನು ನೆಟ್ಟಗೆ ಸೆರೆಮನೆಗೆ ಕರೆದುಕೊಂಡು ಹೋದನು.

ಜೀನ್ ವಾಲ್ಜೀನನಿಗೆ ತಾನು ಆವಶ್ಯಕವಾಗಿ ಗಮನಿಸ ಬೇಕಾಗಿದ್ದ ಕೆಲವು ವಿಷಯಗಳಿದ್ದುವು. ಹೇಗೊ ಸೆರೆಮನೆಯಿಂದ ತಪ್ಪಿಸಿಕೊಂಡು ಬಂದನು. ಅದೇ ದಿನ ಸಾಯಂಕಾಲ, ಅವನ ಮನೆಯ ಬಾಗಿಲು ಕಾಯುವ ಮುದುಕಿಯು, ಅವನು ಬಾಗಿಲಿಗೆ ಬಂದುದನ್ನು ಕಂಡು ಪರಮಾಶ್ಚರ್ಯಪಟ್ಟಳು.

ಅವಳು ಆಶ್ಚರ್ಯ ಪಟ್ಟುದನ್ನು ನೋಡಿ, ಆಗ ಅವನು, ‘ ನಾನು ಸೆರೆಮನೆಯ ಕಿಟಿಕಿಯ ಕಂಬಿಯೊಂದನ್ನು ಮುರಿದು, ಅದರೊಳಗಿಂದ ಮಾಳಿಗೆಯ ಮೇಲಕ್ಕೆ ಒಂದು, ಅಲ್ಲಿಂದ ಕೆಳಕ್ಕೆ ಧುಮ್ಮಿಕ್ಕಿ, ತಪ್ಪಿಸಿಕೊಂಡು ಓಡಿಬಂದೆನು,’ ಎಂದು ತನ್ನ ವಿಷಯ ವನ್ನು ವಿವರಿಸಿ ಹೇಳಿ, ‘ಈಗ ನಾನು ನನ್ನ ಕೊಠಡಿಗೆ ಹೋಗು ವೆನು. ಸಿಸ್ಟರ್ ಸಿಂಪ್ಲಿಸಳನ್ನು ನಾನು ನೋಡಬೇಕಾಗಿದೆ. ಆಕೆಯನ್ನು ಕರೆದುಕೊಂಡು ಬಾ ಹೋಗು,’ ಎಂದು ಹೇಳಿಕಳು ಹಿಸಿದನು. ಮುದುಕಿಯ ಅದರಂತೆ ಬೇಗನೆ ಹೋದಳು.

ಅವನು ತನ್ನ ಕೊಠಡಿಗೆ ಹೋಗಿ, ಉಡುಪುಗಳನ್ನಿಟ್ಟಿದ್ದ ಕಪಾಟದಿಂದ ಒಂದು ಅಂಗಿಯನ್ನು ತೆಗೆದು, ಅದನ್ನು ತುಂಡು ತುಂಡಾಗಿ ಹರಿದು, ಅದರಲ್ಲಿ ಬೆಳ್ಳಿಯ ಮೇಣದ ಬತ್ತಿಯನ್ನಿಡುವ ಕೊಳವೆಯನ್ನು ಸುತ್ತಿ ಕಟ್ಟಿದನು. ಇಷ್ಟಾದರೂ ಇವನಲ್ಲಿ ಆತುರವಾಗಲಿ ಕಾತರವಾಗಲಿ ಇರಲಿಲ್ಲ.

ಎರಡಾವೃತ್ತಿ ಮೆಲ್ಲನೆ ಬಾಗಿಲನ್ನು ತಟ್ಟಿದ ಶಬ್ದವು ಕೇಳಿ ಒಂತು. ಅವನು, ‘ ಒಳಗೆ ಬನ್ನಿ,’ ಎಂದನು.

ಸಿಸ್ಟರ್ ಸಿಂಪ್ಲಿಸಳು ಒಳಗೆ ಬಂದಳು.

ಮಾತನಾಡುವುದಕ್ಕೆ ಪ್ರಯತ್ನಿಸಿದರೂ, ಒಂದೆರಡು ಅರ್ಧ ವಿಲ್ಲದ ಮಾತುಗಳನ್ನು ಆಕೆ, ತಬ್ಬಿಬ್ಬಾಗಿ, ಆಡುವುದೇ ಕಷ್ಟವಾ ಯಿತು. ಕಡೆಗೆ ಬಹು ಪ್ರಯತ್ನದಿಂದ, ‘ ಗ್ರಾಮಾಧಿಕಾರಿ ಮಾನ್ ಸಿಯುರವರು ಇನ್ನೊಂದಾವೃತ್ತಿ ಈ ನಿರ್ಭಾಗ್ಯಳ ಮನೆಗೆ ಬಂದು ತಮ್ಮ ಕಡೆಯ ದರ್ಶನವನ್ನು ಕೊಡಲಾಗುವುದಿಲ್ಲವೇ ?’ ಎಂದಳು.

ಅದಕ್ಕೆ ಅವನು, ” ಇಲ್ಲ, ನನ್ನನ್ನು ಬೆನ್ನಟ್ಟಿ ಬಂದಿದ್ದಾರೆ. ನಾನು ನಿಮ್ಮ ಕೊಠಡಿಗೆ ಬಂದರೆ ಅಲ್ಲಿಯೇ ನನ್ನನ್ನು ಹಿಡಿದುಬಿಡು ವರು. ಇದರಿಂದ ನಿಮಗೆ ಬಹಳ ತೊಂದರೆಯಾಗುವುದು,’ ಎಂದನು.

ಇದನ್ನು ಹೇಳುವಷ್ಟರೊಳಗಾಗಿ ಮಹಡಿಯ ಮೇಲೆ ಗಟ್ಟಿ ಯಾದ ಶಬ್ದವು ಕೇಳಿಸಿತು. ಮೆಟ್ಟಲನ್ನು ಹತ್ತುವ ಗದ್ದಲವೂ, ಬಾಗಿಲು ಕಾಯುವ ಮುದುಕಿಯು ತನ್ನ ಶಕ್ತಿಯಿದ್ದಷ್ಟೂ ಗಟ್ಟಿಯಾಗಿ ಆರ್ತ ಧ್ವನಿಯಿಂದ ಕೂಗಿಕೊಳ್ಳುತ್ತಿದ್ದುದೂ ಕೇಳಿ ಸಿತು.

ಆ ಮುದುಕಿಯು, ‘ ಮಹಾ ಸ್ವಾಮಿ, ದೇವರ ಸಾಕ್ಷಿಯಾ ಗಿಯ ಪ್ರಮಾಣಮಾಡಿ ಹೇಳುತ್ತೇನೆ. ಈ ದಿನ ಹಗಲೆಲ್ಲ ನಾ ನಿಲ್ಲಿಯೇ ಕಾದಿದ್ದೇನೆ. ಕ್ಷಣ ಕಾಲವೂ ನಾನು ಈ ಬಾಗಿಲನ್ನು ಬಿಟ್ಟು ಹೋಗಲಿಲ್ಲ. ಹಗಲಿನಲ್ಲಾಗಲಿ, ಈ ಸಾಯಂಕಾಲದಲ್ಲಿಯಾಗಲಿ, ಯಾರೊಬ್ಬರೂ ಇಲ್ಲಿಗೆ ಬರಲೂ ಇಲ್ಲ; ಒಳಗೆ ಹೋಗ ಲೂ ಇಲ್ಲ’ ಎಂದು ಕೂಗಿಕೊಂಡಳು.

ಅದಕ್ಕೆ ಒಬ್ಬನು, ಆದರೆ ಈ ಕೊಠಡಿಯಲ್ಲಿ ದೀಪವಿರು ವುದಲ್ಲಾ!” ಎಂದನು. ಒಳಗಿದ್ದವರಿಗೆ ಇದು ಜೇನರ್ಟನ ಧ್ವನಿ ಯೆಂದು ಗೊತ್ತಾಯಿತು.

ಆ ಕೊಠಡಿಯ ಬಾಗಿಲನ್ನು ತೆರೆದಾಗ ಕದವು ಒಳಗಡೆಯ ಬಲ ಭಾಗದ ಗೋಡೆಯ ಮಲೆಗೆ ಅಡ್ಡಲಾಗಿ ಮುಚ್ಚಿಕೊಳ್ಳು ವಂತೆ ಇತ್ತು. ಜೀನ್ ವಾಲ್ಜೀನನು ದೀಪವನ್ನೂದಿ ತಾನು ಈ ಬಾಗಿಲ ಹಿಂದಣ ಮೂಲೆಯಲ್ಲಿ ಅವಿತುಕೊಂಡನು.

ಸಿಸ್ಟರ್‌ ಸಿಂಪ್ಲಿ ಸಳುಮೇಜಿನ ಮುಂದೆ ಮೊಣಕಾಲೂರಿ ದೇವರ ಪ್ರಾರ್ಥನೆ ಮಾಡಲು ಕುಳಿತಳು.

ಬಾಗಿಲು ತೆರೆಯಿತು.

ಜೇವರ್ಟನು ಒಳಗೆ ಬಂದನು. ಅನೇಕ ಜನರು ಪಿಸುಗುಟ್ಟುತ್ತಿರುವುದೂ ಮತ್ತು ಬಾಗಿಲ ಮುದುಕಿಯು, ಒಳಗೆ ಬರುವವರನ್ನು ತಡೆದು, ಕೂಗಿಕೊಳ್ಳುತ್ತಿ ದುದೂ ಸಹ ಕೊಠಡಿಯಲ್ಲಿರುವವರಿಗೆ ಚೆನ್ನಾಗಿ ಕೇಳಿ ಬಂತು. ಸಿಂಪ್ಲಿಸಳು ಕಣ್ಣನ್ನು ತೆರೆಯಲಿಲ್ಲ. ದೇವರ ಪ್ರಾರ್ಥನೆಯಲ್ಲಿಯೇ ಇದ್ದಳು. ಇನ್ನೊಂದು ಮೇಣದ ಬತ್ತಿಯು ಮಂಕಾಗಿ ಉರಿ ಯುತ್ತಿತ್ತು,

ಈ ಸ್ಥಿತಿಯನ್ನು ನೋಡಿ, ಜೇವರ್ಟನಿಗೆ, ಅಲ್ಲಿಂದ ಹೊರಟು ಹೋಗೋಣವೆಂಬ ಭಾವವು ಹುಟ್ಟಿತು.

ಆದರೆ ಕರ್ತವ್ಯವು ಅಲ್ಲಿಂದ ಹೊರಡದಂತೆ ಇವನನ್ನು, ಬಲಾತ್ಕರಿಸಿ ತಡೆಯಿತು. ಇದರಿಂದ, ಇಲ್ಲಿಯೇ ನಿಂತು ಆಕೆ ಯನ್ನು ಒಂದು ಪ್ರಶ್ನೆಯನ್ನಾದರೂ ಕೇಳಿಯೇ ಬಿಡೋಣ ವೆಂಬ ಎರಡನೆಯ ಆಲೋಚನೆಯು ಇವನ ಮನಸ್ಸಿನಲ್ಲಿ ಹುಟ್ಟಿತು.

ಸಿಸ್ಟರ್‌ ಸಿಂಪ್ಲಿಸಳು ತನ್ನ ಜನ್ಮಾವಧಿಯಾಗಿ ಸುಳ್ಳನ್ನು ಹೇಳಿದವಳೇ ಅಲ್ಲ, ಈ ವಿಚಾರವು ಜೇವರ್ಟನಿಗೆ ತಿಳಿದಿತ್ತು. ಇದ ಕ್ಕಾಗಿಯೇ ಅವನು ಈಕೆಯಲ್ಲಿ ಬಹಳ ಗೌರವವನ್ನಿಟ್ಟಿದ್ದನು.

‘ ಅಮ್ಮ ! ಈ ಕೊಠಡಿಯಲ್ಲಿ ನೀವು ಒಬ್ಬರೇ ಇರುವಿರಾ?’ ಎಂದನು.

ಈ ಸಮಯಕ್ಕೆ ಬಾಗಿಲು ಕಾಯುವ ಆ ಬಡ ಮುದುಕಿಗೆ ಕೈಕಾಲುಗಳು ಗಡಗಡನೆ ನಡುಗಿ ಅವಳು ಒಂದು ಕ್ಷಣ ಮಾತ್ರ ತಲ್ಲಣಿಸಿ ಹೋದಳು.

ಸಿಂಪ್ಲಿಸಳು ಕಣ್ಣೆತ್ತಿ ನೋಡಿ, ‘ಅಹುದು,’ ಎಂದು ಉತ್ತರ ಕೊಟ್ಟಳು.

ಅನಂತರ ಜೇವರ್ಟನು, ‘ ತಾಯಿಾ, ನಾನು ಮತ್ತೆ ಕೇಳುವೆ ನೆಂದುಬೇಸರ ಪಡಕೂಡದು, ನನ್ನನ್ನು ಕ್ಷಮಿಸಬೇಕು. ಇದು ನನ್ನ ಕರ್ತವ್ಯವು ಈ ದಿನ ಒಬ್ಬ ಪುರುಷನು ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗಿರುವನು. ನಾವು ಅವನನ್ನು ಹುಡುಕು ತ್ತಿರುವೆವು. ಅವನ ಹೆಸರು ಜೀನ್ ವಾಲ್ಜೀನ್’ ಎಂದು. ಅವ ನನ್ನು ನೀವು ಈ ದಿನ ಸಾಯಂಕಾಲ ಇಲ್ಲಿ ನೋಡಲಿಲ್ಲವೇ ? ‘ ಎಂದು ಮತ್ತೆ ಕೇಳಿದನು.

ಸಿಂಪ್ಲಿಸಳು, ‘ಇಲ್ಲ,’ ಎಂದುತ್ತರ ಕೊಟ್ಟಳು.

ಆಕೆ ಸುಳ್ಳನ್ನು ಹೇಳಿದಳು. ಒಂದರ ಮೇಲೊಂದರಂತೆ ಎರಡು ಸುಳ್ಳುಗಳನ್ನು ಒಟ್ಟಿಗೆ, ಸ್ವಲ್ಪವೂ ಅನುಮಾನಿಸದೆ, ಸುಳ್ಳಿ ನಲ್ಲಿ ನಿಪುಣಳಂತೆ ಬೇಗನೆ ಹೇಳಿಬಿಟ್ಟಳು.

‘ತಾಯೀ, ಕ್ಷಮಿಸಬೇಕು,’ ಎಂದು ಹೇಳಿ ಜೀವರ್ಟನು ಗೌರವದಿಂದ ಬಾಗಿ ನಮಸ್ಕರಿಸಿ ಹೊರಟು ಹೋದನು.

ಸತ್ಯವಾದಿನಿಯಾಗಿದ್ದ ಸಿಂಪ್ಲಿಸಳ ಈ ದೃಢವಾದ ಉತ್ತರವು ಸತ್ಯವೆಂದು ಜೇವರ್ಟನ ಮನಸ್ಸಿನಲ್ಲಿ ನಿರ್ಧರವಾಯಿತು. ಇದ ರಿಂದ ಅಲ್ಲಿ ಆಗತಾನೇ ಆರಿಸಿ ಮೇಜಿನ ಮೇಲೆ ಹೊಗೆಯಾಡು ತ್ತಿದ್ದ ದೀಪದ ವಿಷಯವಾಗಿಯೂ ಅವನಿಗೆ ಅನುಮಾನವೂ ಬರಲಿಲ್ಲ. ಒಂದು ಗಂಟೆಯು ಕಳೆದ ಮೇಲೆ, ಅದೇ ರಾತಿ), ಕತ್ತಲೆ ಯಲ್ಲಿ, ಮರಗಳ ಕೆಳಗೆ ಒಬ್ಬ ಪುರುಷನು ಮಾ……ಸರ್‌……. ಮಾ……ಮನೆಯಿಂದ ಪ್ಯಾರಿಸ್ ನಗರದ ಕಡೆಗೆ ಬೇಗಬೇಗನೆ ಹೋಗುತ್ತಿದ್ದನು. ಇವನು ಯಾರು ? ಜೀನ್ ವಾಲ್ಜೀನನೆ ! ಇವನು ಒಂದು ಗಂಟನ್ನು ಹೊತ್ತುಕೊಂಡು ಹೋಗುತ್ತಿದ್ದ ನೆಂತಲೂ, ಮೇಲೆ ವಸ್ತ್ರವನ್ನು ಹೊದ್ದಿದ್ದನೆಂತಲೂ, ಇವನನ್ನು ಸಂಧಿಸಿದ ಇಬ್ಬರು ಮೂವರು ಬಂಡಿಹೊಡೆಯುವವರು ಸಾಕ್ಷ್ಯ ಹೇಳಿದುದರ ಮೇಲೆ ಇವನ ಮೇಲೆ ಅಪರಾಧವು ಸ್ಪಿರಪಟ್ಟಿತು. ಇವನು ತನ್ನ ಹಣವನ್ನೂ ಮೇಣದ ಬತ್ತಿಯ ಕೊಳವೆಗಳನ್ನೂ ಹೂತಿಡಲು ಬೈರಿ ಪಟ್ಟಣದ ಬಳಿಯ ಅರಣ್ಯಕ್ಕೆ ಹೋಗು ತಿದ್ದನೆಂಬುದು ಅವರಿಗೆ ಗೊತ್ತಿರಲಿಲ್ಲ.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...