Home / ಕವನ / ಕವಿತೆ / ಪ್ರತೀಕ್ಷೆ

ಪ್ರತೀಕ್ಷೆ

ಮರುಕಕ್ಕೆ ಪ್ರೇಮಕ್ಕೆ ಮುಚ್ಚಿದೆ ಬಾಗಿಲು
ಗಾಳಿ ಆಡದ ಕೋಣೆ
ಬಿಟ್ಟ ಉಸಿರೇ ಮತ್ತೆ ಒಳಹೊಕ್ಕುವ
ಸರಾಗ ಸರೋಗ ವಾತಾಯನ ವ್ಯವಸ್ಥೆ
ಅನುತಾಪ ಅನುಕಂಪಕ್ಕೆ ಭದ್ರ ಬಂದೋಬಸ್ತ್ ಬೀಗ
ತೆರೆಯದ ಕಿಟಕಿಗಳೊಳಗೆ ಕೊಳೆಯುವ ರಾಜ ವೈಭೋಗ
ಶಿಣ್ಣು, ಬೇಡು, ಗಂಟೆಗಳ ಸಜೀವ ಆರ್ತನಾದ
ಒಳ್ಳೆಯ ಆಲಾಪ ಪ್ರಾಯೋಗಿಕ
ಕತೆ ಕವಿತೆ ಕಾದಂಬರಿಗಳಿಗೆ
ಕರುಳಬಳ್ಳಿಯ ಕತ್ತರಿಸಿದ ಪ್ರನಾಳ
ನಿರ್ನಾಳ ಶಿಶು ಪಶುಗಳಿಗೆ
ಕೃತಕ ಸುಂದರ ಹೂವುಗಳ ಇಲ್ಲದ ಪರಿಮಳ
ಸತ್ತ ಜೀವದ ಒಳಗೆ ಕುಪಿಸದ ಶ್ವಾಸ
ಅರೆ ಜೀವ ತೂಕಡಿಕೆ
ಜೀಕಳಿಕೆ

ಇಂಥಲ್ಲಿ
ನಿಂಥಲ್ಲೇ ಇನ್ನಿಲ್ಲವಾಗುವ ನಾನು
ನನ್ನ ಕೊಳೆಯುವ ಹೆಣ
ಆಗದ ಸಂಸ್ಕಾರ
ಮುಚ್ಚಿದ ಮೂಗುಗಳ ಒಳಗೂ
ದಾಳಿ ಇಡುವ ದುರ್ನಾತ
ಓಡೋಡಿ ಬರುವುವು ನಾಯಿ
ಕುಕ್ಕಲು ಹದ್ದು
ಎಲೆ ಇರದ ರೆಂಬೆಯ ಮೇಲೆ ಕಾಯುತ್ತಿದ್ದು
ಇದೋ ಈಗ
ನುಗ್ಗುವ ಫಟ ಫಟ ಸದ್ದು

ಆಗ ತಕ್ಷಣ ಎದ್ದು
ಬಡಿಯುವೆ ಬಾಗಿಲು
ತೆರೆಯದಿದ್ದರೆ ಒದ್ದೇ ಬಿಡುವೆ
ಇನ್ನೆಷ್ಟು ದಿನ ಇಲ್ಲಿ ಕಾಯುತ್ತಿರಲಿ?
ಪುನಃ ಪುನಃ ನಾನು ಸಾಯುತ್ತಿರಲಿ ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...