Home / ಕವನ / ಕವಿತೆ / ಶ್ರೀ’ಯವರನ್ನು ನೆನೆದು

ಶ್ರೀ’ಯವರನ್ನು ನೆನೆದು

ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು
ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು
ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ
ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ
ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ
ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿದಾಡೆ.

ಪಂಪ ರನ್ನರ ಬಸವ ಲಕ್ಷ್ಮೀಶ ಹರಿಹರರ
ವರಕುಮಾರವ್ಯಾಸ ರಾಘವ ಪುರಂದರರ
ಕವಿಗಳಾಡುಂಬೊಲದಿ ಸರಸ ಗೋಷ್ಠಿಯೊಳೊಲಿದು
ಕನ್ನಡದ ಕರ್ಚಾಳುಗಳ ನಡೆಸಿ ತಾ ನಲಿದು
ಕನ್ನಡಾಂಬೆಯ ಪೆರ್ಮೆ ಕೂರಮೆಗಳ ನೆನೆನೆನೆದು
ನುಡಿವನದಕೋ ನಮ್ಮ ಶ್ರೀ ಕವೀಂದ್ರಂ ನಿಂದು.

ನಲಿನಲಿದು ಸಾಹಿತ್ಯದಧಿದೇವಿ ದರ್ಶನದಿ
ಒಲಿಸಿ ನಲ್ನುಡಿಯಿಂದ ತಾಯ ತೊಡೆಯಲಿ ಮುದದಿ
ಮಂಡಿಸುತಲೊರೆಸಿರ್ದ ತಾಯ್ಕೊರಗ ಮರೆಸಿರ್ದ
ವೆತೆಗಳಂ ತೊರೆಯಿಸುತ ಮತ್ತೊಮ್ಮೆ ನಗಿಸಿರ್ದ
ಕನ್ನಡದ ತಾಯ್ನೋಟಮನ್ನೊರೆದು ಸೊಗಸಿರ್ದ
ಬಿಜಗೆಯ್ಸಿ ದೇವಿಯಂ ಕೀರ್ತಿಯನ್ ಪಾಡಿದನ್.

ತನ್ನಂತೆ ತರುಣರಂ ಕಿರಿಯರಂ ಹಿರಿಯರಂ
ಕನ್ನಡದ ನುಡಿಸೇವೆಯಲಿ ನಡೆಸಿ ಅಣಿಯರಂ
ಧರ್ಮದಲಿ ಕರ್ಮದಲಿ ತ್ಯಾಗದಲಿ ಭೋಗದಲಿ
ತೋರಿಸಿದ ಕರ್ಣಾಟ ಕವಿತಿಲಕ ನಡೆಗಳಲಿ
ಅಗಲಿದ ಕಣ್ಣೀರ ಹೊಳೆಹರಿಸಿ ಮತಿ ಮರೆಸಿ
ನಮ್ಮೆಲ್ಲರೊಲವೊಯ್ದು ಮರೆಯಾದನತಿ ಸರಸಿ.

ಎಲ್ಲಿರಲಿ ಎಂತಿರಲಿ ಅವರ ನಡೆನುಡಿ ಮನವು
ಗಾಂಭೀರ್ಯ ರಸಜೀವ ನಗು ಹಾಸ್ಯ ಚೆಲುವೊಲವು
ಭೀಷ್ಮರಾ ಹಿರಿತನವ ತಳೆದು ತಾ ಹೂಳೆದಿಹರು.
ಸರ್ವರನು ನಡಯಿಸುತ ಮಾರ್ಗದಲಿ-ಮೆರೆದಿಹರು.
ಕರ್ಣಾಟ ಕಣ್ನೋಟ ತಣ್ನೋಟಮಂ ಕಂಡು
ಶ್ರೀಯೋಲಿಯೆ ಎಚ್ಚರಾದುದು ನಮಗೆ ಸವಿಯುಂಡು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...