Home / ಕವನ / ಕವಿತೆ / ಧಾರಿಣಿ

ಧಾರಿಣಿ

ಧಗೆಯ ಒಡಲು ಈ ಧಾರಿಣಿಯ ಮಡಿಲು
ಕ್ಷಮಯಾ ಧರಿತ್ರಿ ಎಂಬುದೆಲ್ಲಾ ಹಸಿ ಹಸಿಸುಳ್ಳು,
ಬೇಯುತ್ತಿರುವ ಒಡಲ ಬೆಂಕಿಯ
ಹಳದಿ ನೀರಾಗಿ ಉಗುಳುತ್ತಾಳೆ.
ನನ್ನ ಮೇಲಿನ ಹಸಿರು ಬರೀ ತೋರಿಕೆ
ಎಂದು ಸ್ಪಷ್ಟವಾಗೇ ಬೊಗಳುತ್ತಾಳೆ.

ಆದರೂ ಇವಳಿಗಂಟಿ ತಾವೂ ತಿರುಗುತ್ತಿರುವ
ಈ ಹುಲು ಮಾನವರಿಗೇನೋ ಭ್ರಮೆ
ನಾವು ತಿರುಗುತ್ತಿಲ್ಲ ನಿಂತಿದ್ದೇವೆ.
ಇವಳ ತಲೆ ಮೇಲೇ ಮನೆ ಮಠ ಕಟ್ಟಿದ್ದೇವೆ.
ದೇಗುಲದ ಗೋಪುರ ಗೂಟ ಹೊಡೆದಿದ್ದೇವೆ
ಈ ಇವಳ ಓಲಾಡುವ ಒಡಲಿಗೇ ಲಂಗರು
ಹಡಗ ಬಿಗಿದಿದ್ದೇವೆ.

ಅವಳು ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ
ನಿದ್ರಿಸಿ ಎದ್ದಿದ್ದೇವೆ. ಕೋಳಿ ಕೂಗಿಸಿದ್ದೇವೆ
ಕಾಫಿ ಕಾಯಿಸಿದ್ದೇವೆ. ಆ ಸೂರ್ಯನಿಗೆ ನಮಸ್ಕಾರ
ಹಾಕಿದ್ದೇವೆ ಕಾಲಿಗೆ ಕೈಗೆ ನೀರು ಹೊಯ್ದಿದ್ದೇವೆ.
ಅವನ ನಿನ್ನ ಈ ಮಸೆದಾಟದ ನಡುವೆ
ನಾವು ಮುಗಿಸಬೇಕಿದೆ ನಮ್ಮ ದಿನಚರಿ
ನಿಮ್ಮ ಮಿಲನದ ಏರುಪೇರಿಗೇ ಆ ಸೂರ್‍ಯ
ಬಸವಳಿದು ನಿನ್ನೊಡಲಿನ ಬೆಂಕಿಗೆ ಸಮ ಸಮ
ತನ್ನೊಡಲಿನ ಬೆಂಕಿ ಸುರಿದು ನಿನ್ನಧರಾಮೃತ
ಪಾನದಿಂದ ಕೆಂಪೇರಿ ಕುಡುಕನಂತೆ ಬೀಳುತ್ತಾನೆ.

ಆಗ ನಿನಗಾದ ನಿರಾಸೆಯೇ ಕತ್ತಲಾಗಿ
ಹಬ್ಬಿ ನಿನ್ನ ತಬ್ಬುತ್ತದೆ. ಮತ್ತೆ ಅವನ, ಆ
ಹಳೇ ಗಂಡನ ಪತ್ತೆಯಾಗುವವರೆಗೆ ನಿನಗೆ
ತೂಕಡಿಕೆ ಆ ಅರೆ ಎಚ್ಚರದಲ್ಲಿ ನಿನ್ನ ಮೈ ಮೇಲೆ
ಎಲ್ಲಾ ಅವ್ಯವಹಾರ, ಒಂದೆರಡೆ ಜಾವ, ಮತ್ತೆ
ಇಬ್ಬನಿಯಲಿ ಮೈ ತೊಳೆದು ಹೂ ಸುಗಂಧ ಪೂಸಿ
ಕಣ್ಣರಳಿಸಿ ಅವನು ಬಂದನೆಂದರೆ ನಿನಗೆ
ಸಡಗರ ಹೊಸ ಯೌವನ, ಯುಗಯುಗ
ಗಳಿಂದ ನಡೆದ ಮೈಥುನ
ಬೇಸರವೇ ಬಾರದ ಮುಪ್ಪೇ ಇರದ
ನಿಮ್ಮಿಬ್ಬರ ಈ ಮಿಲನ.
*****
-ಗಾಂಧಿಬಜಾರ್ ಪತ್ರಿಕೆ

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...