ಶ್ರೀ’ಯವರನ್ನು ನೆನೆದು

ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು
ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು
ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ
ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ
ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ
ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿದಾಡೆ.

ಪಂಪ ರನ್ನರ ಬಸವ ಲಕ್ಷ್ಮೀಶ ಹರಿಹರರ
ವರಕುಮಾರವ್ಯಾಸ ರಾಘವ ಪುರಂದರರ
ಕವಿಗಳಾಡುಂಬೊಲದಿ ಸರಸ ಗೋಷ್ಠಿಯೊಳೊಲಿದು
ಕನ್ನಡದ ಕರ್ಚಾಳುಗಳ ನಡೆಸಿ ತಾ ನಲಿದು
ಕನ್ನಡಾಂಬೆಯ ಪೆರ್ಮೆ ಕೂರಮೆಗಳ ನೆನೆನೆನೆದು
ನುಡಿವನದಕೋ ನಮ್ಮ ಶ್ರೀ ಕವೀಂದ್ರಂ ನಿಂದು.

ನಲಿನಲಿದು ಸಾಹಿತ್ಯದಧಿದೇವಿ ದರ್ಶನದಿ
ಒಲಿಸಿ ನಲ್ನುಡಿಯಿಂದ ತಾಯ ತೊಡೆಯಲಿ ಮುದದಿ
ಮಂಡಿಸುತಲೊರೆಸಿರ್ದ ತಾಯ್ಕೊರಗ ಮರೆಸಿರ್ದ
ವೆತೆಗಳಂ ತೊರೆಯಿಸುತ ಮತ್ತೊಮ್ಮೆ ನಗಿಸಿರ್ದ
ಕನ್ನಡದ ತಾಯ್ನೋಟಮನ್ನೊರೆದು ಸೊಗಸಿರ್ದ
ಬಿಜಗೆಯ್ಸಿ ದೇವಿಯಂ ಕೀರ್ತಿಯನ್ ಪಾಡಿದನ್.

ತನ್ನಂತೆ ತರುಣರಂ ಕಿರಿಯರಂ ಹಿರಿಯರಂ
ಕನ್ನಡದ ನುಡಿಸೇವೆಯಲಿ ನಡೆಸಿ ಅಣಿಯರಂ
ಧರ್ಮದಲಿ ಕರ್ಮದಲಿ ತ್ಯಾಗದಲಿ ಭೋಗದಲಿ
ತೋರಿಸಿದ ಕರ್ಣಾಟ ಕವಿತಿಲಕ ನಡೆಗಳಲಿ
ಅಗಲಿದ ಕಣ್ಣೀರ ಹೊಳೆಹರಿಸಿ ಮತಿ ಮರೆಸಿ
ನಮ್ಮೆಲ್ಲರೊಲವೊಯ್ದು ಮರೆಯಾದನತಿ ಸರಸಿ.

ಎಲ್ಲಿರಲಿ ಎಂತಿರಲಿ ಅವರ ನಡೆನುಡಿ ಮನವು
ಗಾಂಭೀರ್ಯ ರಸಜೀವ ನಗು ಹಾಸ್ಯ ಚೆಲುವೊಲವು
ಭೀಷ್ಮರಾ ಹಿರಿತನವ ತಳೆದು ತಾ ಹೂಳೆದಿಹರು.
ಸರ್ವರನು ನಡಯಿಸುತ ಮಾರ್ಗದಲಿ-ಮೆರೆದಿಹರು.
ಕರ್ಣಾಟ ಕಣ್ನೋಟ ತಣ್ನೋಟಮಂ ಕಂಡು
ಶ್ರೀಯೋಲಿಯೆ ಎಚ್ಚರಾದುದು ನಮಗೆ ಸವಿಯುಂಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂದರ್ಶನ
Next post ವೃಷಭಾವತಿ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…